ಬಂಗಾಳ: ಶ್ರೀರಾಮನವಮಿ ಮೆರವಣಿಗೆಯ ಮೇಲೆ ಮುಸ್ಲಿಮರಿಂದ ದಾಳಿ!

ಮುರ್ಶಿದಾಬಾದ್ ಮತ್ತು ಪುರುಲಿಯಾದಲ್ಲಿ ಬೆಂಕಿ ಅನಾಹುತ; ಭಗವಾ ಧ್ವಜಗಳನ್ನು ಕಿತ್ತೆಸೆದ ಮತಾಂಧರು

ಮುರ್ಶಿದಾಬಾದ್ (ಬಂಗಾಳ) – ಮುರ್ಶಿದಾಬಾದ್ ಮತ್ತು ಪುರುಲಿಯಾದಲ್ಲಿ ಶ್ರೀರಾಮನವಮಿ ನಿಮಿತ್ತ ಮಾರ್ಚ್ 27 ರಂದು ಸಂಜೆ ಹೊರಟಿದ್ದ ಮೆರವಣಿಗೆಗಳ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿ, ಧ್ವಂಸ ಮತ್ತು ಬೆಂಕಿ ಹಚ್ಚುವ ಕೃತ್ಯಗಳನ್ನು ಎಸಗಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ಷಿಪ್ರ ಕಾರ್ಯ ಪಡೆ (RAF) ಮತ್ತು ಬೃಹತ್ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸ್ ಉಪಮಹಾನಿರೀಕ್ಷಕ ಅಜಿತ್ ಸಿಂಗ್ ಯಾದವ್ ಅವರು ತಿಳಿಸಿರುವಂತೆ, ಅನೇಕ ದಂಗೆಕೋರರನ್ನು ಬಂಧಿಸಲಾಗಿದೆ ಮತ್ತು ಇಡೀ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

೧. ಮುರ್ಶಿದಾಬಾದ್‌ನ ಜಂಗೀಪುರದಲ್ಲಿ ಮೆರವಣಿಗೆಯು ‘ಮ್ಯಾಕೆಂಜಿ ಪಾರ್ಕ್’ನಿಂದ ಹೊರಟು ಫುಲತಲಾ ಮೋಡ್ ತಲುಪಿದಾಗ, ಮುಸ್ಲಿಮರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದರು. ಈ ದಾಳಿಯು ಪೂರ್ವಯೋಜಿತವಾಗಿತ್ತು. ಇಂತಹದ್ದೇ ಹಿಂಸಾತ್ಮಕ ಘಟನೆ ಪುರುಲಿಯಾದ ಪಾರಾ ಭಾಗದಲ್ಲೂ ನಡೆದಿದೆ. ಅಲ್ಲಿ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ಮತಾಂಧ ಮುಸ್ಲಿಮರು ಗುರಿಯಾಗಿಸಿದರು. ಈ ದಾಳಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

೨. ಬಿಜೆಪಿ ನಾಯಕ ಶುಭೇಂದು ಅಧಿಕಾರಿ ಅವರ ಹೇಳಿಕೆಯ ಪ್ರಕಾರ, ಮುಸ್ಲಿಮರು ಪವಿತ್ರ ಭಗವಾ ಧ್ವಜವನ್ನು ಅವಮಾನಕರ ರೀತಿಯಲ್ಲಿ ಕೆಳಕ್ಕೆ ಎಳೆದು ಎಸೆದಿದ್ದಾರೆ. ಇದು ಕೇವಲ ಧರ್ಮಕ್ಕೆ ಮಾಡಿದ ಅಪಮಾನವಲ್ಲ, ಸನಾತನಿಗಳ ಭಾವನೆಗಳ ಮೇಲೆ ನಡೆದ ನೇರ ದಾಳಿಯಾಗಿದೆ. ರಸ್ತೆಯಲ್ಲಿ ನಡೆದ ಈ ಘಟನೆಯಿಂದಾಗಿ ಜನರು ಪ್ರಾಣ ಉಳಿಸಿಕೊಳ್ಳಲು ಓಡಬೇಕಾಯಿತು. “ನಮ್ಮದೇ ರಾಜ್ಯದಲ್ಲಿ ಭಗವಾ ಧ್ವಜ ಹಾರಿಸುವುದು ಅಪರಾಧವೇ?” ಎಂದು ಶುಭೇಂದು ಅವರು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಹಿಂದೂಗಳು ತಮ್ಮ ರಕ್ಷಣೆಗಾಗಿ ಈಗಲಾದರೂ ಕ್ರಿಯಾಶೀಲರಾಗಿ ಮತದಾನ ಮಾಡುವುದು ಅವಶ್ಯಕವಾಗಿದೆ!