
ಭಾರತದಲ್ಲಿ ಸಾಮ್ಯವಾದದಂತಹ ಕ್ರೂರ, ನಿರ್ದಯಿ ಮತ್ತು ಕೇವಲ ತಾತ್ಕಾಲಿಕ ದೃಷ್ಟಿಕೋನವಿರುವ ತತ್ತ್ವ ಜ್ಞಾನವು ಎಂದಿಗೂ ಉದಯಿಸಲಿಲ್ಲ ಮತ್ತು ಅದರ ಪ್ರಸಾರವೂ ಇಂದಿಗೂ ಆಗುತ್ತಿಲ್ಲ; ಏಕೆಂದರೆ ಭಾರತದ ಮಾನ್ಯ ಹಾಗೂ ಶ್ರೇಷ್ಠ ಗ್ರಂಥಗಳಾದ ವೇದ ಮತ್ತು ಭಗವದ್ಗೀತೆಯು ಮೂಲತಃ ಶೋಷಣೆಯ ವಿರುದ್ಧವಾಗಿವೆ. ಅವು ಔದಾರ್ಯವನ್ನು ಪುರಸ್ಕರಿಸುತ್ತವೆ ಮತ್ತು ಸ್ವಾರ್ಥದ ವಿರೋಧಿಯಾಗಿವೆ.
ನಮ್ಮ ಸಂತ ಪರಂಪರೆಯು ವೇದ ಮತ್ತು ಗೀತೆಯನ್ನು ಅನುಸರಿಸುವಂತದ್ದಾಗಿದೆ. ಶ್ರೀ ಜ್ಞಾನೇಶ್ವರ ಮಹಾರಾಜರು, ‘ಜಗತ್ತಿನಲ್ಲಿ ವೇದಗಳಿಗಿಂತ ಮಿಗಿಲಾದ ತಾಯಿ ಬೇರೊಬ್ಬರಿಲ್ಲ’ ಎಂದು ಅತ್ಯಂತ ಪ್ರೇಮಾದರದಿಂದ ಹೇಳುತ್ತಾರೆ. ಭಕ್ತಿ ಮಂದಿರದ ಶಿಖರದಂತಿರುವ ಶ್ರೀ ತುಕಾರಾಮ ಮಹಾರಾಜರು, ‘ವೇದನೀತಿಯನ್ನೇ ಮಾತನಾಡೋಣ, ಸಂತರ ದಾರಿಯಲ್ಲೇ ನಡೆಯೋಣ’ ಎಂದು ಜೀವನದ ಉದ್ದೇಶವನ್ನು ಸಾರುತ್ತಾರೆ.
ಸಂತರ ಈ ಧೋರಣೆಯು ಸದ್ಧರ್ಮದ ಆಚರಣೆಯನ್ನು ಅನುಸರಿಸಿಯೇ ಇದೆ. ಸದ್ಧರ್ಮಾಚರಣೆಯು ಪರಲೋಕದ ಶ್ರೇಯಸ್ಸನ್ನು (ಮುಕ್ತಿ) ಸಾಧಿಸಿಕೊಡುತ್ತದೆ. ಆದರೆ ಯಾರು ಪರಲೋಕವನ್ನು ನಂಬುವುದಿಲ್ಲವೋ, ಅಂತಹವರಿಗೂ ಈ ಸದ್ಧರ್ಮಾಚರಣೆಯೇ ಅಭ್ಯುದಯದ, ಅಂದರೆ ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ ಎಂಬುದನ್ನು ಅವರು ಮರೆಯಬಾರದು.
– ಪ.ಪೂ. ಸ್ವಾಮಿ ವರದಾನಂದ ಭಾರತಿ (ಸೌಜನ್ಯ : ’ಹಿಚ ಗುರುಪುಜಾ ಖರಿ’ ಗ್ರಂಥದಿಂದ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !