
ಭಾರತದಲ್ಲಿ ಸಾಮ್ಯವಾದದಂತಹ ಕ್ರೂರ, ನಿರ್ದಯಿ ಮತ್ತು ಕೇವಲ ತಾತ್ಕಾಲಿಕ ದೃಷ್ಟಿಕೋನವಿರುವ ತತ್ತ್ವ ಜ್ಞಾನವು ಎಂದಿಗೂ ಉದಯಿಸಲಿಲ್ಲ ಮತ್ತು ಅದರ ಪ್ರಸಾರವೂ ಇಂದಿಗೂ ಆಗುತ್ತಿಲ್ಲ; ಏಕೆಂದರೆ ಭಾರತದ ಮಾನ್ಯ ಹಾಗೂ ಶ್ರೇಷ್ಠ ಗ್ರಂಥಗಳಾದ ವೇದ ಮತ್ತು ಭಗವದ್ಗೀತೆಯು ಮೂಲತಃ ಶೋಷಣೆಯ ವಿರುದ್ಧವಾಗಿವೆ. ಅವು ಔದಾರ್ಯವನ್ನು ಪುರಸ್ಕರಿಸುತ್ತವೆ ಮತ್ತು ಸ್ವಾರ್ಥದ ವಿರೋಧಿಯಾಗಿವೆ.
ನಮ್ಮ ಸಂತ ಪರಂಪರೆಯು ವೇದ ಮತ್ತು ಗೀತೆಯನ್ನು ಅನುಸರಿಸುವಂತದ್ದಾಗಿದೆ. ಶ್ರೀ ಜ್ಞಾನೇಶ್ವರ ಮಹಾರಾಜರು, ‘ಜಗತ್ತಿನಲ್ಲಿ ವೇದಗಳಿಗಿಂತ ಮಿಗಿಲಾದ ತಾಯಿ ಬೇರೊಬ್ಬರಿಲ್ಲ’ ಎಂದು ಅತ್ಯಂತ ಪ್ರೇಮಾದರದಿಂದ ಹೇಳುತ್ತಾರೆ. ಭಕ್ತಿ ಮಂದಿರದ ಶಿಖರದಂತಿರುವ ಶ್ರೀ ತುಕಾರಾಮ ಮಹಾರಾಜರು, ‘ವೇದನೀತಿಯನ್ನೇ ಮಾತನಾಡೋಣ, ಸಂತರ ದಾರಿಯಲ್ಲೇ ನಡೆಯೋಣ’ ಎಂದು ಜೀವನದ ಉದ್ದೇಶವನ್ನು ಸಾರುತ್ತಾರೆ.
ಸಂತರ ಈ ಧೋರಣೆಯು ಸದ್ಧರ್ಮದ ಆಚರಣೆಯನ್ನು ಅನುಸರಿಸಿಯೇ ಇದೆ. ಸದ್ಧರ್ಮಾಚರಣೆಯು ಪರಲೋಕದ ಶ್ರೇಯಸ್ಸನ್ನು (ಮುಕ್ತಿ) ಸಾಧಿಸಿಕೊಡುತ್ತದೆ. ಆದರೆ ಯಾರು ಪರಲೋಕವನ್ನು ನಂಬುವುದಿಲ್ಲವೋ, ಅಂತಹವರಿಗೂ ಈ ಸದ್ಧರ್ಮಾಚರಣೆಯೇ ಅಭ್ಯುದಯದ, ಅಂದರೆ ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ ಎಂಬುದನ್ನು ಅವರು ಮರೆಯಬಾರದು.
– ಪ.ಪೂ. ಸ್ವಾಮಿ ವರದಾನಂದ ಭಾರತಿ (ಸೌಜನ್ಯ : ’ಹಿಚ ಗುರುಪುಜಾ ಖರಿ’ ಗ್ರಂಥದಿಂದ)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !