ಸರಕಾರಿ ಸಹಾಯ ಸಾಮಗ್ರಿಗಳ ಬೃಹತ್ ದಾಸ್ತಾನು ಮನೆಯಲ್ಲಿ ಪತ್ತೆಯಾದ ನಂತರ ಕ್ರಮ
ಸ್ಥಳೀಯರಿಂದ ‘ಚೋರ್-ಚೋರ್’ ಎಂದು ಘೋಷಣೆ

ವರ್ಧಮಾನ (ಬಂಗಾಳ) – ಪೊಲೀಸರು ಪೂರ್ವ ವರ್ಧಮಾನ ಜಿಲ್ಲೆಯ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕರಾದ ತಪನ ಚಟರ್ಜಿಯವರ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಸರಕಾರಿ ಸಹಾಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಪಾಸಣೆಯ ವೇಳೆ ಮನೆಯಿಂದ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ಶೀಟುಗಳು(ಟಾರ್ಪಾಲು), ಕಂಬಳಿಗಳು, ಫುಟ್ ಬಾಲ್, ವಾಲಿಬಾಲ್ ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಇವುಗಳನ್ನು ಸಾಮಾನ್ಯವಾಗಿ ವಿಪತ್ತು ಪೀಡಿತ ಜನರು, ಯುವಕರ ಕ್ಲಬ್ ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿತರಿಸಲು ಇಡಲಾಗಿರುತ್ತದೆ.
🚨 Relief Loot Exposed? TMC Leader Arrested Amid Public Outrage! 🚨
Former Trinamool Congress MLA Tapan Chatterjee has been arrested after a large stockpile of government relief materials was recovered from his residence.
📢 Angry locals raised slogans of "Chor! Chor!"
The… pic.twitter.com/wYZYRIQbw7
— Sanatan Prabhat (@SanatanPrabhat) May 31, 2026
1. ಪೊಲೀಸರು ತಪನ ಚಟರ್ಜಿಯವರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ, ಸ್ಥಳೀಯರು ಮಾಜಿ ಶಾಸಕರ ವಿರುದ್ಧ ‘ಚೋರ್-ಚೋರ್’ ಎಂದು ಘೋಷಣೆಗಳನ್ನು ಕೂಗಿದರು. ಮನೆಯ ಮೇಲಿನ ದಾಳಿಯ ನಂತರ ಈಗ ಪೊಲೀಸರು ಚಟರ್ಜಿಯವರಿಗೆ ಸಂಬಂಧಿಸಿದ ಹಲವಾರು ಗೋದಾಮುಗಳ ಮೇಲೂ ತಪಾಸಣೆ ನಡೆಸುತ್ತಿದ್ದಾರೆ.
2. ಇದಕ್ಕೂ ಮುನ್ನ ಪೊಲೀಸರು ಉತ್ತರ 24 ಪರಗಣ ಜಿಲ್ಲೆಯ ಬದುರಿಯಾ ನಗರಸಭೆಯ ಅಧ್ಯಕ್ಷರಾದ ದೀಪಾಂಕರ ಭಟ್ಟಾಚಾರ್ಯ ರವರನ್ನು ಬಂಧಿಸಿದ್ದರು, ಆಗ ಅವರ ಸ್ಥಳಗಳಿಂದ ಬೃಹತ್ ಪ್ರಮಾಣದಲ್ಲಿ ನಗದು ಹಣ ಮತ್ತು ಸಾವಿರಾರು ಸರಕಾರಿ ಪ್ಲಾಸ್ಟಿಕ್ ಶೀಟು(ಟಾರ್ಪಾಲು) ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದೇ ರೀತಿ ಪೂರ್ವ ಮೇದಿನಿಪುರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ತರುಣ ಕುಮಾರ ಮೈತಿಯವರಿಗೆ ಸಂಬಂಧಿಸಿದ ಪರಿಸರದಿಂದಲೂ ಸಹಾಯ ಸಾಮಗ್ರಿಯಲ್ಲಿದ್ದ ಪ್ಲಾಸ್ಟಿಕ್ ಶೀಟುಗಳು(ಟಾರ್ಪಾಲು)ಗಳನ್ನು ಜಪ್ತು ಮಾಡಲಾಗಿತ್ತು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ