ಮುಜಫರ್ನಗರ (ಉತ್ತರ ಪ್ರದೇಶ) ಇಲ್ಲಿನ ಘಟನೆ

ಮುಜಫರ್ನಗರ (ಉತ್ತರ ಪ್ರದೇಶ) – ಇಲ್ಲಿ ಓರ್ವ ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ, ಅವನಿಗೆ ನಮಾಜ್ ಪಠಿಸಲು ಒತ್ತಾಯಿಸಿದ ಮತ್ತು ಗೋಮಾಂಸ ತಿನ್ನಿಸಿದ ಪ್ರಕರಣದಲ್ಲಿ ಪೊಲೀಸರು ಅಫ್ಸರ್ ಹೆಸರಿನ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ, ಸಂಬಂಧಪಟ್ಟ ಯುವಕನು ನಮಾಜ್ ಪಠಿಸುತ್ತಿರುವುದು ಮತ್ತು ವಜೂ (ನಮಾಜ್ಗೂ ಮುನ್ನ ಕೈಕಾಲುಗಳನ್ನು ತೊಳೆಯುವುದು) ಮಾಡುತ್ತಿರುವುದು ಕಂಡುಬರುತ್ತಿದೆ. ಈ ಘಟನೆಯು ಭೈಕಾರೇಡಿ ಗ್ರಾಮದಲ್ಲಿ ನಡೆದಿದೆ. ಹರಿದ್ವಾರದ ನಿವಾಸಿಯಾದ ರಾಕೇಶ್ ಶರ್ಮಾ ಎಂಬಾತನನ್ನು ಆರೋಪಿ ಅಫ್ಸರ್ ೧೫ ವರ್ಷಗಳ ಹಿಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದನು ಮತ್ತು ಅವನಿಂದ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದನು. ಅಫ್ಸರ್ ಮತ್ತು ಅವನ ಕುಟುಂಬದವರು ರಾಕೇಶ್ನಿಗೆ ಥಳಿಸಿ, ಆನಂತರ ಅವನನ್ನು ಮತಾಂತರ ಮಾಡಿದರು. ಅವನಿಂದ ನಮಾಜ್ ಮಾಡಿಸಿದರು. ಇದರ ವಿಡಿಯೋ ಹೊರಬಂದ ನಂತರ ಹಿಂದೂ ಸಂಘರ್ಷ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೋಪಾ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಮುತ್ತಿಗೆ ಹಾಕಿದರು. ಆನಂತರ ಪೊಲೀಸರು ಅಫ್ಸರ್ನನ್ನು ಬಂಧಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ