
ಮುಂಬಯಿ – ನಾಶಿಕ್-ತ್ರಯಂಬಕೇಶ್ವರ ಸಿಂಹಸ್ಥ ಕುಂಭಮೇಳ ಮಹಾರಾಷ್ಟ್ರ ರಾಜ್ಯಕ್ಕೆ ಸೇವೆಯ ಆದರ್ಶವನ್ನು ನಿರ್ಮಿಸಲು ಒಂದು ಉತ್ತಮ ಅವಕಾಶವಾಗಿದೆ. ಅಖಾಡಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರತಿ ಅಖಾಡಕ್ಕೆ 5 ಕೋಟಿ ರೂಪಾಯಿ ನಿಧಿ ಹಾಗೂ ಸಣ್ಣ ಸಂಸ್ಥಾನಗಳಿಗೆ ಪ್ರತಿ ಸಂಸ್ಥಾನಕ್ಕೆ 15 ಲಕ್ಷ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸಹ್ಯಾದ್ರಿ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಸಿಂಹಸ್ಥ ಕುಂಭಮೇಳದ ಪರಿಶೀಲನಾ ಸಭೆಯಲ್ಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಉಪಸ್ಥಿತರಿದ್ದರು. ಅಖಾಡಗಳ ವಿದ್ಯುತ್ ಬಿಲ್ ಅನ್ನು ಪ್ರಾಧಿಕಾರದ ಮೂಲಕ ಪಾವತಿಸುವುದು ಹಾಗೂ ಅಖಾಡದ ಭೂಮಿಯನ್ನು ಸರಕಾರಿ ಕೆಲಸಗಳಿಗಾಗಿ ಸ್ವಾಧೀನಪಡಿಸಿಕೊಂಡರೆ ಅಖಾಡಗಳಿಗೆ ಪರಿಹಾರ ಅಥವಾ ಪರ್ಯಾಯ ಭೂಮಿಯನ್ನು ನೀಡಲಾಗುವುದೆಂದು ಮುಖ್ಯಮಂತ್ರಿಗಳು ಘೋಷಿಸಿದರು. “ಕುಂಭಮೇಳಕ್ಕಾಗಿ ಪ್ರಪಂಚದಾದ್ಯಂತ ಬರುವ ಸಾಧುಗಳು, ಮಹಂತರು ಮತ್ತು ಭಕ್ತರ ಸೇವೆ ಮಾಡುತ್ತಾ, ಅವರ ಮಾರ್ಗದರ್ಶನದಲ್ಲಿ ಕುಂಭಮೇಳವನ್ನು ಅತ್ಯಂತ ಭವ್ಯ ಹಾಗೂ ದಿವ್ಯವಾಗಿ ಆಯೋಜಿಸಲಾಗುವುದು,” ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮುಂದೆ ಮಾತನಾಡಿ, “ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ನಾಶಿಕ್ನಲ್ಲಿರುವ ಕುಂಡ (ಕಲ್ಯಾಣಿ), ರಾಮಕಾಲ್ ಪಥ, ದೇವಸ್ಥಾನ ಮತ್ತು ಗುಹೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇಡೀ ನಾಶಿಕ್ ಮತ್ತು ತ್ರಯಂಬಕೇಶ್ವರ ಪರಿಸರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ ಕುಂಭಮೇಳಕ್ಕಿಂತ ಈ ಬಾರಿಯ ಆಯೋಜನೆಯಲ್ಲಿ ಗೋದಾವರಿ ನದಿಯ ಸ್ವಚ್ಛ ಸ್ವರೂಪ ನಮ್ಮೆಲ್ಲರಿಗೂ ಕಾಣಿಸಲಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಾಗುತ್ತಿದೆ,” ಎಂದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, “ಕುಂಭಮೇಳದ ಯಶಸ್ವಿ ಆಯೋಜನೆಗಾಗಿ ರಾಜ್ಯ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಆಯೋಜನೆಯು ಅತ್ಯಂತ ವೈಭವಯುತವಾಗಿ ನೆರವೇರಲಿದೆ. ಕುಂಭಮೇಳದ ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ,” ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !