ಮುಜಫರ್ನಗರ (ಉತ್ತರ ಪ್ರದೇಶ) ಇಲ್ಲಿನ ಘಟನೆ

ಮುಜಫರ್ನಗರ (ಉತ್ತರ ಪ್ರದೇಶ) – ಇಲ್ಲಿ ಓರ್ವ ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ, ಅವನಿಗೆ ನಮಾಜ್ ಪಠಿಸಲು ಒತ್ತಾಯಿಸಿದ ಮತ್ತು ಗೋಮಾಂಸ ತಿನ್ನಿಸಿದ ಪ್ರಕರಣದಲ್ಲಿ ಪೊಲೀಸರು ಅಫ್ಸರ್ ಹೆಸರಿನ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ, ಸಂಬಂಧಪಟ್ಟ ಯುವಕನು ನಮಾಜ್ ಪಠಿಸುತ್ತಿರುವುದು ಮತ್ತು ವಜೂ (ನಮಾಜ್ಗೂ ಮುನ್ನ ಕೈಕಾಲುಗಳನ್ನು ತೊಳೆಯುವುದು) ಮಾಡುತ್ತಿರುವುದು ಕಂಡುಬರುತ್ತಿದೆ. ಈ ಘಟನೆಯು ಭೈಕಾರೇಡಿ ಗ್ರಾಮದಲ್ಲಿ ನಡೆದಿದೆ. ಹರಿದ್ವಾರದ ನಿವಾಸಿಯಾದ ರಾಕೇಶ್ ಶರ್ಮಾ ಎಂಬಾತನನ್ನು ಆರೋಪಿ ಅಫ್ಸರ್ ೧೫ ವರ್ಷಗಳ ಹಿಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದನು ಮತ್ತು ಅವನಿಂದ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದನು. ಅಫ್ಸರ್ ಮತ್ತು ಅವನ ಕುಟುಂಬದವರು ರಾಕೇಶ್ನಿಗೆ ಥಳಿಸಿ, ಆನಂತರ ಅವನನ್ನು ಮತಾಂತರ ಮಾಡಿದರು. ಅವನಿಂದ ನಮಾಜ್ ಮಾಡಿಸಿದರು. ಇದರ ವಿಡಿಯೋ ಹೊರಬಂದ ನಂತರ ಹಿಂದೂ ಸಂಘರ್ಷ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೋಪಾ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಮುತ್ತಿಗೆ ಹಾಕಿದರು. ಆನಂತರ ಪೊಲೀಸರು ಅಫ್ಸರ್ನನ್ನು ಬಂಧಿಸಿದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!