ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ, ಗೋಮಾಂಸ ತಿನ್ನಿಸಿದ ಮುಸಲ್ಮಾನನ ಬಂಧನ

ಮುಜಫರ್‌ನಗರ (ಉತ್ತರ ಪ್ರದೇಶ) ಇಲ್ಲಿನ ಘಟನೆ

ಮುಜಫರ್‌ನಗರ (ಉತ್ತರ ಪ್ರದೇಶ) – ಇಲ್ಲಿ ಓರ್ವ ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ, ಅವನಿಗೆ ನಮಾಜ್ ಪಠಿಸಲು ಒತ್ತಾಯಿಸಿದ ಮತ್ತು ಗೋಮಾಂಸ ತಿನ್ನಿಸಿದ ಪ್ರಕರಣದಲ್ಲಿ ಪೊಲೀಸರು ಅಫ್ಸರ್ ಹೆಸರಿನ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ, ಸಂಬಂಧಪಟ್ಟ ಯುವಕನು ನಮಾಜ್ ಪಠಿಸುತ್ತಿರುವುದು ಮತ್ತು ವಜೂ (ನಮಾಜ್‌ಗೂ ಮುನ್ನ ಕೈಕಾಲುಗಳನ್ನು ತೊಳೆಯುವುದು) ಮಾಡುತ್ತಿರುವುದು ಕಂಡುಬರುತ್ತಿದೆ. ಈ ಘಟನೆಯು ಭೈಕಾರೇಡಿ ಗ್ರಾಮದಲ್ಲಿ ನಡೆದಿದೆ. ಹರಿದ್ವಾರದ ನಿವಾಸಿಯಾದ ರಾಕೇಶ್ ಶರ್ಮಾ ಎಂಬಾತನನ್ನು ಆರೋಪಿ ಅಫ್ಸರ್ ೧೫ ವರ್ಷಗಳ ಹಿಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದನು ಮತ್ತು ಅವನಿಂದ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದನು. ಅಫ್ಸರ್ ಮತ್ತು ಅವನ ಕುಟುಂಬದವರು ರಾಕೇಶ್‌ನಿಗೆ ಥಳಿಸಿ, ಆನಂತರ ಅವನನ್ನು ಮತಾಂತರ ಮಾಡಿದರು. ಅವನಿಂದ ನಮಾಜ್ ಮಾಡಿಸಿದರು. ಇದರ ವಿಡಿಯೋ ಹೊರಬಂದ ನಂತರ ಹಿಂದೂ ಸಂಘರ್ಷ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೋಪಾ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಮುತ್ತಿಗೆ ಹಾಕಿದರು. ಆನಂತರ ಪೊಲೀಸರು ಅಫ್ಸರ್‌ನನ್ನು ಬಂಧಿಸಿದರು.

ಸಂಪಾದಕೀಯ ನಿಲುವು

  • ಒಬ್ಬನಾದರೂ ಮುಸಲ್ಮಾನನನ್ನು ಬಲವಂತವಾಗಿ ಹಿಂದೂ ಮಾಡಬಹುದೇ? ಮುಸಲ್ಮಾನರಿಗೆ ಧರ್ಮಶಿಕ್ಷಣ ಸಿಕ್ಕಿ ಅವರು ಧರ್ಮಾಚರಣೆಯನ್ನು ಮಾಡುತ್ತಿರುವುದರಿಂದ ಅವರು ತಮ್ಮ ಧರ್ಮವನ್ನು ಬಿಡುವುದಿಲ್ಲ, ಬದಲಾಗಿ ಹಿಂದೂಗಳನ್ನೇ ಮತಾಂತರಗೊಳಿಸುತ್ತಾರೆ, ಇದು ಹಿಂದೂಗಳಿಗೆ ಯಾವಾಗ ಅರ್ಥವಾಗುತ್ತದೆ?
  • ಎಲ್ಲಿಯವರೆಗೆ ಹಿಂದೂ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರಿಂದ ಧರ್ಮಾಚರಣೆ ಮಾಡಿಸುವುದಿಲ್ಲವೋ, ಅಲ್ಲಿಯವರೆಗೆ ಹಿಂದೂಗಳ ಪರಿಸ್ಥಿತಿ ಹೀಗೆಯೇ ಇರುತ್ತದೆ!