
ನಾಗ್ಪುರ – ಕರ್ತವ್ಯ ಲೋಪ ಎಸಗಿ, ಹಿರಿಯ ಅಧಿಕಾರಿಗಳಿಗೆ ಸೈಬರ್ ಅಪರಾಧದ ಕುರಿತು ಸುಳ್ಳು ಮತ್ತು ದಿಕ್ಕುತಪ್ಪಿಸುವ ವರದಿ ನೀಡಿದ ೩ ಪೊಲೀಸ್ ಅಧಿಕಾರಿಗಳು ಮತ್ತು ೬ ಸಿಬ್ಬಂದಿಗಳನ್ನು ನಾಗ್ಪುರದ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ. ಯೋಗೇಶ್ ಘಾರೆ, ಬಳಿರಾಮ ಸುತಾರ್ ಮತ್ತು ವಿಜಯ ರಾಣೆ ಅಮಾನತುಗೊಂಡ ಪೊಲೀಸ್ ಇನ್ಸ್ಪೆಕ್ಟರ್ಗಳ ಹೆಸರುಗಳು.
೧. ನಾಗ್ಪುರದಲ್ಲಿ ಆನ್ಲೈನ್ ಬೆಟ್ಟಿಂಗ್ ಆಪ್ ಮೂಲಕ ೫೦೦ ರೂಪಾಯಿಗಳ ವಂಚನೆಯ ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಿಜಯ ರಾಣೆ ನೇತೃತ್ವದ ವಿಶೇಷ ತಂಡವು ಪುಣೆ ಮತ್ತು ಮುಂಬಯಿಗೆ ತೆರಳಿತ್ತು.
೨. ಪುಣೆಯಲ್ಲಿ ಈ ತಂಡವು ಶಂಕಿತ ಆರೋಪಿ ಏಕಾಂಶ್ ಜೈನ್ನನ್ನು ಭೇಟಿ ಮಾಡಿ ನೋಟಿಸ್ ನೀಡಿತ್ತು; ಆದರೆ ನಾಗ್ಪುರಕ್ಕೆ ಮರಳಿದ ನಂತರ ತಂಡವು ‘ಆರೋಪಿ ಸಿಕ್ಕಿಲ್ಲ,’ ಎಂದು ಹಿರಿಯರಿಗೆ ಸುಳ್ಳು ವರದಿ ಸಲ್ಲಿಸಿತು. ತನಿಖೆಯ ಹೆಸರಿನಲ್ಲಿ ಆರೋಪಿಯಿಂದ ದೊಡ್ಡ ಮಟ್ಟದ ಹಣ ವಸೂಲಿ ಮಾಡಲಾಗಿದೆ ಎಂಬ ಚರ್ಚೆಯೂ ನಡೆದಿದೆ.
೩. ‘ಸೈಬರ್ ಸೆಲ್’ನ ಪೊಲೀಸ್ ಹವಾಲ್ದಾರ್ ಪ್ರಫುಲ್ ಠಾಕ್ರೆ ಅವರಿಗೆ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಿಜಯ ರಾಣೆ ಹಲ್ಲೆ ನಡೆಸಿದ ನಂತರ ಈ ಮೇಲಿನ ವಿಷಯ ಬೆಳಕಿಗೆ ಬಂದಿದೆ.
೪. ಈ ಘಟನೆಯ ನಂತರ ‘ಸೈಬರ್ ಸೆಲ್’ನ ಪೊಲೀಸ್ ಉಪ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದ್ದು, ಐ.ಪಿ.ಎಸ್. ಅಧಿಕಾರಿ ದೀಪಕ ಅಗರ್ವಾಲ್ ಅವರಿಗೆ ಸೈಬರ್ ವಿಭಾಗದೊಂದಿಗೆ ಆರ್ಥಿಕ ಅಪರಾಧ ವಿಭಾಗದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ‘ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತ ನಾಗರಿಕರಿಗೆ ನ್ಯಾಯ ಒದಗಿಸುವುದು,’ ತಮ್ಮ ಆದ್ಯತೆಯಾಗಿದೆ ಎಂದು ಅಗರ್ವಾಲ್ ಅವರು ಹೇಳಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !