ಭಾಗ್ಯನಗರದಲ್ಲಿ ಬಕ್ರೀದ್ ಪ್ರಯುಕ್ತ ನಡೆದ ಪ್ರಾಣಿ ಹತ್ಯೆಯಿಂದಾಗಿ ಹಿಂದೂ ಕಾಲೋನಿಗಳ ರಸ್ತೆಗಳಲ್ಲಿ ಹರಿದ ನೆತ್ತರು ! : Blood On Streets

ಸ್ಥಳೀಯ ಹಿಂದೂಗಳಿಂದ ಆಕ್ರೋಶ ವ್ಯಕ್ತ

ಭಾಗ್ಯನಗರ (ತೆಲಂಗಾಣ) – ಬಕ್ರೀದ್ ನಿಮಿತ್ತ ಭಾಗ್ಯನಗರದ ಮುಶೀರಾಬಾದ್ ನಲ್ಲಿ ಪ್ರಾಣಿಹತ್ಯೆ ಮಾಡಿದ್ದರಿಂದ ರಸ್ತೆಗಳಲ್ಲಿ ರಕ್ತದ ಕಾಲುವೆಗಳು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ರಕ್ತವು ಬಾಂಗ್ಲಾದೇಶ ಮಾರ್ಕೆಟ್ ನಿಂದ ಹಿಡಿದು ಸುತ್ತಮುತ್ತಲಿನ ಹಿಂದೂ ಕಾಲೋನಿಗಳ ರಸ್ತೆಗಳವರೆಗೂ ಹರಡಿತ್ತು. ಈ ಭೀಕರ ದೃಶ್ಯವನ್ನು ನೋಡಿ ಸ್ಥಳೀಯ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಗಿದೆ. ಭಾಗ್ಯನಗರದಲ್ಲಿನ ಭಾಜಪದ ಲೀಗಲ್ ಸೆಲ್ ನ (ಕಾನೂನು ವಿಭಾಗದ) ವಕೀಲರಾದ ನೀಲಂ ಭಾರ್ಗವ ರಾಮ್ ಅವರು ಎಕ್ಸ್ ನಲ್ಲಿ ಈ ವಿಡಿಯೋ ಪ್ರಸಾರ ಮಾಡುವ ಮೂಲಕ ಈ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಘಟನೆಯಿಂದ ಪ್ರಾಣಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಪೇಟಾ ಇಂಡಿಯಾದಂತಹ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕೇವಲ ಹಿಂದೂ ಹಬ್ಬಗಳ ಸಮಯದಲ್ಲಿ ಉಪದೇಶ ಮಾಡುವ ಈ ಸಂಘಟನೆಗಳು ಈಗ ಈ ಕ್ರೂರತೆ ಮತ್ತು ಅಸ್ವಚ್ಛತೆಯ ಬಗ್ಗೆ ಏಕೆ ಮೌನವಾಗಿವೆ?’, ಎಂದು ಜನರು ಪ್ರಶ್ನಿಸಿದ್ದಾರೆ. ಇದರೊಂದಿಗೆ ಈ ಕೃತ್ಯದಿಂದ ಸ್ಥಳೀಯ ಜನರ ಧಾರ್ಮಿಕ ಭಾವನೆಗಳು ಮತ್ತು ಸಾರ್ವಜನಿಕ ಸ್ವಚ್ಛತೆಯ ಉಲ್ಲಂಘನೆಯಾಗಿದೆ. ಧಾರ್ಮಿಕ ಸಂಪ್ರದಾಯಗಳ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮಾಜಕ್ಕೆ ಈ ರೀತಿ ತೊಂದರೆ ನೀಡಲು ಮುಕ್ತ ಅವಕಾಶ ನೀಡಲಾಗುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ಪೊಲೀಸ್ ಆಡಳಿತದ ಮೌನ!

ಆಶ್ಚರ್ಯದ ಸಂಗತಿಯೆಂದರೆ, ಈ ಗಂಭೀರ ಪ್ರಕರಣದ ಬಗ್ಗೆ ಪೊಲೀಸ್ ಮತ್ತು ಸ್ಥಳೀಯ ಆಡಳಿತ ಮೌನ ವಹಿಸಿದ್ದು, ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.

ಸಂಪಾದಕೀಯ ನಿಲುವು

  • ಸಾಮಾನ್ಯವಾಗಿ ಹಿಂದೂ ಹಬ್ಬಗಳ ದಿನದಂದು ಅವರ ಮೆರವಣಿಗೆಗಳು ಯಾವುದಾದರೂ ಮಸೀದಿಯ ಮುಂದಿನಿಂದ ಹೋದಾಗ ಮತ್ತು ಮಸೀದಿಯ ಆವರಣದಲ್ಲಿ ಸ್ವಲ್ಪ ಗುಲಾಲ್ ಹಾರಿದರೂ, ಹಿಂದೂಗಳ ಮೇಲೆ ದಾಳಿ ನಡೆಸಿ ಅವರ ಹತ್ಯೆ ಮಾಡಿದ ಘಟನೆಗಳು ನಡೆದಿವೆ. ಈಗ ಬಕ್ರೀದ್ ಸಮಯದಲ್ಲಿ ಹೀಗಾಗುತ್ತಿದ್ದರೆ, ಹಿಂದೂಗಳು ಬಳೆ ತೊಟ್ಟು ಮನೆಯಲ್ಲಿಯೇ ಕೂರಬೇಕು ಎಂದೇ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿನ ಸರಕಾರಗಳಿಗೆ ಅನಿಸುತ್ತಿದೆ ಎಂಬುದನ್ನು ಗಮನಿಸಿ!
  • ಇಂತಹ ಘಟನೆಗಳ ಬಗ್ಗೆ ಪ್ರಾಣಿ ಪ್ರೇಮಿ ಸಂಘಟನೆಗಳು ಏಕೆ ಮೌನವಾಗಿರುತ್ತವೆ?