ಧಾನೋರಿ (ಪುಣೆ) ಇಲ್ಲಿ ತಮ್ಮದೇ ಭೂಮಿಯ ಸ್ವಾಧೀನ ಪಡೆಯಲು ತೆರಳಿದ ಹಿಂದೂ ಕುಟುಂಬದ ಮೇಲೆ ಜಿಹಾದಿಗಳಿಂದ ದಾಳಿ !

  • ನ್ಯಾಯಾಲಯದ ಆದೇಶದ ನಂತರವೇ ಸ್ವಾಧೀನ ಪಡೆಯಲು ಹೋಗಿದ್ದ ಹಿಂದೂ ಕುಟುಂಬ

  • ಜಿಹಾದಿಗಳಿಂದ ಮಾರುತಿಯ ಮೂರ್ತಿಯ ವಿಡಂಬನೆ

ಪುಣೆ – ನ್ಯಾಯಾಲಯದ ಆದೇಶದಂತೆ ಧಾನೋರಿ ಭಾಗದ ಒಂದು ದಶಕಕ್ಕೂ ಹಳೆಯದಾದ ಭೂಮಿಯ ಸ್ವಾಧೀನವನ್ನು ಪಡೆಯಲು ತಲುಪಿದ ಹಿಂದೂ ಕುಟುಂಬದ ಮೇಲೆ, ಎದುರು ಪಕ್ಷದ ಇಲಾಹಿ ಶೇಖ ಮತ್ತು ಬುರ್ಖಾಧಾರಿ ಮಹಿಳೆಯರು ಇದ್ದಕ್ಕಿದ್ದಂತೆ ದಾಳಿ ನಡೆಸಿದರು.

(ಈ ಚಿತ್ರ ಮತ್ತು ವಿಡಿಯೋ ಪ್ರಸಾರ ಮಾಡುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಈ ಕ್ರೂರ ದಾಳಿಯ ಸಮಯದಲ್ಲಿ ಆರೋಪಿಗಳು ಸಂತ್ರಸ್ತ ಕುಟುಂಬದವರ ಕಣ್ಣಿಗೆ ಮೆಣಸಿನಕಾಯಿ ಪುಡಿಯನ್ನು ಎರಚಿದರು. ಅವರನ್ನು ಅಮಾನುಷವಾಗಿ ಥಳಿಸಿದರು. ಅಲ್ಲಿದ್ದ ಮಾರುತಿಯ ಮೂರ್ತಿಯ ವಿಡಂಬನೆ ಮಾಡಿದರು. ಹಿಂಸಾತ್ಮಕ ಗುಂಪಿನ ಮುಂದೆ ಅಸಹಾಯಕರಾದ ಸಂತ್ರಸ್ತ ಕುಟುಂಬವು ತಮ್ಮ ಜೀವವನ್ನು ಉಳಿಸಿಕೊಳ್ಳಲು ತಮ್ಮದೇ ಭೂಮಿಯಿಂದ ಓಡಿಹೋಗಬೇಕಾಯಿತು. ಈ ಘಟನೆಯ ವಿಡಿಯೋ ‘ಸುದರ್ಶನ್ ಮರಾಠಿ’ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದರ ಬೆನ್ನಲ್ಲೇ ಪುಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಇಲಾಹಿ ಶೇಖ್ ಮತ್ತು ಇತರ ಆರೋಪಿಗಳ ವಿರುದ್ಧ ದಂಗೆ ಎಬ್ಬಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ಹಲ್ಲೆ ನಡೆಸಿರುವ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಸಂಪಾದಕೀಯ ನಿಲುವು

  • ೧ ಸಾವಿರ ವರ್ಷಗಳ ಇತಿಹಾಸವನ್ನು ನೋಡಿದರೆ, ಮುಸಲ್ಮಾನರು ಹಿಂದೂಗಳ ಮೂರನೇ ಒಂದು ಭಾಗದಷ್ಟು ಭೂಮಿಯನ್ನು ನುಂಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ನಿರ್ಮಿಸಿದರು. ಇಂದಿಗೂ ಹಿಂದೂಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಅವರು ಭವಿಷ್ಯದ ವಿಭಜನೆಗೆ ಸಿದ್ಧತೆ ನಡೆಸುತ್ತಿದ್ದಾರೆಯೇ, ಎಂದು ಇಂತಹ ಸಣ್ಣದಾಗಿ ಕಾಣುವ ಘಟನೆಯು ಆಲೋಚಿಸುವಂತೆ ಮಾಡುತ್ತದೆ!
  • ನ್ಯಾಯಾಲಯದ ಆದೇಶವಿದ್ದರೂ ಮತಾಂಧ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ನ್ಯಾಯವ್ಯವಸ್ಥೆಯ ನೇರ ಅಪಹಾಸ್ಯವಾಗಿದೆ ! ಇದರಿಂದ ಮುಸಲ್ಮಾನರ ದೃಷ್ಟಿಯಲ್ಲಿ ಕಾನೂನು-ಸುವ್ಯವಸ್ಥೆಗೆ ಎಷ್ಟು ಬೆಲೆಯಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!