‘ಅಮೆಜಾನ್ ಇಂಡಿಯಾ’ದ ಜಾಹೀರಾತಿನಲ್ಲಿ ಶ್ರೇಷ್ಠ ವಿಜ್ಞಾನಿ ಆರ್ಯಭಟರಿಗೆ ಅಪಮಾನ!

ಆರ್ಯಭಟರನ್ನು 'ಡೆಲಿವರಿ ಬಾಯ್' ರೂಪದಲ್ಲಿ ತೋರಿಸಲಾಗಿದೆ!

(ಇದು ಯಾರ ರಾಷ್ಟ್ರೀಯ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಈ ಚಿತ್ರವನ್ನು ಮಾಹಿತಿಗಾಗಿ ಪೋಸ್ಟ್ ಮಾಡಲಾಗಿದೆ !- ಸಂಪಾದಕರು)

ಮುಂಬಯಿ – ಜಗತ್ತಿಗೆ ‘ಶೂನ್ಯ’ದ ಕೊಡುಗೆಯನ್ನು ನೀಡಿದ ಮಹಾನ್ ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟರನ್ನು ‘ಅಮೆಜಾನ್ ಇಂಡಿಯಾ’ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟಕ್ಕಾಗಿ ಅಪಮಾನಿಸಿದೆ. ಆರ್ಯಭಟರನ್ನು ‘ಡೆಲಿವರಿ ಬಾಯ್’ ತರಹ (ಸಾಮಗ್ರಿಗಳನ್ನು ವಿತರಣೆ ಮಾಡುವವನಂತೆ) ತೋರಿಸಿ ಅವರ ಮಹತ್ವವನ್ನು ಕುಗ್ಗಿಸುವುದು, ಅವರ ಬಾಯಲ್ಲಿ ವಿದೂಷಕನ ತರಹದ ಸಂಭಾಷಣೆಗಳನ್ನು ಇಡುವುದು ಮತ್ತು ಅವರನ್ನು ‘ಅಮೆಜಾನ್’ನ ವ್ಯಾವಸಾಯಿಕ ಸ್ವಾರ್ಥಕ್ಕಾಗಿ ಬಳಸುವುದು ಮುಂತಾದ ತಪ್ಪು ಸಂಗತಿಗಳನ್ನು ಇದರಲ್ಲಿ ತೋರಿಸಲಾಗಿದೆ. ಇದರಿಂದ ದೇಶಪ್ರೇಮಿಗಳು ಮತ್ತು ಇತಿಹಾಸಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. ‘ಈ ಜಾಹೀರಾತಿನಿಂದ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಅಪಮಾನವಾಗಿದ್ದು, ಅಮೆಜಾನ್ ಈ ಜಾಹೀರಾತನ್ನು ತಕ್ಷಣವೇ ಹಿಂಪಡೆದು ಕ್ಷಮೆ ಕೇಳಬೇಕು, ಹಾಗೂ ಕೇಂದ್ರ ಸರಕಾರವು ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು’, ಎಂದು ನಾಗರಿಕರು ಆಗ್ರಹಿಸಿದ್ದಾರೆ. (ಇಂತಹ ಆಗ್ರಹವನ್ನು ಏಕೆ ಮಾಡಬೇಕಾಗುತ್ತದೆ? ಸರಕಾರವು ಸ್ವತಃ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? – ಸಂಪಾದಕರು)

1. ಜಾಹೀರಾತಿನಲ್ಲಿ ಆರ್ಯಭಟರು ಇಂದಿನ ಆಧುನಿಕ ಯುಗಕ್ಕೆ ಮರಳಿ ಬಂದಿರುವುದಾಗಿ ತೋರಿಸಲಾಗಿದೆ. ಕೆಲವು ಮಕ್ಕಳು ಅವರಿಗೆ ‘ಯಾರು ನೀನು?’ ಮತ್ತು ‘ಚಾಚಾ, ಯಾವ ಸಾಮಗ್ರಿ ತಂದಿದ್ದೀಯಾ?’ ಎಂದು ಕೇಳಿ ಅವರನ್ನು ಗೇಲಿ ಮಾಡುತ್ತಿದ್ದಾರೆ.

2. ಆರ್ಯಭಟರು ಮಾನವನ ದೃಷ್ಟಿಯಿಂದ ‘ಶೂನ್ಯ’ದ ಮಹತ್ವ ಹೇಗಿದೆ ಎಂಬುದನ್ನು ನೋಡಲು ಅತ್ಯಂತ ವ್ಯಾಕುಲರಾಗಿರುವುದನ್ನು ತೋರಿಸಲಾಗಿದೆ; ಆದರೆ ಈ ಮಹಾನ್ ಸಂಶೋಧನೆಯ ಸಂಬಂಧವನ್ನು ಅಮೆಜಾನ್ ತನ್ನ ‘ಝೀರೋ ಡೆಲಿವರಿ ಫೀ’ (ಶೂನ್ಯ ವಿತರಣಾ ಶುಲ್ಕ), ‘ಝೀರೋ ಸರ್ಚ್ ಫೀ’ (ಶೂನ್ಯ ಹುಡುಕಾಟ ಶುಲ್ಕ) ಮತ್ತು ‘ಝೀರೋ ಹ್ಯಾಂಡ್ಲಿಂಗ್ ಫೀ’ (ಶೂನ್ಯ ನಿರ್ವಹಣಾ ಶುಲ್ಕ) ಗಳೊಂದಿಗೆ ಜೋಡಿಸಿದೆ; ಆದರೆ ಇದು ಅತ್ಯಂತ ಖಂಡನೀಯವಾಗಿದೆ.

ಸಂಪಾದಕೀಯ ನಿಲುವು

  • ಪ್ರತಿ ಬಾರಿಯೂ 'ಅಮೆಜಾನ್'ನಿಂದ ಪಾದರಕ್ಷೆಗಳು, ಶೌಚಾಲಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ. ಈಗ ಜಾಹೀರಾತಿನ ಮಾಧ್ಯಮದಿಂದ ಈ ಸಂಸ್ಥೆಯ ಭಾರತದ್ವೇಷಿ ಪಿತೂರಿ ಬಹಿರಂಗವಾಗುತ್ತದೆ!
  • ಈ ಪ್ರಕರಣದ ಕುರಿತು ಆಳವಾದ ತನಿಖೆ ನಡೆಸಿ ಕೇಂದ್ರ ಸರಕಾರವು 'ಅಮೆಜಾನ್' ಮೇಲೆ ನಿಷೇಧ ಹೇರಬೇಕು! ಭಾರತೀಯರೂ ಸಹ 'ಅಮೆಜಾನ್' ಅನ್ನು ಬಹಿಷ್ಕರಿಸಬೇಕು!
  • ಮಹಾನ್ ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟರನ್ನು ಅಪಮಾನಿಸಿದಕ್ಕಾಗಿ 'ಅಮೆಜಾನ್ ಇಂಡಿಯಾ' ಕ್ಷಮೆ ಯಾಚಿಸಬೇಕು!