ಬಂಗಾಳದ ವಿಜಯವು ನುಸುಳುವಿಕೆ ಮತ್ತು ಭಯೋತ್ಪಾದನೆಯಿಂದ ದೇಶವನ್ನು ರಕ್ಷಿಸುವಂತದ್ದು! – ದೇವೇಂದ್ರ ಫಡಣವಿಸ, ಮುಖ್ಯಮಂತ್ರಿ, ಮಹಾರಾಷ್ಟ್ರ

ಮುಂಬಯಿ – ಬಂಗಾಳದ ವಿಜಯವು ಕೇವಲ ಒಂದು ರಾಜ್ಯದ ವಿಜಯವಲ್ಲ. ಭಾರತದೊಳಗಿನ ನುಸುಳುವಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಂತಹ ಎಲ್ಲಾ ಅಪಾಯಗಳಿಂದ ಭಾರತವನ್ನು ರಕ್ಷಿಸುವ ವಿಜಯ ಇದಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಅವರು ಹೇಳಿಕೆ ನೀಡಿದ್ದಾರೆ. ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಯಶಸ್ಸಿನ ಕುರಿತು ಭಾಜಪದ ಪ್ರದೇಶ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಸಭೆಯಲ್ಲಿ ಮುಖ್ಯಮಂತ್ರಿಗಳು ಮೇಲಿನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾಜಪದ ಪ್ರದೇಶಾಧ್ಯಕ್ಷ ರವೀಂದ್ರ ಚವಾಣ ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಅವರು, ಹಿಂದೆ ಬಂಗಾಲದಲ್ಲಿ ೩೦ ವರ್ಷ ಕಾಂಗ್ರೆಸ್, ೩೬ ವರ್ಷ ಎಡಪಕ್ಷಗಳು ಮತ್ತು ೧೫ ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ ಸರಕಾರ ಇತ್ತು. ಒಂದು ಕಾಲದಲ್ಲಿ ಬಂಗಾಳವು ದೇಶದ ಮೊದಲ ಕೈಗಾರಿಕಾ ಕೇಂದ್ರವಾಗಿತ್ತು; ಆದರೆ ಮಮತಾ ಬ್ಯಾನರ್ಜಿ ಅವರ ಕಾಲದಲ್ಲಿ ಬಂಗಾಳದಲ್ಲಿ ಜಂಗಲ್‌ರಾಜ್ ನಿರ್ಮಾಣವಾಯಿತು. ಜನತೆಯು ಮತಪೆಟ್ಟಿಗೆಯ ಮೂಲಕ ಜಂಗಲ್ ರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಸುರಕ್ಷತೆಗಾಗಿ ಬಂಗಾಳದ ವಿಜಯವು ಅತ್ಯಂತ ಮಹತ್ವದ್ದಾಗಿದೆ, ಎಂದು ಹೇಳಿದರು.