‘ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ!’

ತಮಿಳುನಾಡು: ಕಾಂಗ್ರೆಸ್ ನಾಯಕ ಜೆ.ಎಂ.ಎಚ್. ಆಸ್ಸನ್ ಮೌಲಾನಾ ಅವರ ಆಕ್ರೋಶಕಾರಿ ಹೇಳಿಕೆ!

​ಚೆನ್ನೈ (ತಮಿಳುನಾಡು) – ಎ.ಕೆ. ಪಳನಿಸ್ವಾಮಿ (ಅಣ್ಣಾದ್ರಮುಕ ನಾಯಕ) ಅವರು ತಮ್ಮ ಪಕ್ಷದಿಂದ ಹೊರಬಂದಿದ್ದಾರೆ. ಇದರರ್ಥ ನರೇಂದ್ರ ಮೋದಿಯವರೂ ಹೊರಗಿದ್ದಾರೆ ಎಂದೇ ಅರ್ಥ. (ಅಣ್ಣಾದ್ರಮುಕವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ) ಮತ್ತು ಇದರ ಅರ್ಥವೇನೆಂದರೆ, ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ. ತಮಿಳುನಾಡಿನಲ್ಲಿ ಸನಾತನ ಧರ್ಮ ಎಂದಿಗೂ ಬೆಳೆಯುವುದಿಲ್ಲ.

ತಮಿಳುನಾಡು ಇವೆಲ್ಲ ವಿಷಯಗಳಿಗಿಂತ ಬಹಳ ಮುಂದಿದೆ ಎಂದು ಕಾಂಗ್ರೆಸ್ಸಿನ ನಾಯಕ ಜೆ.ಎಂ.ಎಚ್. ಆಸ್ಸನ್ ಮೌಲಾನಾ ಹೇಳಿಕೆ ನೀಡಿದ್ದಾರೆ. ಡಿಎಂಕೆ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮತ್ತೊಮ್ಮೆ ಸನಾತನ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮೌಲಾನಾ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

  • ಒಂದು ವೇಳೆ ಹಿಂದೂ ನಾಯಕರೊಬ್ಬರು ‘ತಮಿಳುನಾಡಿನಿಂದ ಇಸ್ಲಾಂ ಅನ್ನು ಹೊರಹಾಕಬೇಕು ಅಥವಾ ಇಸ್ಲಾಂ ಹೊರಗೆ ಹೋಗಿದೆ’, ಎಂಬ ಹೇಳಿಕೆ ನೀಡಿದ್ದರೆ, ಇಡೀ ದೇಶದಲ್ಲಿ ಕಿಚ್ಚು ಹತ್ತುತ್ತಿತ್ತು; ಆದರೆ ಹಿಂದೂಗಳಿಗೆ ಯಾರು ಏನೇ ಅವಮಾನ ಮಾಡಿದರೂ ‘ಸಂಯಮ’ ಪಾಲಿಸುತ್ತಾರೆ ಎಂಬುದು ಇದರಿಂದ ಕಂಡು ಬರುತ್ತದೆ.!
  • ಹಿಂದೂಗಳು ಇಂತಹ ಘಟನೆಗಳಲ್ಲಿ ಕಾನೂನುಬದ್ಧ ಮಾರ್ಗಗಳ ಮೂಲಕ ವಿರೋಧ ವ್ಯಕ್ತಪಡಿಸುವುದು ಅಗತ್ಯವಾಗಿದೆ!