‘ಮಹರ್ಷೀ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯೂ.ಎ.ಎಸ್ (ಯುನಿವರ್ಸಲ್ ಅವ್ರಾ ಸ್ಕ್ಯಾನರ್) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಕೊರೋನಾ ರೋಗಾಣುಗಳಿಂದ ನಿರ್ಮಾಣವಾದ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಪಡೆಯಲು ಸಪ್ತರ್ಷಿಗಳ ಆಜ್ಞೆಯಂತೆ ಮಾಡಿದ ಆಧ್ಯಾತ್ಮಿಕ ಉಪಾಯದ ವೇಳೆ ಮಾಡಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಸೌ. ಮಧುರಾ ಕರ್ವೆ
ಶ್ರೀ. ರಾಜ ಕರ್ವೆ

‘ಕೊರೋನಾ ರೋಗಾಣುಗಳಿಂದ ನಿರ್ಮಾಣವಾಗಿರುವ ಆಪತ್ಕಾಲದ ಪರಿಸ್ಥಿತಿಯಿಂದ ೨೫ ಮಾರ್ಚ್ ೨೦೨೦ ರಿಂದ ಭಾರತದಲ್ಲಿ ಎಲ್ಲ ಕಡೆಗಳಲ್ಲಿ ‘ಲಾಕ್‌ಡೌನ್ವನ್ನು ವಿಧಿಸಲಾಗಿದೆ. ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ೩.೪.೨೦೨೦ರಂದು ಬೆಳಗ್ಗೆ ೯ ಗಂಟೆಗೆ ದೇಶವನ್ನು ಉದ್ದೇಶಿಸಿ, “೫.೪.೨೦೨೦ ರ ರಾತ್ರಿ ೯ ಗಂಟೆಗೆ ಭಾರತೀಯರು ತಮ್ಮ ಮನೆಯಲ್ಲಿನ ವಿದ್ಯುತ್ ದೀಪಗಳನ್ನು ೯ ನಿಮಿಷಗಳ ಕಾಲ ಆರಿಸಿ ಆಗ ಎಣ್ಣೆಯ ದೀಪವನ್ನು ಅಥವಾ ಮೇಣಬತ್ತಿಗಳನ್ನು ಪ್ರಜ್ವಲಿಸಬೇಕು, ಅದೂ ಸಾಧ್ಯವಿಲ್ಲದಿದ್ದರೆ ತಮ್ಮ ಸಂಚಾರವಾಣಿಯ ದೀಪವನ್ನು ಪ್ರಜ್ವಲಿಸಬೇಕು ಎಂದಿದ್ದರು. ಅದರಂತೆ ಎಲ್ಲ ದೇಶವಾಸಿಯರು ಮಾಡಿದರು. ಚೆನ್ನೈ(ತಮಿಳುನಾಡು)ಯ ‘ಸಪ್ತರ್ಷಿ ಜೀವನಾಡಿ ವಾಚಕರಾದ ಪೂ. (ಡಾ.) ಉಲಗನಾಥನ್‌ರವರ ಮಾಧ್ಯಮದಿಂದ ಸಪ್ತರ್ಷಿಗಳು ಮುಂದಿನ ಆಧ್ಯಾತ್ಮಿಕ ಉಪಾಯವನ್ನು ಮಾಡಲು ಹೇಳಿದರು. ಅವರು “೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಸೇರಿ ಹರಳೆಣ್ಣೆಯ ೯ ಹಣತೆಗಳನ್ನು ಪ್ರಜ್ವಲಿಸಬೇಕು. ಈ ೯ ಹಣತೆ ಗಳನ್ನು ನವಗ್ರಹಗಳಿಗಾಗಿ ಪ್ರಜ್ವಲಿಸಬೇಕು. ‘ಕೊರೋನಾ ರೋಗಾಣು’ಗಳಿಂದ ನಿರ್ಮಾಣವಾದ ಜಾಗತಿಕ ಅಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಲು’ ಈ ಆಧ್ಯಾತ್ಮಿಕ ಉಪಾಯ ಮಾಡಬೇಕು ಎಂದು ಹೇಳಿದರು. ಅದರಂತೆ ಸದ್ಗುರುಗಳಿಬ್ಬರೂ ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಹರಳೆಣ್ಣೆಯ ೯ ದೀಪಗಳನ್ನು ಪ್ರಜ್ವಲಿಸಿದರು. ಹರಳೆಣ್ಣೆಯ ದೀಪಗಳನ್ನು ಪ್ರಜ್ವಲಿಸಿದ ಬಳಿಕ ಅವುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಯು.ಎ.ಎಸ್ (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.

ವಾಚಕರಿಗೆ ಸೂಚನೆ

ಸ್ಥಳದ ಅಭಾವದಿಂದಾಗಿ ಈ ಲೇಖನದಲ್ಲಿ ‘ಯೂ.ಎ.ಎಸ್. (‘ಯು.ಟಿ.ಎಸ್.) ಉಪಕರಣದ ಪರಿಚಯ, ಉಪಕರಣದ ಮೂಲಕ ಮಾಡ ಬೇಕಾದ ಪರೀಕ್ಷಣೆಯ ಘಟಕಗಳು ಹಾಗೂ ಅವುಗಳ ವಿವರಣೆ, ಘಟಕದ ಪ್ರಭಾವಲಯವನ್ನು ಅಳೆಯುವುದು. ‘ಪರೀಕ್ಷಣೆಯ ಪದ್ಧತಿ ಹಾಗೂ ‘ಪರೀಕ್ಷಣೆ ಒಂದೇ ರೀತಿಯಲ್ಲಿ ಬರಲು ತೆಗೆದುಕೊಂಡ ಕಾಳಜಿ ಈ ನಿತ್ಯದ ಅಂಶಗಳನ್ನು ಸನಾತನ ಸಂಸ್ಥೆಯ https://bit.ly/UASResearch ಈ ಲಿಂಕ್‌ನಲ್ಲಿ ನೀಡಲಾಗಿದೆ. ಈ ಲಿಂಕ್‌ನಲ್ಲಿ ಕೆಲವು ಅಕ್ಷರಗಳು ಕ್ಯಾಪಿಟಲ್ (Capital)ನಲ್ಲಿವೆ.

೧. ಪರೀಕ್ಷಣೆಯ ಸ್ವರೂಪ

ಈ ಪರೀಕ್ಷಣೆಯಲ್ಲಿ ಹರಳೆಣ್ಣೆಯ (ನವಗ್ರಹ ಗಳಿಗಾಗಿ) ೯ ದೀಪಗಳಿಗೆ (ಮಣ್ಣಿನ ಹಣತೆಗಳಿಗೆ) ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಸ್ಪರ್ಶ ಮಾಡುವ ಮೊದಲು ಹಾಗೂ ಅವರು ಹಸ್ತಸ್ಪರ್ಶ ಮಾಡಿದ ಬಳಿಕ, ಸದ್ಗುರುಗಳಿಬ್ಬರೂ ದೀಪ ಪ್ರಜ್ವಲಿಸಿದ ಬಳಿಕ ಹಾಗೂ ಆ ದೀಪಗಳು ಶಾಂತವಾದ ಬಳಿಕ (ಆರಿದ ಬಳಿಕ) ಈ ದೀಪಗಳ ‘ಯು.ಎ.ಎಸ್ ಉಪಕರಣದ ಮೂಲಕ ಮಾಡಿದ ಅಳತೆಗಳನ್ನು ನೋಂದಾಯಿಸಿಕೊಳ್ಳಲಾಯಿತು. ಆ ಎಲ್ಲ ಅಳತೆಗಳ ನೋಂದಣಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೨. ಮಾಡಿದ ಅಳತೆಗಳ ನೋಂದಣಿಗಳು ಹಾಗೂ ಅವುಗಳ ವಿವೇಚನೆ

೨ ಅ. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ : ಪರೀಕ್ಷಣೆಯಲ್ಲಿನ ನವಗ್ರಹಗಳ ದೀಪಗಳಲ್ಲಿ ‘ಇನ್ಫ್ರಾರೆಡ್ ಹಾಗೂ ‘ಅಲ್ಟ್ರಾವೈಲೆಟ್ ಎರಡೂ ನಕಾರಾತ್ಮಕ ಊರ್ಜೆಗಳು ಕಂಡು ಬರಲಿಲ್ಲ.

೨ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ  ಊರ್ಜೆ ಇದ್ದೇ ಇರುತ್ತದೆ, ಎಂದೇನಿಲ್ಲ.

೨ ಆ ೧. ಪರೀಕ್ಷಣೆಯಲ್ಲಿನ ನವಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯ

ಟಿಪ್ಪಣಿ ೧ – (೨-೧=) ೩. ಇದರಲ್ಲಿನ ೨ ಅಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಮತ್ತು ೧ ಅಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತಸ್ಪರ್ಶ ಮಾಡುವ ಮೊದಲು.

ಟಿಪ್ಪಣಿ ೨ – ಪರೀಕ್ಷಣೆ ಸ್ಥಳದ ಜಾಗ ಕಡಿಮೆ ಇದ್ದುದ್ದರಿಂದ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವನ್ನು ೨೫ ಮೀಟರ್‌ಗಳಿಗಿಂತ ಹೆಚ್ಚು ಅಳೆಯಲು ಸಾಧ್ಯವಾಗಲಿಲ್ಲ.

ಪಕ್ಕದ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು

೧. ಪರೀಕ್ಷಣೆಯಲ್ಲಿನ ಎಲ್ಲ ದೀಪಗಳಲ್ಲಿ ಮೊದಲೇ ಸಕಾರಾತ್ಮಕ ಊರ್ಜೆಯಿತ್ತು.

೨. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಆ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು; ಆದರೆ ಪರೀಕ್ಷಣೆಯಲ್ಲಿನ ಇತರ ದೀಪಗಳಿಗೆ ಹೋಲಿಸಿದರೆ ಶನಿ, ಕೇತು, ರಾಹು ಹಾಗೂ ಗುರು ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಯಿತು. (ಇದರ ಹಿಂದಿನ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆಯನ್ನು ‘ಅಂಶ ೩ ಇ ಇದರಲ್ಲಿ ನೀಡಲಾಗಿದೆ.)

೩. ಸದ್ಗುರುಗಳಿಬ್ಬರೂ ದೀಪಗಳನ್ನು ಪ್ರಜ್ವಲಿಸಿದ ಬಳಿಕ ದೀಪಗಳ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು. (ಪರೀಕ್ಷಣೆ ಸ್ಥಳದ ಜಾಗ ಕಡಿಮೆ ಇದ್ದುದ್ದರಿಂದ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೨೫ ಮೀಟರ್‌ಗಳಿಗಿಂತ ಹೆಚ್ಚು ಅಳೆಯಲು ಸಾಧ್ಯವಾಗಲಿಲ್ಲ.)

೪. ದೀಪಗಳು ಆರಿದ ಬಳಿಕವೂ ಅವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆಯಿತ್ತು; ಆದರೆ ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಳ, ಕೇತೂ ಹಾಗೂ ಬುಧ ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಹೆಚ್ಚಿದ್ದವು. (ಇದರ ಹಿಂದಿನ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆಯನ್ನು ‘ಅಂಶ ೩ಉ ರಲ್ಲಿ ನೀಡಲಾಗಿದೆ.)

೨ ಇ. ಪ್ರಭಾವಲಯಗಳ (ಟಿಪ್ಪಣಿ) ಸಂದರ್ಭದಲ್ಲಿ ಮಾಡಿದ ಆಳತೆಗಳ ನೋಂದಣಿಗಳ ವಿವೇಚನೆ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಳಿಯು ಸಾಧಾರಣ ೧ ಮೀಟರ್‌ನಷ್ಟು ಇರುತ್ತದೆ.

ಟಿಪ್ಪಣಿ – ಪ್ರಭಾವಲಯ (ಔರಾ) : ವ್ಯಕ್ತಿಯ ಸಂದರ್ಭದಲ್ಲಿ ಅವನ ಎಂಜಲು ಮತ್ತು ವಸ್ತುಗಳ ಸಂದರ್ಭದಲ್ಲಿ ಅವುಗಳ ಮೇಲಿನ ಧೂಳಿನ ಕಣಗಳು ಅಥವಾ ಅವುಗಳ ಸ್ವಲ್ಪ ಭಾಗವನ್ನು ‘ಮಾದರಿ ಎಂದು ಬಳಸಿ ಆ ವ್ಯಕ್ತಿಯ ಅಥವಾ ವಸ್ತುವಿನ ‘ಪ್ರಭಾವಲಯವನ್ನು ಅಳೆಯುತ್ತಾರೆ.

೨ ಈ ೧. ಪರೀಕ್ಷಣೆಯಲ್ಲಿನ ನವಗ್ರಹಗಳ ದೀಪಗಳ ಒಟ್ಟು ಪ್ರಭಾವಳಿ

ಟಿಪ್ಪಣಿ – ಪರೀಕ್ಷಣೆಸ್ಥಳದ ಜಾಗ ಕಡಿಮೆ ಇದ್ದುದ್ದರಿಂದ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವನ್ನು ೨೫ ಮೀಟರ್‌ಗಳಿಗಿಂತ ಹೆಚ್ಚು ಅಳೆಯಲು ಸಾಧ್ಯವಾಗಲಿಲ್ಲ.

ಮೇಲೆ ನೀಡಿರುವ ಎಲ್ಲ ಅಂಶಗಳ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩ರಲ್ಲಿ ನೀಡಲಾಗಿದೆ.

೩. ಅಳತೆಗಳ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಅವುಗಳ (ದೀಪಗಳ) ಸಕಾರಾತ್ಮಕ ಊರ್ಜೆ ಬಹಳಷ್ಟು ಹೆಚ್ಚಾಗುವುದರ ಹಿಂದಿನ ಕಾರಣ : ಜ್ಯೋತಿಷ್ಯಶಾಸ್ತ್ರಕ್ಕನುಸಾರ ಕಳೆದ ಕೆಲವು ತಿಂಗಳುಗಳಿಂದ ವಿಶಿಷ್ಟ ಗ್ರಹಸ್ಥಿತಿಯು ಈಗಿನ ಆಪತ್ಕಾಲಕ್ಕೆ ಪೂರಕವಾಗಿದೆ. ಸಪ್ತರ್ಷಿಗಳು ‘ಕೊರೋನಾ ರೋಗಾಣು’ಗಳಿಂದ ನಿರ್ಮಾಣವಾದ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು’ ಈ ದೀಪಗಳನ್ನು ಪ್ರಜ್ವಲಿಸಲು ಹೇಳಿದ್ದರು. ‘ಪರಾತ್ಪರ ಗುರು ಪದವಿಯಲ್ಲಿರುವ ಸಮಷ್ಟಿ ಸಂತರು (ಪರಾತ್ಪರ ಗುರು ಡಾ. ಆಠವಲೆಯವರು) ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿ ಅವುಗಳಲ್ಲಿ ಚೈತನ್ಯವನ್ನು ಸಂಕ್ರಮಿತಗೊಳಿಸಿದರು; ಆದ್ದರಿಂದ ಅವುಗಳಿಗೆ (ದೀಪಗಳಿಗೆ) ಕಾರ್ಯವನ್ನು ಮಾಡಲು ಆವಶ್ಯಕ ಬಲ ಪ್ರಾಪ್ತವಾಯಿತು. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ದೀಪಗಳಲ್ಲಿ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು.

೩ ಆ. ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳರವರು ನವಗ್ರಹಗಳ ದೀಪಗಳನ್ನು ಪ್ರಜ್ವಲಿಸಿದ ಬಳಿಕ ಅವುಗಳ (ದೀಪಗಳ) ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಾಗುವುದರ ಹಿಂದಿನ ಕಾರಣ : ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳರವರು ನವಗ್ರಹಗಳಿಗೆ ಭಾವಪೂರ್ಣ ಪ್ರಾರ್ಥನೆ ಮಾಡಿ ೯ ದೀಪಗಳನ್ನು ತುಂಬಾ ಭಾವಪೂರ್ಣವಾಗಿ ಪ್ರಜ್ವಲಿಸಿದರು. ಇದರಿಂದ ನವಗ್ರಹಗಳ ದೀಪಗಳಲ್ಲಿ ನವಗ್ರಹಗಳ ಚೈತನ್ಯ ಆಕರ್ಷಿಸಿ ಅವು ಕಾರ್ಯನಿರತವಾದವು. ಸದ್ಗುರುಗಳಿಬ್ಬರೂ ದೀಪಗಳನ್ನು ಪ್ರಜ್ವಲಿಸಿದ ಬಳಿಕ ದೀಪಗಳ ಸಕಾರಾತ್ಮಕ ಊರ್ಜೆ ಬಹಳ ಹೆಚ್ಚಾಯಿತು.

೩ ಇ. ಮರುದಿನ ಬೆಳಗ್ಗೆ ದೀಪಗಳು ಆರಿದ ಬಳಿಕವೂ (ಆರಿದ ಬಳಿಕ) ಅವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಕಂಡು ಬಂದಿತು: ಸದ್ಗುರುಗಳಿಬ್ಬರೂ ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಪ್ರಜ್ವಲಿಸಿದ ದೀಪಗಳು ಮರುದಿನ ಬೆಳಗ್ಗೆ ೭ ರಿಂದ ೧೧ ಗಂಟೆಯ ತನಕ ನಿಧಾನವಾಗಿ ಆರಿದವು. ದೀಪಗಳು ಆರಿದ ಬಳಿಕವೂ ಅವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆಯಿರುವುದು ಪರೀಕ್ಷಣೆಯಿಂದ ಕಂಡು ಬಂದಿತು.  ಇದಕ್ಕೆ  ಕಾರಣ- ‘ದೀಪಗಳಿಗೆ ಸಮಷ್ಟಿ ಸಂತರು ಮಾಡಿದ ಚೈತನ್ಯಮಯ ಹಸ್ತಸ್ಪರ್ಶ, ನವಗ್ರಹಗಳು ಚೈತನ್ಯವನ್ನು ಆಕರ್ಷಿಸಿ ಅದನ್ನು ಪ್ರಕ್ಷೇಪಿಸುವ ಕ್ಷಮತೆ, ಅದೇರೀತಿ ಸನಾತನ ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣದಿಂದ ದೀಪಗಳಲ್ಲಿ ತುಂಬಾ ಚೈತನ್ಯ ನಿರ್ಮಾಣವಾಯಿತು. ಮರುದಿನ ಬೆಳಗ್ಗೆ ೭ ರಿಂದ ೧೧ ಗಂಟೆಯ ತನಕ ನವಗ್ರಹಗಳ ದೀಪಗಳು ನಿಧಾನವಾಗಿ ಆರಿದವು, ಆದರೂ ಅವುಗಳಲ್ಲಿ ತುಂಬಾ ಚೈತನ್ಯ ಉಳಿದಿತ್ತು; ಆದ್ದರಿಂದ ಅವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೩ ಈ. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶನಿ, ಕೇತೂ, ರಾಹು ಹಾಗೂ ಗುರು ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗುವುದು, ಇದರ ಹಿಂದಿನ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ : ‘ಶನಿ, ಕೇತೂ, ರಾಹು ಹಾಗೂ ಗುರು ಈ ಗ್ರಹಗಳು ಸಮಷ್ಟಿಗೆ ಸಂಬಂಧಪಟ್ಟ ಗ್ರಹಗಳಾಗಿವೆ. ಮೇದಿನಿಯ (ರಾಷ್ಟ್ರದ) ಭವಿಷ್ಯವನ್ನು ಹೇಳುವಾಗ ಈ ೪ ಗ್ರಹಗಳ ವಿಚಾರವನ್ನು ಪ್ರಮುಖವಾಗಿ ಮಾಡಲಾಗುತ್ತದೆ;  ಏಕೆಂದರೆ ಈ ೪ ಗ್ರಹಗಳು ಮಂದಗತಿಯಲ್ಲಿ ಸೂರ್ಯನ ಸುತ್ತಲೂ ಸುತ್ತುತ್ತಿರುತ್ತವೆ. ಶನಿ ಗ್ರಹಕ್ಕೆ ಒಂದು ರಾಶಿಯಲ್ಲಿ ಸುತ್ತಲು ೩೦ ತಿಂಗಳುಗಳು ಬೇಕಾಗುತ್ತವೆ, ರಾಹು ಮತ್ತು ಕೇತೂ ಇವುಗಳಿಗೆ ೧೮ ತಿಂಗಳು ಮತ್ತು ಗುರು ಗ್ರಹಕ್ಕೆ ೧೧ ತಿಂಗಳುಗಳು ಬೇಕಾಗುತ್ತವೆ. ಆದ್ದರಿಂದ ದೊಡ್ಡ ಸಾಮಾಜಿಕ ಘಟನೆಗಳ ಅಧ್ಯಯನ ಮಾಡಲು ಮುಖ್ಯವಾಗಿ ಈ ೪ ಗ್ರಹಗಳ ವಿಚಾರವನ್ನು ಮಾಡಲಾಗುತ್ತದೆ. ಡಿಸೆಂಬರ್ ೨೦೧೯ ರ ಕೊನೆಯ ವಾರದಲ್ಲಿ ಕೊರೋನಾ ರೋಗಾಣುಗಳು ಹರಡಲು ಪ್ರಾರಂಭವಾದವು. ಆ ಸಮಯದಲ್ಲಿ ಶನಿ, ಕೇತೂ ಹಾಗೂ ಗುರು ‘ಧನುರಾಶಿಯಲ್ಲಿ ಒಟ್ಟಿಗೆ ಬಂದಿದ್ದವು. ಈ ಮೂರೂ ಗ್ರಹಗಳ ಮೇಲೆ ರಾಹುವಿನ ದೃಷ್ಟಿ, ಅಂದರೆ ಪ್ರಭಾವವಿತ್ತು. ಈ ಅಶುಭ ಯೋಗವು ‘ಕೊರೋನಾ ಜಾಗತಿಕ ರೋಗಕ್ಕೆ ಕಾರಣವಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು; ಆದರೆ ಇತರ ಗ್ರಹಗಳ ದೀಪಗಳಿಗೆ ಹೋಲಿಸಿದಾಗ ಶನಿ, ಕೇತು, ರಾಹು ಹಾಗೂ ಗುರು ಈ ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು. ಇದರಿಂದ ಗಮನಕ್ಕೆ ಬರುವುದೇನೆಂದರೆ, ‘ಶನಿ, ಕೇತು, ರಾಹು ಹಾಗೂ ಗುರು ಈ ೪ ಗ್ರಹಗಳ ಅಶುಭ ಪ್ರಭಾವವು ಕಡಿಮೆ ಆಯಿತು

೩ ಉ. ಮರುದಿನ ಬೆಳಗ್ಗೆ ದೀಪಗಳು ಆರಿದ ಬಳಿಕ ಅವುಗಳಲ್ಲಿ ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಳ, ಕೇತು ಹಾಗೂ ಬುಧ ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಹೆಚ್ಚಾಗಿರುವುದರ ವಿಶ್ಲೇಷಣೆ : ಶುಕ್ರ ಗ್ರಹ ‘ಆನಂದ, ಮಂಗಳ ಗ್ರಹ ‘ಪರಾಕ್ರಮ-ವಿಜಯ, ಬುಧ ಗ್ರಹ ‘ಸಂಚಾರ ಹಾಗೂ ಕೇತು ಗ್ರಹ ‘ಮುರಿಯುವುದು ಇವುಗಳ ಕಾರಕವಾಗಿವೆ. ಈಗ ‘ಕೊರೋನಾ ಸಾಂಕ್ರಾಮಿಕ ರೋಗದ ಸರಪಳಿಯನ್ನು ಆದಷ್ಟು ಬೇಗ ಮುರಿದು ಅದನ್ನು ನಾಶ ಮಾಡುವುದು ಮಹತ್ವದ್ದಾಗಿದೆ; ಇದರಿಂದ ಮಾನವರ ಮೇಲೆ ಬಂದಿರುವ ಸಂಕಟವು ದೂರವಾಗುವುದು. ‘ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಳ, ಕೇತು ಹಾಗೂ ಬುಧ ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಿದೆ, ಇದು ‘ಕೊರೋನಾ ರೋಗದ ವಿರುದ್ಧ ನಡೆಯುವ ಯುದ್ಧದಲ್ಲಿ ಭಾರತಕ್ಕೆ ವಿಜಯಶ್ರೀ ದೊರೆತು ‘ಕೊರೋನಾ ರೋಗಾಣುಗಳು’ ಸಂಪೂರ್ಣ ನಾಶವಾಗುವುದು, ಎಂಬುದರ ನಿರ್ದೇಶಕವಾಗಿದೆ.

೩ ಊ. ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ದೀಪವನ್ನು ಪ್ರಜ್ವಲಿಸುವುದರ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಮಹತ್ವ : ೫.೪.೨೦೨೦ ರಂದು ರಾತ್ರಿ ೯ ಘಂಟೆಗೆ ‘ತ್ರಯೋದಶಿ ತಿಥಿಯಿತ್ತು. ತ್ರಯೋದಶಿಗೆ ‘ಜಯಾ ಎಂಬ ಸಂಜ್ಞೆಯಿದೆ, ಅಂದರೆ ಅದು ವಿಜಯವನ್ನು ಪ್ರದಾನಿಸುವ ತಿಥಿಯಾಗಿತ್ತು. ವಾಯುವಿನ ಮಾಧ್ಯಮದಿಂದ ವೇಗವಾಗಿ ಹರಡುತ್ತಿರುವ ‘ಕೊರೋನಾ ರೋಗಾಣುಗಳ’ ಪ್ರಭಾವವನ್ನು ಕಡಿಮೆಗೊಳಿಸಲು ಹಾಗೆಯೇ, ಮಾನವನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತೇಜತತ್ತ್ವ ಹಾಗೂ ಪೃಥ್ವಿತತ್ತ್ವವು ಆವಶ್ಯಕವಾಗಿದೆ. ೫.೪.೨೦೨೦ ರಂದು ಚಂದ್ರನು ಸಿಂಹರಾಶಿಯಲ್ಲಿದ್ದನು. ಸಿಂಹವು ಕ್ಷತ್ರೀಯ ವರ್ಣದ (ತೇಜತತ್ತ್ವದ) ಹಾಗೂ ಸ್ಥಿರ ಸ್ವಭಾವದ (ಪೃಥ್ವಿತತ್ತ್ವ)ದ ರಾಶಿಯಾಗಿದೆ. ಹಾಗೆಯೇ ರಾತ್ರಿ ೯ ಗಂಟೆಗೆ ಚಂದ್ರ ‘ಪೂರ್ವಫಾಲ್ಗುನೀ ಎಂಬ ತೇಜತತ್ತ್ವದ ನಕ್ಷತ್ರದಲ್ಲಿದ್ದನು. ಆ ದಿನ ರವಿವಾರವಾಗಿತ್ತು. ಇದರಿಂದ ಗಮನಕ್ಕೆ ಬರುವುದೇನೆಂದರೆ, ತೇಜತತ್ತ್ವ್ವ ಹಾಗೂ ಪೃಥ್ವಿತತ್ತ್ವ ಇವುಗಳ ಅಧಿಕ್ಯವಿರುವ ಮುಹೂರ್ತದಲ್ಲಿ ಸಪ್ತರ್ಷಿಗಳು ನವಗ್ರಹಗಳಿಗಾಗಿ ೯ ಹಣತೆಗಳನ್ನು ಪ್ರಜ್ವಲಿಸಲು ಹೇಳಿದ್ದರು. ಅದೇ ರೀತಿ ಸಂಪೂರ್ಣ ದೇಶವು ಸಹ ಆ ದಿನ ರಾತ್ರಿ ೯ ಗಂಟೆಗೆ ದೀಪಗಳನ್ನು ಪ್ರಜ್ವಲಿಸಿತು.

ಇದರಿಂದ ಸೂಕ್ಷ್ಮಸ್ತರದಲ್ಲಿ ವಾತಾವರಣದಲ್ಲಿನ ತಮೋಗುಣದ ಪ್ರಭಾವ ಕಡಿಮೆಯಾಗಲು ಸಹಾಯವಾಯಿತು ಮತ್ತು ಸ್ಥೂಲ ಸ್ತರದಲ್ಲಿ ಭಾರತೀಯರಲ್ಲಿ ಕೊರೋನಾ ರೋಗಾಣುಗಳ ವಿರುದ್ಧ ಹೋರಾಡಲು ಆವಶ್ಯಕವಾಗಿರುವ ಆತ್ಮಬಲ ವೃದ್ಧಿಯಾಯಿತು. – ಶ್ರೀ. ರಾಜ ಕರ್ವೇ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೪. ಆಪತ್ಕಾಲದಲ್ಲಿಯೂ ವಿಶ್ವಕಲ್ಯಾಣಕ್ಕಾಗಿ ಆಯಾ ವೇಳೆ ಆಧ್ಯಾತ್ಮಿಕ ಉಪಾಯಗಳನ್ನು ಹೇಳಿ ಮಾರ್ಗದರ್ಶನ ಮಾಡುವ ಮಹಾನ ಋಷಿಮುನಿಗಳ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆ

೩೦.೩.೨೦೨೦ ರಂದು ಬೆಳಗ್ಗೆ ೧೧ ಗಂಟೆಗೆ ಪೂ. (ಡಾ.) ಉಲಗನಾಥನ್‌ರವರು ಸಪ್ತರ್ಷಿಗಳ ಸಂದೇಶವನ್ನು ತಿಳಿಸಿದರು. ಅವರು ಸಪ್ತರ್ಷಿಗಳು ಕೂಡಲೇ ಗೋವಾದಲ್ಲಿರುವ ಸನಾತನದ ರಾಮನಾಥಿ ಆಶ್ರಮದಲ್ಲಿ ದಕ್ಷಿಣ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿ ಒಂದೊಂದು ಮಣ್ಣಿನ ಹಣತೆಯನ್ನಿಡಲು ಹೇಳಿದ್ದಾರೆ. ಈ ಹಣತೆಗಳು ಎಂದಿಗಿಂತ ಸ್ವಲ್ಪ ದೊಡ್ಡದಾಗಿ ಇರಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿಡುವ ಹಣತೆಯಲ್ಲಿ ನೀರು, ಸ್ವಲ್ಪ ಅರಶಿನದ ಪುಡಿ ಹಾಗೂ ೪-೫ ಬೇವಿನ ಎಲೆ ಗಳನ್ನು ಹಾಕಬೇಕು. ಉತ್ತರ ದಿಕ್ಕಿಗೆ ಮುಖ ಮಾಡಿಡುವ ಹಣತೆಯಲ್ಲಿ ಹರಳೆಣ್ಣೆ ಹಾಗೂ ಹತ್ತಿಯ ಬತ್ತಿಯನ್ನು ಇಡಬೇಕು; ಆದರೆ ಆ ಹಣತೆ ಯನ್ನು ಈಗ ಪ್ರಜ್ವಲಿಸಬಾರದು. ಎಲ್ಲಿಯ ತನಕ ಸಪ್ತರ್ಷಿಗಳಿಂದ ಮುಂದಿನ ಆಜ್ಞೆ ಬರುವುದಿಲ್ಲವೋ ಅಲ್ಲಿಯ ವರೆಗೆ ಆ ಎರಡೂ ಹಣತೆಗಳನ್ನು ಹಾಗೆಯೇ ಇಡಬೇಕು. ಮುಂದೆ ಒಂದು ಶುಭಶಕುನ ಬಂದ ಮೇಲೆ ಇದರ ಬಗ್ಗೆ ಸಪ್ತರ್ಷಿಗಳು ತಿಳಿಸುತ್ತಾರೆ. (ಸಪ್ತರ್ಷಿಗಳು ಹೇಳಿದಂತೆ ಸದ್ಗುರು (ಸೌ.) ಬಿಂದಾ ಸಿಂಗಬಾಳರು ತಕ್ಷಣ ಗೋವಾದ ರಾಮನಾಥಿಯ ಸನಾತನದ ಆಶ್ರಮದ ದಕ್ಷಿಣ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿ ಮಣ್ಣಿನ ಒಂದೊಂದು ಹಣತೆಯನ್ನಿಟ್ಟರು.)

೩.೪.೨೦೨೦ ರಂದು ಬೆಳಗ್ಗೆ ೯ ಗಂಟೆಗೆ ಪ್ರಧಾನಮಂತ್ರಿಗಳು ಭಾರತೀಯರನ್ನು ಉದ್ದೇಶಿಸಿ ಮಾಡಿದ ಹೇಳಿಕೆಯ ಬಳಿಕ ಪೂ. (ಡಾ.) ಉಲಗನಾಥನ್‌ರವರು ಸಂಚಾರವಾಣಿ ಕರೆ ಮಾಡಿ, “ಈ ಮೊದಲೇ ಸಪ್ತರ್ಷಿಗಳು ಉತ್ತರ ದಿಕ್ಕಿನ ಕಡೆ ಮುಖ ಮಾಡಿ ಹರಳೆಣ್ಣೆಯ ಹಣತೆಯನ್ನೇಕೆ ಪ್ರಜ್ವಲಿಸದೆ ಹಾಗೆಯೇ ಇಡಬೇಕು, ಎಂದು ಹೇಳಿರುವುದು ಈಗ ನಿಮ್ಮ ಗಮನಕ್ಕೆ ಬಂದಿರಬಹುದು ಎಂದು ಹೇಳಿದರು ಹಾಗೂ ಅನಂತರ ಅವರು ಸಪ್ತರ್ಷಿಗಳ ಮುಂದಿನ ಆಜ್ಞೆಯನ್ನು ಹೇಳಿದರು. ಇದರಿಂದ ಸಪ್ತರ್ಷಿಗಳ ಸರ್ವಜ್ಞತೆ ಗಮನಕ್ಕೆ ಬರುತ್ತದೆ. ಆಪತ್ಕಾಲದಲ್ಲಿಯೂ ವಿಶ್ವಕಲ್ಯಾಣಕ್ಕಾಗಿ ಆಯಾ ಸಮಯಕ್ಕೆ ಆಧ್ಯಾತ್ಮಿಕ ಉಪಾಯಗಳನ್ನು ಹೇಳಿ ಮಾರ್ಗದರ್ಶನ ಮಾಡುವ ಇಂತಹ ಋಷಿಮುನಿಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.