ಕೋಲಕಾತಾ ಪೊಲೀಸರಿಂದ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆಯೇ ಮೊಕದ್ದಮೆ ದಾಖಲು

ಶ್ರೀರಾಮನವಮಿಯಂದು ಮುರ್ಶಿದಾಬಾದನಲ್ಲಿ ಹಿಂದೂಗಳ ಮೇಲಾದ ದಾಳಿಯ ವಿಡಿಯೋ ಪ್ರಸಾರ ಮಾಡಿದ ಪ್ರಕರಣ

ಮುರ್ಶಿದಾಬಾದ (ಬಂಗಾಳ) – ಮುರ್ಶಿದಾಬಾದ ಮತ್ತು ಪುರುಲಿಯಾದಲ್ಲಿ ಶ್ರೀರಾಮನವಮಿಯ ದಿನದಂದು, ಅಂದರೆ ಮಾರ್ಚ್ ೨೭ ರಂದು ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿಗಳು ನಡೆದವು. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.

ದಾಳಿ ಮಾಡಿದ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ವಿಡಿಯೋ ಪ್ರಸಾರ ಮಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ ಮೊಕದ್ದಮೆ ದಾಖಲಿಸಿದ್ದಾರೆ. ಈ ಮೊಕದ್ದಮೆಯನ್ನು ಕೋಲಕಾತಾದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಸಂಬಂಧಿತ ಖಾತೆಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ ೩೫೩(೨), ೩೫೩(೧)(ಬ) ಮತ್ತು ೧೯೬(೧) ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಈ ದಾಳಿಯ ಕುರಿತು ಹಿಂದುತ್ವನಿಷ್ಠ ಕಾರ್ಯಕರ್ತ ಸೌರಿಶ ಮುಖರ್ಜಿ ಅವರು `ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಾ, ಮುರ್ಶಿದಾಬಾದನಿಂದ ಗಂಭೀರ ಹಿಂಸಾಚಾರದ ಸುದ್ದಿಗಳು ಬರುತ್ತಿವೆ ಎಂದು ಹೇಳಿದ್ದರು. ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮತ್ತೆ ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯಲ್ಲಿ ಪದೇ ಪದೇ ಉಂಟಾಗುತ್ತಿರುವ ಉದ್ವಿಗ್ನತೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದರ ಜವಾಬ್ದಾರಿ ಯಾರದ್ದು ಮತ್ತು ಕಾನೂನು ಸುವ್ಯವಸ್ಥೆ ಎಲ್ಲಿದೆ? ಎಂಬ ಪ್ರಶ್ನೆ ಎತ್ತಿದ್ದಕ್ಕಾಗಿ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಕೊನೆಯ ದಿನಗಳು ಹತ್ತಿರ ಬಂದಿವೆ ಎಂದು ಈಗ ಹಿಂದೂಗಳಿಗೆ ಅನ್ನಿಸುತ್ತಿದೆ. ಅದಕ್ಕಾಗಿ ಅವರು ಚುನಾವಣೆಯಲ್ಲಿ ಕ್ರಿಯಾಶೀಲರಾಗಿ ಪ್ರಯತ್ನಿಸುವುದು ಅತ್ಯಗತ್ಯವಾಗಿದೆ!