ಬಂಗಾಲದಲ್ಲಿನ ಗೋಹತ್ಯೆ ನಿಷೇಧದ ವಿರುದ್ಧ ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಸಾಮ್ಯವಾದಿಗಳ ಅರ್ಜಿ : Bengal Cow Slaughter

ಸರಕಾರವು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಆಘಾತ ಮಾಡಿದೆ ಎಂಬ ಆರೋಪ

ಕೊಲಕಾತಾ (ಬಂಗಾಲ) – ಬಂಗಾಲದಲ್ಲಿನ ಸುವೇಂದು ಸರಕಾರದ ‘ಪಶ್ಚಿಮ ಬಂಗಾಲ ಪಶುವಧೆ ನಿಯಂತ್ರಣ ಅಧಿನಿಯಮ, ೧೯೫೦’ ಎಂಬ ಕಾಯ್ದೆಯನ್ನು ಜಾರಿಗೊಳಿಸುವ ಆದೇಶದ ವಿರುದ್ಧ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ-ಲೆನಿನ್ ವಾದಿ) ಲಿಬರೇಶನ್ ನ (ಸಿಪಿಐ-ಎಮ್ಎಲ್) ಬಂಗಾಲ ಶಾಖೆಯು ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಅವರು ಇದರಲ್ಲಿ ‘ನ್ಯಾಯಾಲಯವು ತಕ್ಷಣವೇ ಹಸ್ತಕ್ಷೇಪ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಸರಕಾರವು ಈ ಕಾಯ್ದೆಗನುಸಾರ ಗೋಹತ್ಯೆ ಮಾಡುವುದರ ಮೇಲೆ ನಿಷೇಧ ಹೇರಿದೆ.

ಅರ್ಜಿದಾರರು ಅರ್ಜಿಯಲ್ಲಿ, ಈ ಕಾಯ್ದೆಯನ್ನು ಜಾರಿಗೊಳಿಸುವುದು ಅಂದರೆ ಮುಸಲ್ಮಾನರ ಧಾರ್ಮಿಕ ಸ್ವಾತಂತ್ರ್ಯ, ಪಶು ವ್ಯಾಪಾರಕ್ಕೆ ಸಂಬಂಧಿಸಿದ (ಬಹುಪಾಲು ಹಿಂದೂ ಸಮುದಾಯದವರಾಗಿರುವ) ರೈತರ ಜೀವನೋಪಾಯ, ನಾಗರಿಕರ ತಮ್ಮ ಒಲವಿನ ಆಹಾರ ಸೇವಿಸುವ ಸ್ವಾತಂತ್ರ್ಯ ಮತ್ತು ಬಂಗಾಲದ ಆಹಾರ ಸಂಸ್ಕೃತಿಯ ವೈವಿಧ್ಯತೆಯ ಮೇಲೆ ಮಾಡಿದ ಆಕ್ರಮಣವಾಗಿದೆ ಎಂದು ದಾವೆ ಮಾಡಿದ್ದಾರೆ. ಈ ಕಾಯ್ದೆಯನ್ನು ಜಾರಿಗೊಳಿಸುವ ಹಿಂದಿನ ಉದ್ದೇಶವು ಪ್ರಾಣಿಗಳ ಬಲಿಯ ಮೇಲೆ ನಿಷೇಧ ಹೇರುವುದಾಗಿದೆ.

ಸಂಪಾದಕೀಯ ನಿಲುವು

‘ಧರ್ಮವು ಅಫೀಮಿನ ಗುಳಿಗೆಯಾಗಿದೆ’ ಎನ್ನುವ ಸಾಮ್ಯವಾದಿಗಳು ಎಂದೂ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋದ ಇತಿಹಾಸವಿಲ್ಲ; ಆದರೆ ಮುಸಲ್ಮಾನರ ಅಧಿಕಾರಗಳಿಗಾಗಿ ತಕ್ಷಣವೇ ಅವರು ಕೃತಿಶೀಲರಾಗಿದ್ದಾರೆ. ಇದರಿಂದಲೇ ಅವರು ಭಾರತದಿಂದ ನಾಮಶೇಷವಾಗುತ್ತಿದ್ದಾರೆ ಮತ್ತು ಶೀಘ್ರದಲ್ಲಿಯೇ ಇತಿಹಾಸ ಸೇರಲಿದ್ದಾರೆ !