ನಾಶಿಕ್: 'ಕಾರ್ಪೊರೇಟ್ ಜಿಹಾದ್' ಪ್ರಕರಣದ ಆರೋಪಿಗೆ ಆಶ್ರಯ ನೀಡಿದ ಪ್ರಕರಣ
ಮಹಾನಗರ ಪಾಲಿಕೆಯಿಂದ ನಗರಸೇವಕ ಮತೀನ್ ಪಟೇಲ್ ಗೆ ನೋಟಿಸ್ !

ಛತ್ರಪತಿ ಸಂಭಾಜಿನಗರ – ನಾಶಿಕದ ವೃತ್ತಿಪರ ಜಿಹಾದ್ ಪ್ರಕರಣದ ಮುಖ್ಯ ಸಂಶಯಿತ ಆರೋಪಿ ನಿದಾ ಖಾನ್ ಗೆ ‘ಎಐಎಂಐಎಂ’ (ಆಲ್ ಇಂಡಿಯಾ ಮಜಲಿಸ—ಇತ್ತೆಹಾದುಲ ಮುಸ್ಲಿಮೀನ ಅರ್ಥಾತ್ ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ಪಕ್ಷದ ನಗರಸೇವಕ ಮತೀನ್ ಪಟೇಲ್ ಆಶ್ರಯ ನೀಡಿದ್ದನು. ನಾರೇಗಾಂವನಲ್ಲಿರುವ ಆತನ ಮನೆಯಲ್ಲಿ ಆಕೆ ವಾಸವಾಗಿದ್ದಳು. ಪಟೇಲ್ ಅವರ ಮನೆ ಮತ್ತು ಬಿಸ್ಮಿಲ್ಲಾ ವಸಾಹತಿನಲ್ಲಿರುವ ಆತನ ಎರಡನೇ ಮನೆ ಹಾಗೂ ಮುಖ್ಯ ರಸ್ತೆಯಲ್ಲಿರುವ ಕಚೇರಿ ಇವೆಲ್ಲವೂ ಅನಧಿಕೃತವಾಗಿದ್ದವು. ಈ ಪ್ರಕರಣದಲ್ಲಿ ಮಹಾನಗರ ಪಾಲಿಕೆಯು ಆತನ ಆಸ್ತಿಗಳ ಮೇಲೆ ನೋಟಿಸ್ ಅಂಟಿಸಿದ್ದು, ಮೂರು ದಿನಗಳಲ್ಲಿ ತೃಪ್ತಿಕರ ಉತ್ತರ ನೀಡದಿದ್ದರೆ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಚಲಾಯಿಸಲಾಗುವುದೆಂದು ಹೇಳಿದೆ. ಈ ಬಗ್ಗೆ ಸರ್ಕಾರ ‘ಕಾರಣ ಕೇಳಿ’ ನೋಟಿಸ್ ಜಾರಿ ಮಾಡಿದೆ.
ಓವೈಸಿಯಿಂದ ಅಪರಾಧಿಗಳ ಸಮರ್ಥನೆ !
‘ಎಂಐಎಂ’ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಎಂದಿನಂತೆ ಮತಾಂಧ ಆರೋಪಿಗಳಾದ ನಿದಾ ಖಾನ್ ಮತ್ತು ಮತೀನ್ ಪಟೇಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ‘ಕೇವಲ ದ್ವೇಷದಿಂದ ಆರೋಪಗಳನ್ನು ಮಾಡಲಾಗುತ್ತಿದೆ. ಬುರ್ಖಾ ಧರಿಸುವುದು ಅನಧಿಕೃತವೇ? ಬುರ್ಖಾ ಮತ್ತು ಧಾರ್ಮಿಕ ಪುಸ್ತಕಗಳನ್ನು ಇಟ್ಟುಕೊಳ್ಳುವುದು ಅಪರಾಧವೇ?’ ಎಂದು ಪ್ರಶ್ನಿಸಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದಾರೆ. ಸುಶಿಕ್ಷಿತ ಮುಸ್ಲಿಂ ಯುವಕ-ಯುವತಿಯರನ್ನು ಗುರಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. (ಜಿಹಾದಿ ಮಾನಸಿಕತೆಯನ್ನು ಸಮರ್ಥಿಸುವ ಪಕ್ಷವನ್ನು ನಿಷೇಧಿಸುವಂತೆ ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ತಪ್ಪೇನಿದೆ? – ಸಂಪಾದಕರು).
ಮತೀನ್ ಪಟೇಲ್ ಬಂಧನದಲ್ಲಿದ್ದರೂ ಆತನ ಬೆಂಬಲಾರ್ಥವಾಗಿ ಫಲಕಗಳನ್ನು ಹಾಕಲಾಗಿದೆ. (ಇಂತಹ ಕೆಲಸ ಮಾಡುವವರನ್ನೂ ಪತ್ತೆ ಹಚ್ಚಿ ವಿಚಾರಣೆ ನಡೆಸಬೇಕು! – ಸಂಪಾದಕರು). ಕಳೆದ ತಿಂಗಳು ಶಹಾಗಂಜ್ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ತಂಡಕ್ಕೆ ಮತೀನ್ ಪಟೇಲ್ ಬೆದರಿಕೆ ಹಾಕಿದ್ದನು. (ಇಂತಹವರ ವಿರುದ್ಧ ಸಮಯೋಚಿತವಾಗಿ ಕಠಿಣ ನಿಯಂತ್ರಣ ಹೇರುವುದು ಅತ್ಯಗತ್ಯವಾಗಿದೆ! – ಸಂಪಾದಕರು).
ಮತಾಂಧೆ ನಿದಾ ಖಾನ್ ಸೇರಿದಂತೆ ಕುಟುಂಬದವರ ತೀವ್ರ ವಿಚಾರಣೆ !ಮುಖ್ಯ ಸಂಶಯಿತ ಆರೋಪಿ ನಿದಾ ಖಾನ್ ಮತ್ತು ಆಕೆಯ ತಾಯಿಯನ್ನು ಎದುರುಬದುರು ಕೂರಿಸಿ ಪೊಲೀಸರು ಒಂದೂವರೆ ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಗರೆದರು. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಆಕೆಗೆ ಸಹಾಯ ಮಾಡಿದವರನ್ನು ಪತ್ತೆಹಚ್ಚಲು ಪೊಲೀಸರು ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ. ನಿದಾ ತಲೆಮರೆಸಿಕೊಂಡಿದ್ದಾಗ ಆಕೆಗೆ ಆರ್ಥಿಕ ನೆರವು ನೀಡಿದವರು ಯಾರು ಮತ್ತು ಅವಳು ಯಾರ ಸಂಪರ್ಕದಲ್ಲಿದ್ದಳು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವಳ ತಾಯಿ, ತಂದೆ, ಸಹೋದರ ಮತ್ತು ಚಿಕ್ಕಮ್ಮನನ್ನೂ ವಿಚಾರಣೆ ನಡೆಸಿದರು. ಕುಟುಂಬದವರ ಉತ್ತರಗಳಲ್ಲಿ ವ್ಯತ್ಯಾಸವಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ