೧೯೭೧ ರಲ್ಲಿ ಎರಡು ಭಾಗ ಮಾಡಿದ್ದೇವೆ; ಈಗ ಎಷ್ಟು ಭಾಗವಾಗಲಿವೆ ಎಂದು ಹೇಳಲು ಸಾಧ್ಯವಿಲ್ಲ!

ರಾಜನಾಥ್ ಸಿಂಗ್ ಅವರಿಂದ ಪಾಕಿಸ್ತಾನದ ರಕ್ಷಣಾ ಸಚಿವರಿಗೆ ತಕ್ಕ ಪ್ರತ್ಯುತ್ತರ!

​ಬೈರಕಾಪುರ (ಬಂಗಾಳ) – ‘ಪಾಕಿಸ್ತಾನ ಕೋಲ್ಕಾತಾವರೆಗೆ ನುಗ್ಗಲಿದೆ’ ಎಂಬ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿರುಗೇಟು ನೀಡಿದ್ದಾರೆ. ೧೯೭೧ ರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಎರಡ ಭಾಗ ಮಾಡಿತ್ತು ಎಂಬುದನ್ನು ಅವರು ಮರೆಯಬಾರದು ಎಂದು ಸಿಂಗ್ ಹೇಳಿದರು. ಈಗ ಒಂದು ವೇಳೆ ಪಾಕಿಸ್ತಾನವು ಬಂಗಾಳದ ಮೇಲೆ ವಕ್ರದೃಷ್ಟಿ ಹಾಕಿದರೆ, ಪಾಕ್ ಎಷ್ಟು ಭಾಗಗಳಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಪಾಕಿಸ್ತಾನವು ಸಂಯಮದಿಂದ ಇರಬೇಕು ಮತ್ತು ಇತಿಹಾಸದಿಂದ ಪಾಠ ಕಲಿಯಬೇಕು ಎಂದು ಅವರು ಎಚ್ಚರಿಸಿದರು. ಸಿಂಗ್ ಅವರು ಇಲ್ಲಿನ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.

​ತೃಣಮೂಲ ಕಾಂಗ್ರೆಸ್ ನ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಆಸಿಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್ ಮಾತನಾಡಿ, ದೇಶದ ರಕ್ಷಣಾ ಸಚಿವನಾಗಿ ನಾನೇ ಸ್ವತಃ ಈ ನಿಲುವನ್ನು ಮಂಡಿಸುತ್ತಿದ್ದೇನೆ. ಪ್ರತಿ ಬಾರಿಯೂ ಪ್ರಧಾನಿಯವರೇ ಮಾತನಾಡುವ ಅವಶ್ಯಕತೆ ಇಲ್ಲ. ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರದ ನಿಲುವು ಸಂಪೂರ್ಣ ಸ್ಪಷ್ಟವಾಗಿದೆ ಎಂದು ಹೇಳಿದರು.