ಗೋಹತ್ಯೆ ನಿಷೇಧದ ಉಚ್ಚ ನ್ಯಾಯಾಲಯದ ತೀರ್ಪಿಗೆ ತಮಿಳುನಾಡು ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು

​(ಟಿವಿಎಕೆ ಎಂದರೆ ತಮಿಳಗ ವೆಟ್ರಿ ಕಳಗಂ – ತಮಿಳುನಾಡು ವಿಜಯ ಮಹಾಸಂಘ)

ನವ ದೆಹಲಿ – ಮದ್ರಾಸ್ ಉಚ್ಚ ನ್ಯಾಯಾಲಯವು ಮೇ 27 ರಂದು ರಾಜ್ಯದಲ್ಲಿ ಹಸು ಮತ್ತು ಕರುವಿನ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶ ನೀಡಿತ್ತು. ಇದನ್ನು ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಮಾಡಿದೆ.

ತಮಿಳುನಾಡು ಸರಕಾರವು ತನ್ನ ಅರ್ಜಿಯಲ್ಲಿ, ಉಚ್ಚ ನ್ಯಾಯಾಲಯದ ಆದೇಶವು ‘ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958’ ಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಈ ಕಾಯ್ದೆಯ ಪ್ರಕಾರ, ಕೆಲಸ ಮಾಡಲು ಮತ್ತು ಸಂತಾನೋತ್ಪತ್ತಿ ಮಾಡಲು (ಮರಿಗಳಿಗೆ ಜನ್ಮ ನೀಡಲು) ಅಸಮರ್ಥವಾಗಿರುವ 10 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಣಿಗಳ ಹತ್ಯೆಗೆ ಅನುಮತಿಯಿದೆ. ಇದನ್ನು ಸಕ್ಷಮ ಅಧಿಕಾರಿಯು ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಎಲ್ಲಾ ಕಾಯ್ದೆಗಳು ಯಾವ ಪ್ರಾಣಿಗಳನ್ನು ಕೊಲ್ಲಬಹುದು ಎಂಬುದನ್ನು ನಿಯಂತ್ರಿಸುತ್ತವೆ; ಆದರೆ ಸಂಪೂರ್ಣ ನಿಷೇಧದ ವ್ಯವಸ್ಥೆಯು ಯಾವುದೇ ಕಾಯ್ದೆಯಲ್ಲಿಲ್ಲ ಎಂದು ಸರಕಾರ ವಾದಿಸಿದೆ.

ಸಂಪಾದಕೀಯ ನಿಲುವು

ಗೋಹತ್ಯೆ ನಿಷೇಧವನ್ನು ವಿರೋಧಿಸುವ ಟಿವಿಎಕೆ ಸರಕಾರವು ಮುಂದೆ ಹಂದಿಗಳ ಹತ್ಯೆಯನ್ನು ನಿಷೇಧಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !