ಕಾಂಗ್ರೆಸ್ ಅಭ್ಯರ್ಥಿ ಸಯಾಮ್ ಚೌಧರಿ ಸೇರಿದಂತೆ 7 ಮಂದಿಯ ಬಂಧನ : Malda Case

ಮಾಲ್ಡಾ (ಬಂಗಾಳ)ದಲ್ಲಿ ವಿಶೇಷ ತೀವ್ರ ಪರಿಶೀಲನಾ (ಎಸ್‌ಐಆರ್) ಪ್ರಕ್ರಿಯೆಯ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಪ್ರಕರಣ!

ಕೋಲಕಾತಾ – ಬಂಗಾಳದ ಮಾಲ್ಡಾದಲ್ಲಿ ವಿಶೇಷ ತೀವ್ರ ಪರಿಶೀಲನಾ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ತೊಡಗಿದ್ದ ಸರಕಾರಿ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಿಂಸಾಚಾರ ಹರಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ಮೊಥಾಬಾಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಯಾಮ್ ಚೌಧರಿ ಸೇರಿದಂತೆ 7 ಜನರನ್ನು ಬಂಧಿಸಿದೆ. ಇವರಲ್ಲಿ ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ (ಐಎಸ್‌ಎಫ್) ನ ಗ್ರಾಮ ಪಂಚಾಯತ್ ಸದಸ್ಯ ಗುಲಾಮ್ ರಬ್ಬಾನಿ ಕೂಡ ಸೇರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಯಾಮ್ ಚೌಧರಿ ಮತ್ತು ಅವರ ಸಹಚರರನ್ನು ಮೊಥಾಬಾಡಿಯಲ್ಲಿ ಪ್ರಚಾರದ ವೇಳೆ ಬಂಧಿಸಲಾಗಿದೆ. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಬಂಗಾಳ ಪೊಲೀಸರು ‘ಎಐಎಂಐಎಂ’ (‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’) ಮುಖಂಡ ಮೊಫಕ್ಕರುಲ್ ಇಸ್ಲಾಂನನ್ನು ವಶಕ್ಕೆ ಪಡೆದಿದ್ದರು. ಏಪ್ರಿಲ್ 1, 2026 ರಂದು ಮಾಲ್ಡಾದಲ್ಲಿ ‘ಎಸ್‌ಐಆರ್’ ಪ್ರಕ್ರಿಯೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯನ್ನು ತೃಣಮೂಲ ಕಾಂಗ್ರೆಸ್ ಮತ್ತು ಇತರ ಕೆಲವರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ‘ಎನ್‌ಐಎ’ಗೆ ವಹಿಸಲಾಗಿದೆ.

ಸಂಪಾದಕೀಯ ನಿಲುವು

  • ಇಂತಹ ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಅವರು ಚುನಾವಣೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು!
  • ಆಯ್ಕೆಯಾಗುವ ಮುನ್ನವೇ ಹಿಂಸಾಚಾರ ನಡೆಸುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾದ ಮೇಲೆ ಇನ್ನೇನು ಮಾಡಬಹುದು ಎಂದು ಯೋಚಿಸದಿರುವುದೇ ಲೇಸು! ಇಂತಹ ಪಕ್ಷವನ್ನು ನಿಷೇಧಿಸಬೇಕು!
  • ಸಾಮಾನ್ಯವಾಗಿ ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಓಡಾಡುವ ಕಾಂಗ್ರೆಸ್‌ನ 'ಸಂವಿಧಾನ ರಕ್ಷಕ' ನಾಯಕ ರಾಹುಲ್ ಗಾಂಧಿಯವರು ಸರಕಾರಿ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಟಿಕೆಟ್ ನೀಡುತ್ತಾರೆ ಎಂಬುದನ್ನು ಗಮನಿಸಿ!