ಅತಿಬಳೇಶ್ವರ ದೇವಸ್ಥಾನದಲ್ಲಿರುವ ವಿಷ್ಣುಸ್ವರೂಪ ಲಿಂಗ ಮತ್ತು ಪಂಚಗಂಗಾ ದೇವಸ್ಥಾನದಲ್ಲಿ ದರ್ಶನ ಪಡೆದರು !

ಮಹಾಬಳೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ
ಮಹಾಬಳೇಶ್ವರ (ಜಿಲ್ಲೆ ಸತಾರಾ) – ‘ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ’, ಇದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಮೇ 17, 2026 ರಂದು ಮುಂಬಯಿನ ಪ್ರಭಾದೇವಿಯಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಈ ಯಜ್ಞದ ಆಮಂತ್ರಣವನ್ನು ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮೇ 14 ರಂದು ಮಹಾಬಳೇಶ್ವರದಲ್ಲಿರುವ ಮಹಾಬಳೇಶ್ವರ ಶಿವಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಲ್ಲಿನ ಶ್ರೀ ಮಹಾಬಳೇಶ್ವರ ಶಿವನ ಭಾವಪೂರ್ಣ ದರ್ಶನ ಪಡೆದರು ಮತ್ತು ಶಿವಲಿಂಗಕ್ಕೆ ಅಭಿಷೇಕ ಮಾಡಿದರು.
🕉️ Invitation card for the sacred ‘Shri Rajmatangi Mahayagya’ was reverentially offered at the holy feet of Deity Mahabaleshwar in (Satara district). 🙏🇮🇳
✨ Prayers were also offered at the sacred Vishnuswarup Linga at Atibaleshwar Temple and at Panchganga Temple
🙏 On this… https://t.co/383Hx6legj pic.twitter.com/ZfmcbmhmgC
— Sanatan Prabhat (@SanatanPrabhat) May 15, 2026
ದೇವಸ್ಥಾನದ ಪೂಜಾರಿ ಶ್ರೀ. ಓಂಕಾರ ದೀಕ್ಷಿತ ಅವರು ಪೌರೋಹಿತ್ಯ ಮಾಡಿದರು. ಇದರ ನಂತರ ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಅವರು ಭಗವಾನ ಶಿವನ ಚರಣಗಳಲ್ಲಿ ಯಜ್ಞದ ಆಮಂತ್ರಣ ಪತ್ರಿಕೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ದೊರೆಯಲಿ, ಆಪತ್ಕಾಲದಿಂದ ಸಾಧಕರ ರಕ್ಷಣೆಯಾಗಲಿ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿ, ಇದರೊಂದಿಗೆ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ, ದೇಶದ ರಕ್ಷಣೆಯಾಗಲಿ ಮತ್ತು ಜನರ ಆರೋಗ್ಯವು ಚೆನ್ನಾಗಿರಲಿ ಎಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶಿವನ ಚರಣಗಳಲ್ಲಿ ಮನಃಪೂರ್ವಕ ಪ್ರಾರ್ಥಿಸಿದರು.

ಮಹಾಬಳೇಶ್ವರ ದೇವಸ್ಥಾನದ ಪೂಜಾರಿ ಶ್ರೀ ಓಂಕಾರ ದೀಕ್ಷಿತ ಅವರಿಗೆ ಆಮಂತ್ರಣ ಪತ್ರಿಕೆ ನೀಡುವಾಗ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ
ವಿಷ್ಣುಸ್ವರೂಪ ಲಿಂಗದ ಅತಿಪ್ರಾಚೀನ ಅತಿಬಳೇಶ್ವರ ದೇವಸ್ಥಾನ !
ಮಹಾಬಳೇಶ್ವರ ಶಿವಲಿಂಗ ‘ಅತಿಬಳೇಶ್ವರ ದೇವಸ್ಥಾನವು ಹಳೆಯ ಮಹಾಬಳೇಶ್ವರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದೇವಸ್ಥಾನವಾಗಿದೆ. ಇಲ್ಲಿ ವಿಷ್ಣುಸ್ವರೂಪ ಲಿಂಗವಿದೆ. ಈ ದೇವಸ್ಥಾನವು 15 ನೇ ಶತಮಾನದ್ದಾಗಿದ್ದು, ಮಹಾಬಳೇಶ್ವರ ಕ್ಷೇತ್ರದ 3 ಮುಖ್ಯ ಪವಿತ್ರ ದೇವಸ್ಥಾನಗಳಲ್ಲಿ ಒಂದಾಗಿದೆ. ಒಂದು ಐತಿಹ್ಯದ ಪ್ರಕಾರ ಭಗವಾನ್ ಶಿವ ಮತ್ತು ಭಗವಾನ್ ವಿಷ್ಣುವು ಮಹಾಬಲ ಮತ್ತು ಅತಿಬಲ ಎಂಬ 2 ರಾಕ್ಷಸರನ್ನು ಸೋಲಿಸಿದರು. ಅವರ ವಿನಂತಿಯ ಮೇರೆಗೆ ಈ ದೇವಸ್ಥಾನವನ್ನು ನಿರ್ಮಿಸಲಾಯಿತು, ಹಾಗೆಯೇ ಅತಿಬಲ ಎಂಬ ರಾಕ್ಷಸನು ಈ ಭಾಗದಲ್ಲಿ ತಪಸ್ಸು ಮಾಡಿದ್ದನು. ಅತಿಬಲ ಎಂಬ ರಾಕ್ಷಸನ ಹೆಸರಿನಿಂದಲೇ ಈ ದೇವಸ್ಥಾನಕ್ಕೆ ಅತಿಬಳೇಶ್ವರ ಎಂಬ ಹೆಸರು ಬಂದಿದೆ. |

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ