ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ನಾಯಕ ಬಿಲಾವಲ ಭುಟ್ಟೋ ಜರ್ದಾರಿಯವರ ಬಹಿರಂಗ ಬೆದರಿಕೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತವು ಪಾಕಿಸ್ತಾನದ ನೀರನ್ನು ತಡೆಯಲು ಪ್ರಯತ್ನಿಸಿದರೆ, ಪಾಕಿಸ್ತಾನವು ಅದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ ಎಂದು ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ಯ ಅಧ್ಯಕ್ಷ ಬಿಲಾವಲ ಭುಟ್ಟೋ ಜರ್ದಾರಿಯವರು ಸಂಸತ್ತಿನಲ್ಲಿ ಮಾತನಾಡುವಾಗ ಬೆದರಿಕೆ ಹಾಕಿದ್ದಾರೆ. ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನ ಮತ್ತೊಮ್ಮೆ ಆಕ್ರಮಣಕಾರಿ ನಿಲುವನ್ನು ತಳೆದಿದೆ. ನದಿಯ ನೀರಿನಲ್ಲಿರುವ ನಮ್ಮ ಹಕ್ಕಿನ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಅದಕ್ಕಾಗಿ ನಾವು ಹೋರಾಡುತ್ತಲೇ ಇರುತ್ತೇವೆ ಎಂದು ಭುಟ್ಟೋ ಮುಂದುವರಿದು ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಜರ್ದಾರಿ ಅವರು ಸಿಂಧೂ ಜಲ ಒಪ್ಪಂದದ ಕುರಿತು ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಭಾರತವು ಈ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿದಾಗಿನಿಂದ ಅವರು ನಿರಂತರವಾಗಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಜರ್ದಾರಿಯವರು, ‘ಸಿಂಧೂ ನದಿಯಲ್ಲಿ ಒಂದೋ ನಮ್ಮ ನೀರು ಹರಿಯುತ್ತದೆ ಅಥವಾ ನಿಮ್ಮ (ಭಾರತದ) ರಕ್ತ ಹರಿಯುತ್ತದೆ’ ಎಂಬ ಹೇಳಿಕೆಯನ್ನೂ ನೀಡಿದ್ದರು. ಜರ್ದಾರಿ ಅವರ ಪಿಪಿಪಿ ಪಕ್ಷವು ಪಾಕಿಸ್ತಾನದ ಪ್ರಸ್ತುತ ಶಹಬಾಜ್ ಷರೀಫ್ ಸರಕಾರವನ್ನು ಬೆಂಬಲಿಸುತ್ತಿದೆ.
ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ! – ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ
ಕದನ ವಿರಾಮದ ನಂತರವೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಕೆ: 18 ಜನರ ಸಾವು
ಪಾಕಿಸ್ತಾನದ ವ್ಯಂಗ್ಯ ಟೀಕೆ : ಭಾರತದ ತಕ್ಕ ಪ್ರತ್ಯುತ್ತರ!
ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ನಲ್ಲಿ ಬ್ರಿಟನ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಹಿರಂಗ!
ಭಯೋತ್ಪಾದನೆ ಸೃಷ್ಟಿಸುವ ಪಾಕಿಸ್ತಾನ ತನ್ನನ್ನು ತಾನೇ ಭಯೋತ್ಪಾದನೆಯ ಬಲಿಪಶು ಎಂದು ಕರೆದುಕೊಳ್ಳುತ್ತಿದೆ! : India Slams Pakistan
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack