|

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಮಾರ್ಚ್ 27 ರಂದು ಅಭಿಜಿತ್ ಮುಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀರಾಮಲಲ್ಲಾನ ‘ಸೂರ್ಯತಿಲಕ ಮಹೋತ್ಸವ’ ನೆರವೇರಿತು. ಪ್ರಾಣಪ್ರತಿಷ್ಠಾಪನಾ ಸಮಾರಂಭದ ನಂತರ ಶ್ರೀರಾಮಲಲ್ಲಾನಿಗೆ ನಡೆದ ಎರಡನೇ ಸೂರ್ಯತಿಲಕ ಮಹೋತ್ಸವ ಇದಾಗಿದೆ. ಶ್ರೀರಾಮಲಲ್ಲಾನ ಹಣೆಯ ಮೇಲೆ 9 ನಿಮಿಷಗಳ ಕಾಲ ಸೂರ್ಯಕಿರಣಗಳ ತೇಜಸ್ವಿ ಸ್ಪರ್ಶವಾಯಿತು. ಈ ಸಮಾರಂಭದಲ್ಲಿ ಸುಮಾರು 10 ಲಕ್ಷ ಭಕ್ತರು ಉಪಸ್ಥಿತರಿದ್ದರು.
☀️ Divine Moment at Ayodhya | Surya Tilak on Ram Navami 🚩
A celestial spectacle unfolded in Shri Ram Mandir as the ‘Surya Tilak’ illuminated Ram Lalla’s forehead right at noon ✨
🔆 Perfect alignment of sunlight created a divine tilak
🙏 Around 10 lakh devotees gathered on… pic.twitter.com/MGir6ZIegY
— Sanatan Prabhat (@SanatanPrabhat) March 27, 2026
ಸೂರ್ಯತಿಲಕ ಮಹೋತ್ಸವಕ್ಕಾಗಿ 20 ಅಷ್ಟಧಾತು ಕೊಳವೆಗಳಿಂದ ಕೂಡಿದ 65 ಅಡಿ ಉದ್ದದ ವಿಶೇಷ ರಚನೆಯನ್ನು ಸಿದ್ಧಪಡಿಸಲಾಗಿತ್ತು.
(ಸೌಜನ್ಯ – Doordarshan National)
ಗರ್ಭಗುಡಿಯಲ್ಲಿನ 4 ಮಸೂರಗಳು ಮತ್ತು 4 ಕನ್ನಡಿಗಳ ಮೂಲಕ ಸೂರ್ಯಕಿರಣಗಳು ಶ್ರೀರಾಮಲಲ್ಲಾನ ಹಣೆಯನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯತಿಲಕ ಮಹೋತ್ಸವದೊಂದಿಗೆ ಶ್ರೀರಾಮಲಲ್ಲಾನ ಜನ್ಮೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗರ್ಭಗುಡಿಯಲ್ಲಿದ್ದ 14 ಅರ್ಚಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಶ್ರೀರಾಮಲಲ್ಲಾನಿಗೆ ವಿಶೇಷ ಆರತಿ ಬೆಳಗಲಾಯಿತು.
प्रभु के सूर्यतिलक का दिव्य दृश्य pic.twitter.com/4k9OwQuH38
— Shri Ram Janmbhoomi Teerth Kshetra (@ShriRamTeerth) March 27, 2026
ದರ್ಶನದ ವೇಳೆಯಲ್ಲಿ ಹೆಚ್ಚಳ
ಶ್ರೀರಾಮನವಮಿಯ ಪ್ರಯುಕ್ತ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಶ್ರೀರಾಮನವಮಿಯಿಂದ ಭಕ್ತರಿಗೆ ಶ್ರೀರಾಮಲಲ್ಲಾನ ದರ್ಶನವನ್ನು ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪಡೆಯಬಹುದಾಗಿದೆ. ಈ ಮೊದಲು ದರ್ಶನವು ಬೆಳಿಗ್ಗೆ 6:30 ರಿಂದ ರಾತ್ರಿ 9:30 ರವರೆಗೆ ಲಭ್ಯವಿತ್ತು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ