
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಭದ್ರತಾ ಪಡೆಗಳು ದೊಡ್ಡ ಭಯೋತ್ಪಾದನಾ ಸಂಚನ್ನು ಹತ್ತಿಕ್ಕಿವೆ. ಬಾಂಗ್ಲಾದೇಶ ಪೊಲೀಸ್ ಪ್ರಧಾನ ಕಚೇರಿಯು ಹೊರಡಿಸಿದ ಗುಪ್ತಚರ ಸುತ್ತೋಲೆಯಿಂದ ಈ ಮಾಹಿತಿ ಹೊರಬಂದಿದೆ. ಈ ಸಂಚಿನ ಗುರಿ ದೇಶದ ಪ್ರಮುಖ ಸಂಸ್ಥೆಗಳಾಗಿದ್ದವು, ಇದರಲ್ಲಿ ಸಂಸತ್ತು, ಸೈನ್ಯ ಮತ್ತು ಪೊಲೀಸ್ ಕಚೇರಿಗಳು, ಧಾರ್ಮಿಕ ಸ್ಥಳಗಳು, ಮನರಂಜನಾ ಕೇಂದ್ರಗಳು ಮತ್ತು ಢಾಕಾದ ಪ್ರಸಿದ್ಧ ಶಹಾಬಾಗ್ ಪ್ರದೇಶ ಸೇರಿದ್ದವು.
ಸೈನ್ಯದಿಂದ ವಜಾಗೊಂಡ ಸೈನಿಕರೊಂದಿಗೆ ಸಂಪರ್ಕ
ನಿಷೇಧಿತ ಭಯೋತ್ಪಾದನಾ ಸಂಘಟನೆಯ ಇಶ್ಟಿಯಾಕ್ ಅಹ್ಮದ್ ಮತ್ತು ಅಬು ಮಹಮ್ಮದ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ನಂತರ ಈ ಸಂಚು ಬಹಿರಂಗಗೊಂಡಿತು. ವಿಚಾರಣೆಯ ವೇಳೆ, ಈ ಇಬ್ಬರೂ ಸೈನ್ಯದಿಂದ ಹೊರಹಾಕಲ್ಪಟ್ಟ ೨ ಸೈನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳು ಸ್ಫೋಟಕಗಳು, ನಾಡಬಾಂಬ್ಗಳು ಮತ್ತು ಹರಿತವಾದ ಆಯುಧಗಳನ್ನು ಬಳಸಿ ದೇಶಾದ್ಯಂತದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದರು.
ಬಾಂಗ್ಲಾದೇಶ ವಾಯುಪಡೆಯಲ್ಲೂ ಭಯೋತ್ಪಾದಕರ ಪ್ರವೇಶ
ಕೆಲವು ದಿನಗಳ ಹಿಂದಷ್ಟೇ ಬಾಂಗ್ಲಾದೇಶ ವಾಯುಪಡೆಯ ಗುಪ್ತಚರ ವಿಭಾಗವು ವಾಯುಪಡೆಯ ಅಧಿಕಾರಿಗಳು ಮತ್ತು ಸೈನಿಕರಿಗೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂಬ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಇರುವುದನ್ನು ಬಹಿರಂಗಪಡಿಸಿತ್ತು. ನಂತರ ಈ ವಿಭಾಗವು ವಾಯುಪಡೆಯ ೩ ಪ್ರಮುಖ ನೆಲೆಗಳ ಮೇಲೆ ದಾಳಿ ನಡೆಸಿ ೨ ಅಧಿಕಾರಿಗಳು ಮತ್ತು ೧೦ ಸೈನಿಕರನ್ನು ಬಂಧಿಸಿತು. ಈ ಕ್ರಮಕ್ಕೆ ಮುನ್ನವೇ ೧೦ ರಿಂದ ೧೨ ಸೈನಿಕರು ತಲೆಮರೆಸಿಕೊಂಡಿದ್ದರು, ಅವರಲ್ಲಿ ಕೆಲವರು ಪಾಕಿಸ್ತಾನ, ಟರ್ಕಿ, ನ್ಯೂಜಿಲೆಂಡ್ ಮತ್ತು ಪೋರ್ಚುಗಲ್ ದೇಶಗಳನ್ನು ತಲುಪಿದ್ದಾರೆ. ಪದಾತಿದಳ ಮತ್ತು ನೌಕಾಪಡೆಯ ಸೈನಿಕರಿಗೂ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕವಿದೆಯೇ? ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಈಗ ನಡೆಯುತ್ತಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !