
‘ಕಲಿಯುಗವು ೪ ಲಕ್ಷದ ೩೨ ಸಾವಿರ ವರ್ಷಗಳದ್ದಾಗಿದೆ. ಅದರಲ್ಲಿ ಕೇವಲ ೫ ಸಾವಿರದ ೧೨೭ ವರ್ಷಗಳು ಮಾತ್ರ ಕಳೆದಿವೆ. ಈ ಅಲ್ಪಕಾಲದ ಪರಿಣಾಮವನ್ನೇ ಈಗ ಸಹಿಸುವುದು ಕಷ್ಟಕರವಾಗುತ್ತಿರುವಾಗ, ಮುಂದಿನ ಕಾಲದ ದುಷ್ಪರಿಣಾಮಗಳು ಇನ್ನೆಷ್ಟು ಭಯಂಕರವಾಗಿರಬಹುದು ! ಇಂತಹ ಕಲಿಯುಗದಲ್ಲಿ ಮತ್ತೆ ಜನ್ಮತಾಳಿ ಅದರ ದುಷ್ಪರಿಣಾಮಗಳನ್ನು ಅನುಭವಿಸಬಾರದು ಎಂದಿದ್ದರೆ, ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವುದೇ ಏಕೈಕ ಆಯ್ಕೆಯಾಗಿದೆ. ಅದಕ್ಕಾಗಿಯಾದರೂ ಸಾಧನೆ ಮಾಡಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಅಧ್ಯಾತ್ಮಶಾಸ್ತ್ರದ ಗ್ರಂಥಗಳನ್ನು ಓದುವುದರಿಂದಾಗುವ ಲಾಭ !
‘ಅಧ್ಯಾತ್ಮಶಾಸ್ತ್ರದ ಗ್ರಂಥಗಳನ್ನು ಓದಿದಾಗ ಓದುಗನು ಇನ್ನು ಉತ್ತಮವಾಗಿ ಸಾಧನೆ ಮಾಡಲು ಪ್ರಾರಂಭಿಸುತ್ತಾನೆ, ಅವನ ಮಾಯೆಯ ಮೇಲಿನ ಆಕರ್ಷಣೆ ಕಡಿಮೆಯಾಗಿ ಅವನು ಸಾಧನೆಯಲ್ಲಿ ಮುಂದುವರಿಯುತ್ತಾನೆ. ಈ ಲಾಭವು ಬೇರೆ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಓದಿನಿಂದ ಸಿಗುವುದಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !