ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

 ‘ಕಲಿಯುಗವು  ೪ ಲಕ್ಷದ ೩೨ ಸಾವಿರ ವರ್ಷಗಳದ್ದಾಗಿದೆ. ಅದರಲ್ಲಿ  ಕೇವಲ ೫ ಸಾವಿರದ ೧೨೭ ವರ್ಷಗಳು ಮಾತ್ರ ಕಳೆದಿವೆ. ಈ ಅಲ್ಪಕಾಲದ ಪರಿಣಾಮವನ್ನೇ ಈಗ ಸಹಿಸುವುದು ಕಷ್ಟಕರವಾಗುತ್ತಿರುವಾಗ,  ಮುಂದಿನ ಕಾಲದ ದುಷ್ಪರಿಣಾಮಗಳು ಇನ್ನೆಷ್ಟು ಭಯಂಕರವಾಗಿರಬಹುದು ! ಇಂತಹ ಕಲಿಯುಗದಲ್ಲಿ ಮತ್ತೆ  ಜನ್ಮತಾಳಿ ಅದರ ದುಷ್ಪರಿಣಾಮಗಳನ್ನು ಅನುಭವಿಸಬಾರದು ಎಂದಿದ್ದರೆ, ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವುದೇ ಏಕೈಕ ಆಯ್ಕೆಯಾಗಿದೆ.  ಅದಕ್ಕಾಗಿಯಾದರೂ ಸಾಧನೆ ಮಾಡಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಧ್ಯಾತ್ಮಶಾಸ್ತ್ರದ ಗ್ರಂಥಗಳನ್ನು ಓದುವುದರಿಂದಾಗುವ ಲಾಭ ! 

 ‘ಅಧ್ಯಾತ್ಮಶಾಸ್ತ್ರದ ಗ್ರಂಥಗಳನ್ನು ಓದಿದಾಗ ಓದುಗನು ಇನ್ನು ಉತ್ತಮವಾಗಿ ಸಾಧನೆ ಮಾಡಲು ಪ್ರಾರಂಭಿಸುತ್ತಾನೆ, ಅವನ ಮಾಯೆಯ ಮೇಲಿನ ಆಕರ್ಷಣೆ ಕಡಿಮೆಯಾಗಿ ಅವನು ಸಾಧನೆಯಲ್ಲಿ ಮುಂದುವರಿಯುತ್ತಾನೆ. ಈ ಲಾಭವು ಬೇರೆ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಓದಿನಿಂದ ಸಿಗುವುದಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ