ಸೀತಾಪುರ (ಉತ್ತರ ಪ್ರದೇಶ) ದಲ್ಲಿ ಆಡಳಿತದಿಂದ ಅಕ್ರಮ ಮಸೀದಿ ಧ್ವಂಸ !

ಮಸೀದಿ ಕೆಡವಲು ತಗುಲಿದ ೪೦ ಲಕ್ಷ ರೂಪಾಯಿ ವೆಚ್ಚವನ್ನು ವ್ಯವಸ್ಥಾಪಕರಿಂದಲೇ ವಸೂಲಿ !

ಸೀತಾಪುರ (ಉತ್ತರ ಪ್ರದೇಶ) – ಸೀತಾಪುರ ಜಿಲ್ಲೆಯ ಲಹರಪುರ ತಾಲ್ಲೂಕಿನ ಬೆಹಟಿ ಮೊಹಲ್ಲಾದ ಕಬ್ರದ ಭೂಮಿಯಲ್ಲಿ ೧೨ ವರ್ಷಗಳ ಹಿಂದೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಆಡಳಿತವು ಧ್ವಂಸಗೊಳಿಸಿದೆ. ಜಿಲ್ಲಾಧಿಕಾರಿ ರಾಜ ಗಣಪತಿ ಆರ್. ಅವರ ಆದೇಶದಂತೆ ಪೊಲೀಸ್ ಬಂದೋಬಸ್ತ್‌ನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಲಹರಪುರ ತಹಶೀಲ್ದಾರರು ಮಸೀದಿಯ ಮುತವಲ್ಲಿ (ವ್ಯವಸ್ಥಾಪಕ) ಆಲಂ ಅವರಿಗೆ ಅತಿಕ್ರಮಣ ತೆರವುಗೊಳಿಸಲು ತಗುಲಿದ ಆಡಳಿತಾತ್ಮಕ ವೆಚ್ಚವಾದ ೩೯ ಲಕ್ಷದ ೫೫ ಸಾವಿರ ರೂಪಾಯಿಗಳ ಬಿಲ್‌ ನೀಡಿದ್ದಾರೆ. ಈ ಮೊತ್ತವನ್ನು ಜಮಾ ಮಾಡಲು ಒಂದು ತಿಂಗಳ ಗಡುವು ನೀಡಲಾಗಿದೆ.

ಅಕ್ರಮ ಕಟ್ಟಡವನ್ನು ತೆರವುಗೊಳಿಸುವಾಗ ಬಳಸಲಾದ ಎಲ್ಲಾ ಸರಕಾರಿ ಸಾಧನ-ಸಾಮಗ್ರಿಗಳ ವೆಚ್ಚವನ್ನು ಮುತವಲ್ಲಿಯಿಂದಲೇ ವಸೂಲಿ ಮಾಡಲಾಗುವುದು ಎಂದು ಆಡಳಿತ ತಿಳಿಸಿದೆ.

ಸಂಪಾದಕೀಯ ನಿಲುವು

ಕೇವಲ ಮಸೀದಿಯನ್ನು ಕೆಡವಿ ಅದರ ವೆಚ್ಚವನ್ನು ವಸೂಲಿ ಮಾಡುವುದಷ್ಟೇ ಅಲ್ಲದೆ, ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಿದ ಸಂಬಂಧಿತ ಅಪರಾಧಿ ಮುಸಲ್ಮಾನರಿಗೆ ಶಿಕ್ಷೆಯನ್ನೂ ನೀಡಬೇಕು!