ಬಂಗಾಳದಲ್ಲಿ ಭಾಜಪಗೆ ಸಿಕ್ಕ ಐತಿಹಾಸಿಕ ಗೆಲುವಿನ ನಂತರ ಭಾಜಪ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ನವದೆಹಲಿ – ಭಾರತೀಯ ಜನಸಂಘದ ಅಂದಿನ ಅಧ್ಯಕ್ಷ ಶ್ಯಾಮಾಪ್ರಸಾದ್ ಮುಖರ್ಜಿ ಅವರು ಕಂಡ ಕನಸು ಇಂದು ನನಸಾಗಿದೆ. ಈ ಮೊದಲು ಬಂಗಾಳದಲ್ಲಿ ಹಿಂಸಾಚಾರ ಮತ್ತು ಭಯದ ವಾತಾವರಣದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಈ ಬಾರಿ ಮೊದಲ ಬಾರಿಗೆ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಬ್ಬನೇ ಒಬ್ಬ ಮುಗ್ಧ ನಾಗರಿಕನ ಹತ್ಯೆಯಾಗಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು.
Speaking from the @BJP4India HQ in Delhi. https://t.co/Eu15QXV34v
— Narendra Modi (@narendramodi) May 4, 2026
ಬಾಂಗ್ಲಾದೇಶದ ನುಸುಳುಕೋರರನ್ನು ಬಿಡುವುದಿಲ್ಲ. ಬಂಗಾಳದ ಮಹಿಳೆಯರಿಗೆ ಈಗ ಭದ್ರತೆ ಒದಗಿಸಲಾಗುವುದು. ಇಂದಿನಿಂದ ಬಂಗಾಳದ ಹೊಸ ಯಾತ್ರೆಯನ್ನು ಆರಂಭಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಭಾಜಪ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮಹತ್ವದ ಹೇಳಿಕೆ ನೀಡಿದರು. ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಪಡೆದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.
“No Mercy for Infiltrators!” – PM’s Strong Message After #BengalVictory
Following BJP’s historic win in Bengal, the Prime Minister addressed party workers with a firm stance against Bangladeshi infiltrators.
He stated that the long-cherished vision of Shyama Prasad Mookerjee… pic.twitter.com/XElAfJALtA
— Sanatan Prabhat (@SanatanPrabhat) May 4, 2026
ಪ್ರಧಾನಿ ಮಾತು ಮುಂದುವರೆಸುತ್ತಾ,
ಕಾಂಗ್ರೆಸ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಯಾವ ಕಮ್ಯುನಿಸ್ಟರ ಸಿದ್ಧಾಂತದಿಂದಾಗಿ ಅವರು ಈಗ ದೇಶಾದ್ಯಂತ ರಾಜಕೀಯ ಅಂತ್ಯ ಕಂಡಿದ್ದಾರೋ, ಅದೇ ಸಿದ್ಧಾಂತವನ್ನು ತೆಗೆದುಕೊಂಡು ಕಾಂಗ್ರೆಸ್ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ನಗರ ನಕ್ಸಲರ ಗುಂಪಾಗಿ ಬದಲಾಗುತ್ತಿದೆ. ಅದರ ಅಂತ್ಯವೂ ಶೀಘ್ರದಲ್ಲೇ ಆಗಲಿದೆ ಎಂದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ