ಬಾಂಗ್ಲಾದೇಶದ ನುಸುಳುಕೋರರನ್ನು ಬಿಡುವುದಿಲ್ಲ! – ಪ್ರಧಾನಿ ಮೋದಿ

ಬಂಗಾಳದಲ್ಲಿ ಭಾಜಪಗೆ ಸಿಕ್ಕ ಐತಿಹಾಸಿಕ ಗೆಲುವಿನ ನಂತರ ಭಾಜಪ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ನವದೆಹಲಿ – ಭಾರತೀಯ ಜನಸಂಘದ ಅಂದಿನ ಅಧ್ಯಕ್ಷ ಶ್ಯಾಮಾಪ್ರಸಾದ್ ಮುಖರ್ಜಿ ಅವರು ಕಂಡ ಕನಸು ಇಂದು ನನಸಾಗಿದೆ. ಈ ಮೊದಲು ಬಂಗಾಳದಲ್ಲಿ ಹಿಂಸಾಚಾರ ಮತ್ತು ಭಯದ ವಾತಾವರಣದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಈ ಬಾರಿ ಮೊದಲ ಬಾರಿಗೆ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಬ್ಬನೇ ಒಬ್ಬ ಮುಗ್ಧ ನಾಗರಿಕನ ಹತ್ಯೆಯಾಗಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು.

ಬಾಂಗ್ಲಾದೇಶದ ನುಸುಳುಕೋರರನ್ನು ಬಿಡುವುದಿಲ್ಲ. ಬಂಗಾಳದ ಮಹಿಳೆಯರಿಗೆ ಈಗ ಭದ್ರತೆ ಒದಗಿಸಲಾಗುವುದು. ಇಂದಿನಿಂದ ಬಂಗಾಳದ ಹೊಸ ಯಾತ್ರೆಯನ್ನು ಆರಂಭಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಭಾಜಪ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮಹತ್ವದ ಹೇಳಿಕೆ ನೀಡಿದರು. ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಪಡೆದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಿ ಮಾತು ಮುಂದುವರೆಸುತ್ತಾ,

ಕಾಂಗ್ರೆಸ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಯಾವ ಕಮ್ಯುನಿಸ್ಟರ ಸಿದ್ಧಾಂತದಿಂದಾಗಿ ಅವರು ಈಗ ದೇಶಾದ್ಯಂತ ರಾಜಕೀಯ ಅಂತ್ಯ ಕಂಡಿದ್ದಾರೋ, ಅದೇ ಸಿದ್ಧಾಂತವನ್ನು ತೆಗೆದುಕೊಂಡು ಕಾಂಗ್ರೆಸ್ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ನಗರ ನಕ್ಸಲರ ಗುಂಪಾಗಿ ಬದಲಾಗುತ್ತಿದೆ. ಅದರ ಅಂತ್ಯವೂ ಶೀಘ್ರದಲ್ಲೇ ಆಗಲಿದೆ ಎಂದರು.