|

ಭಾಗ್ಯನಗರ (ತೆಲಂಗಾಣ) – ಯಾವಾಗ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಮ್ಮ ಪ್ರವಾಸಿಗರ ಧರ್ಮವನ್ನು ನೋಡಿ ಅವರನ್ನು ಹತ್ಯೆ ಮಾಡಿದರೋ, ಆಗ ನೀವೆಲ್ಲಾ (ಕಾಶ್ಮೀರಿ ಮುಸ್ಲಿಮರು) ಎಲ್ಲಿದ್ದಿರಿ? ಅವರಿಗಾಗಿ ನೀವು ಎಷ್ಟು ದೇಣಿಗೆ ನೀಡಿದ್ದಿರಿ? ಯಾವಾಗ ಭಯೋತ್ಪಾದಕರು ಪುಲ್ವಾಮಾದಲ್ಲಿ ಸೈನಿಕರನ್ನು ಹತ್ಯೆ ಮಾಡಿದರೋ, ಆಗ ನೀವು ಸೈನಿಕರ ಕುಟುಂಬದವರ ಸಹಾಯಕ್ಕಾಗಿ ಮುಂದೆ ಬರಲಿಲ್ಲ. ಅವರು ನಮ್ಮದೇ ದೇಶದ ಸೈನಿಕರು ಮತ್ತು ನಾಗರಿಕರಾಗಿದ್ದರು. ಹಾಗಿರುವಾಗ, ಈಗ ಬೇರೊಂದು ದೇಶದಲ್ಲಿ ಮೂರನೇ ದೇಶವೊಂದು ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಕೊಂದರೆ, ಭಾರತದಲ್ಲಿ ಜನರು ಏಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ? ಎಂದು ಇಲ್ಲಿನ ಗೋಶಾಮಹಲ್ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಆಕ್ರೋಶಭರಿತ ಪ್ರಶ್ನೆ ಕೇಳಿದ್ದಾರೆ. ಕಾಶ್ಮೀರದ ಮುಸ್ಲಿಮರು ಇರಾನ್ಗಾಗಿ ದೇಣಿಗೆ ಮತ್ತು ಸಹಾಯ ನೀಡುತ್ತಿರುವುದರ ಕುರಿತು ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ.
ಟಿ. ರಾಜಾಸಿಂಗ್ ಅವರು,
೧. ಇರಾನ್ ಮೇಲೆ ಅಮೆರಿಕ ಮತ್ತು ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರನ್ನು ’72 ಹೂರ್’ಗಳ (ಅಪ್ಸರೆಯರ) ಬಳಿಗೆ ಕಳುಹಿಸಿವೆ. ದಾಳಿ ನಡೆದದ್ದು ಇರಾನ್ನಲ್ಲಿ ಮತ್ತು ದಾಳಿ ಮಾಡಿದ ದೇಶವೇ ಬೇರೆ, ಹೀಗಿದ್ದರೂ ನಮ್ಮ ದೇಶದಲ್ಲಿ ಏಕೆ ಶೋಕ ಆಚರಿಸಲಾಗುತ್ತಿದೆ?
೨. ಕಾಶ್ಮೀರದಲ್ಲಿ ಕೆಲವು ಅಂತಹ ಮುಸ್ಲಿಮರಿದ್ದಾರೆ, ಅವರು 500 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಇರಾನ್ಗೆ ಕಳುಹಿಸಲು ಯೋಜಿಸುತ್ತಿದ್ದಾರೆ.
೩. ನಮ್ಮ ಭಾರತದ ವೀರ ಸೈನ್ಯ ನಮ್ಮನ್ನು ರಕ್ಷಿಸುತ್ತದೆ. ಭಯೋತ್ಪಾದಕ ದಾಳಿಗಳು ನಡೆಯುತ್ತವೆ, ಈ ದಾಳಿಗಳಲ್ಲಿ ನಮ್ಮ ಸೈನ್ಯದ ವೀರ ಸೈನಿಕರು ಹುತಾತ್ಮರಾಗುತ್ತಾರೆ, ಆಗ ನಿಮ್ಮ ಈ ದುಃಖ ಎಲ್ಲಿ ಹೋಗಿರುತ್ತದೆ? ಎಂದು ನಾನು ಕಾಶ್ಮೀರದ ಮುಸ್ಲಿಮರನ್ನು ಕೇಳಲು ಬಯಸುತ್ತೇನೆ.
ಸಂಪಾದಕೀಯ ನಿಲುವುಇಂತಹ ಪ್ರಶ್ನೆಯನ್ನು ಕೇವಲ ಟಿ. ರಾಜಾಸಿಂಗ್ ಒಬ್ಬರೇ ಕೇಳುತ್ತಿದ್ದಾರೆ, ಉಳಿದವರು ಏಕೆ ಸುಮ್ಮನಿದ್ದಾರೆ? ಕಾಶ್ಮೀರಿ ಮುಸ್ಲಿಮರು ಹಿಂದೂಗಳಿಗೆ ಸಹಾಯ ಮಾಡುವ ಬದಲು ಇರಾನ್ಗೆ ಹಣ ಕಳುಹಿಸುವುದು ಅವರಿಗೆ ಸಮ್ಮತವೆಂದು ಭಾವಿಸಬೇಕೇ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !