
ಪುಣೆ – ವಾರಕರಿ ಸಂಪ್ರದಾಯದ ಸಂತರು ಮತ್ತು ಮಹಾಪುರುಷರ ಬಗ್ಗೆ ಸತತವಾಗಿ ಅವಹೇಳನಕಾರಿಯಾಗಿ ಮಾತನಾಡುವ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ವಿಕಾಸ್ ಲವಾಂಡೆ ಅವರ ಮೇಲೆ ಲೋಣಿ ಕಾಳಭೋರ್ ಪ್ರದೇಶದಲ್ಲಿ ಮೇ 10 ರಂದು ಆಕ್ರೋಶಗೊಂಡ ಹಿಂದೂಗಳು ಮಸಿ ಎರಚಿದ್ದಾರೆ.
ವಿಕಾಸ್ ಲವಾಂಡೆ ಅವರು ಬೆಳಿಗ್ಗೆ ಪ್ರವಚನಕ್ಕೆ ಹೋಗುತ್ತಿದ್ದಾಗ, ಸಂಗ್ರಾಮ ಭಂಡಾರೆ ಮತ್ತು ಅವರ ಸಹಚರರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಲವಾಂಡೆ ಅವರು ಹಿಂದೂ ಸಂತರ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಅವರ ಮೇಲೆ ಮಸಿ ಎರಚಲಾಯಿತು. ಈ ಘಟನೆಯ ನಂತರ ಲವಾಂಡೆ ಅವರು ಲೋಣಿ ಕಾಳಭೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತರ ಅವಮಾನವನ್ನು ಸಹಿಸಲಾಗುವುದಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ಆಧ್ಯಾತ್ಮಿಕ ಆಘಾಡಿ

ವಿಕಾಸ್ ಲವಾಂಡೆ ಅವರು ವಾರಕರಿ ಸಂಪ್ರದಾಯದ ಆಧಾರಸ್ತಂಭಗಳಾದ ಮಹಾನ್ ಸಂತರ ಬಗ್ಗೆ ಸತತವಾಗಿ ಅತ್ಯಂತ ಕೀಳು ಮಟ್ಟದಲ್ಲಿ ಟೀಕೆ ಮಾಡುತ್ತಿದ್ದ. ಮಹಾರಾಷ್ಟ್ರದಲ್ಲಿ ವ್ಯಸನಮುಕ್ತಿ ಮತ್ತು ಸಂಸ್ಕಾರದ ಕಾರ್ಯವನ್ನು ನೆಲೆಗೊಳಿಸಿದ, ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸಂತರನ್ನು ‘ನುಸುಳುಕೋರರು’ ಎಂದು ಕರೆದು ಅವಮಾನಿಸುವ ಪಾಪವನ್ನು ಇವರು ಮಾಡಿದ್ದಾರೆ. ಇದು ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಮಾಡಿದ ಆಘಾತವಾಗಿದೆ. ಈ ಮೂಲಕ ನಾನು ಶರದ್ ಪವಾರ್ ಅವರಿಗೆ ಮನವಿ ಮಾಡುವುದೇನೆಂದರೆ, ಈಗಲಾದರೂ ನಿಮ್ಮ ಬೆಂಬಲಿಗರನ್ನು ಹತೋಟಿಯಲ್ಲಿಡಿ ಮತ್ತು ಈ ಮಹಾರಾಷ್ಟ್ರ ಹಾಗೂ ಮಹಾರಾಷ್ಟ್ರದ ಪೂಜ್ಯ ಸಂತರನ್ನು ಅವಮಾನಿಸುವುದನ್ನು ನಿಲ್ಲಿಸಿ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ