
ಪುಣೆ – ವಾರಕರಿ ಸಂಪ್ರದಾಯದ ಸಂತರು ಮತ್ತು ಮಹಾಪುರುಷರ ಬಗ್ಗೆ ಸತತವಾಗಿ ಅವಹೇಳನಕಾರಿಯಾಗಿ ಮಾತನಾಡುವ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ವಿಕಾಸ್ ಲವಾಂಡೆ ಅವರ ಮೇಲೆ ಲೋಣಿ ಕಾಳಭೋರ್ ಪ್ರದೇಶದಲ್ಲಿ ಮೇ 10 ರಂದು ಆಕ್ರೋಶಗೊಂಡ ಹಿಂದೂಗಳು ಮಸಿ ಎರಚಿದ್ದಾರೆ.
ವಿಕಾಸ್ ಲವಾಂಡೆ ಅವರು ಬೆಳಿಗ್ಗೆ ಪ್ರವಚನಕ್ಕೆ ಹೋಗುತ್ತಿದ್ದಾಗ, ಸಂಗ್ರಾಮ ಭಂಡಾರೆ ಮತ್ತು ಅವರ ಸಹಚರರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಲವಾಂಡೆ ಅವರು ಹಿಂದೂ ಸಂತರ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಅವರ ಮೇಲೆ ಮಸಿ ಎರಚಲಾಯಿತು. ಈ ಘಟನೆಯ ನಂತರ ಲವಾಂಡೆ ಅವರು ಲೋಣಿ ಕಾಳಭೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತರ ಅವಮಾನವನ್ನು ಸಹಿಸಲಾಗುವುದಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ಆಧ್ಯಾತ್ಮಿಕ ಆಘಾಡಿ

ವಿಕಾಸ್ ಲವಾಂಡೆ ಅವರು ವಾರಕರಿ ಸಂಪ್ರದಾಯದ ಆಧಾರಸ್ತಂಭಗಳಾದ ಮಹಾನ್ ಸಂತರ ಬಗ್ಗೆ ಸತತವಾಗಿ ಅತ್ಯಂತ ಕೀಳು ಮಟ್ಟದಲ್ಲಿ ಟೀಕೆ ಮಾಡುತ್ತಿದ್ದ. ಮಹಾರಾಷ್ಟ್ರದಲ್ಲಿ ವ್ಯಸನಮುಕ್ತಿ ಮತ್ತು ಸಂಸ್ಕಾರದ ಕಾರ್ಯವನ್ನು ನೆಲೆಗೊಳಿಸಿದ, ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸಂತರನ್ನು ‘ನುಸುಳುಕೋರರು’ ಎಂದು ಕರೆದು ಅವಮಾನಿಸುವ ಪಾಪವನ್ನು ಇವರು ಮಾಡಿದ್ದಾರೆ. ಇದು ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಮಾಡಿದ ಆಘಾತವಾಗಿದೆ. ಈ ಮೂಲಕ ನಾನು ಶರದ್ ಪವಾರ್ ಅವರಿಗೆ ಮನವಿ ಮಾಡುವುದೇನೆಂದರೆ, ಈಗಲಾದರೂ ನಿಮ್ಮ ಬೆಂಬಲಿಗರನ್ನು ಹತೋಟಿಯಲ್ಲಿಡಿ ಮತ್ತು ಈ ಮಹಾರಾಷ್ಟ್ರ ಹಾಗೂ ಮಹಾರಾಷ್ಟ್ರದ ಪೂಜ್ಯ ಸಂತರನ್ನು ಅವಮಾನಿಸುವುದನ್ನು ನಿಲ್ಲಿಸಿ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ