ಪಾಕಿಸ್ತಾನದ ಮೌಲಾನಾ ಮುಫ್ತಿ ಸಯೀದ್ ಖಾನ್ ಅವರಿಂದ ಬಹಿರಂಗ
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ, ಮುಫ್ತಿ ಎಂದರೆ ಶರಿಯತ್ ಕಾನೂನಿನ ಪ್ರಕಾರ ನ್ಯಾಯ ತೀರ್ಪು ನೀಡುವವನು)

ಮುಜಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅಲ್ಲಿನ ಜಿಹಾದಿ ಭಯೋತ್ಪಾದಕರೇ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಲ್ಲಿನ ಪ್ರಸಿದ್ಧ ಮೌಲಾನಾ ಮುಫ್ತಿ ಸಯೀದ ಖಾನ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ಮಹಿಳೆಯರ ವ್ಯವಸ್ಥಿತ ಶೋಷಣೆಯಾಗುತ್ತಿದೆ ಎಂದು ಅವರು ಹೇಳಿದರು.
‘ಕಾಶ್ಮೀರ್ ಅಂಡ್ ಅವರ್ ಹೈಪೋಕ್ರಸಿ’ (ಕಾಶ್ಮೀರ ಮತ್ತು ನಮ್ಮ ಬೂಟಾಟಿಕೆ) ಹೆಸರಿನ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಕಾಶ್ಮೀರದ ಉಗ್ರವಾದದ ಹಿಂದಿನ ಒಂದು ಕರಾಳ ಮುಖವೆಂದರೆ, ಭಯೋತ್ಪಾದಕರನ್ನು ಅನೇಕ ಬಾರಿ ‘ಮುಜಾಹಿದ್ದೀನ್’ (ಜಿಹಾದ್ ಗಾಗಿ ಹೋರಾಡುವವರು) ಅಥವಾ ಧಾರ್ಮಿಕ ಯೋಧರೆಂದು ಗೌರವಿಸಲಾಗುತ್ತದೆ; ಆದರೆ ವಾಸ್ತವದಲ್ಲಿ ಅವರೇ ಅಸಹಾಯಕ ಮಹಿಳಾ ನಿರಾಶ್ರಿತರನ್ನು ಬಲವಂತವಾಗಿ ದೈಹಿಕ ಸಂಬಂಧ ಹೊಂದಲು ಒತ್ತಾಯಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ರೊಟ್ಟಿಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
Shocking claim by Maulana Mufti Saeed Khan: terrorists in Pakistan-Occupied Kashmir are exploiting and assaulting poor women.
If the terrorists, who claim to be waging armed Jihad to secure the alleged "just rights" of Kashmiri Muslims are themselves committing such atrocities,… pic.twitter.com/jjMjVCHkNN
— Sanatan Prabhat (@SanatanPrabhat) April 1, 2026
ಯಾರು ಈ ಮುಫ್ತಿ ಸಯೀದ್ ಖಾನ್?
ಮುಫ್ತಿ ಸಯೀದ ಖಾನ್ ಅವರು ದೇವಬಂದಿ ವಿಚಾರಧಾರೆಗೆ ಸಂಬಂಧಿಸಿದವರಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಏನು ಹೇಳುತ್ತವೆ?
ಭಾರತೀಯ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಖಾನ್ ಅವರ ಈ ಹೇಳಿಕೆಯು ಪಾಕಿಸ್ತಾನದ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯಿಂದ ಬಂದ ಅಪರೂಪದ ಒಪ್ಪಿಗೆಯಾಗಿದೆ. ಇದರಿಂದ ಪಾಕಿಸ್ತಾನವು ದೀರ್ಘಕಾಲದಿಂದ ಪ್ರತಿಪಾದಿಸುತ್ತಿರುವ ‘ಶುದ್ಧ ಜಿಹಾದ್’ ಎಂಬ ಕಥನಕ್ಕೆ ಭಾರಿ ಹೊಡೆತ ಬಿದ್ದಿದೆ.
ಮೂಲಗಳ ಪ್ರಕಾರ ಈ ಹೇಳಿಕೆಯು, ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ ಅಂದರೆ ಅಂತರ ಸೇವಾ ಗುಪ್ತಚರ ಸಂಸ್ಥೆ) ಬೆಂಬಲಿತ ಮತ್ತು ಸಶಸ್ತ್ರ ಭಯೋತ್ಪಾದಕರು ಸ್ಥಳೀಯ ಜನರನ್ನು ಶೋಷಿಸುತ್ತಿದ್ದ ಆ ‘ಪ್ರಾಕ್ಸಿ’ (ಛದ್ಮ) ಯುದ್ಧತಂತ್ರದ ಕಡೆಗೆ ಬೆರಳು ಮಾಡುತ್ತದೆ ಎಂದು ತಿಳಿಸಿವೆ. ಈ ಹೇಳಿಕೆಯಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವರದಿಗಳಿಗೂ ಬಲ ಬಂದಂತಾಗಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers