ಯುಗಾದಿ (ಹಿಂದೂಗಳ ಹೊಸ ವರ್ಷ) ಮತ್ತು ಶಿವರಾತ್ರಿಯ ಸಮಯದಲ್ಲೂ ಮಾಂಸಾಹಾರ ಸೇವಿಸುತ್ತೇನೆ !

ವಿಧಾನಸೌಧದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ

ಬೆಂಗಳೂರು – ಇಂದಿಗೂ ನಾನು ರಾಹುಕಾಲ ಮತ್ತು ಗುಳಿಕ ಕಾಲದಂತಹ ಅಶುಭ ಕಾಲಗಳನ್ನು ನಂಬುವುದಿಲ್ಲ. ಈ ಹಿಂದೆ ಕೂಡ ನಾನು ರಾಹುಕಾಲ ಮತ್ತು ಗುಳಿಕ ಕಾಲದ ಸಮಯದಲ್ಲೇ ಬಜೆಟ್ ಮಂಡಿಸಿದ್ದೇನೆ. ನನಗೆ ಈ ವಿಷಯಗಳಲ್ಲಿ ನಂಬಿಕೆಯಿಲ್ಲ. ನಾನು ಯುಗಾದಿ ಮತ್ತು ಶಿವರಾತ್ರಿಯ ಸಮಯದಲ್ಲೂ ಮಾಂಸಾಹಾರ ಸೇವಿಸುತ್ತೇನೆ. ಅದರಲ್ಲಿ ತಪ್ಪೇನಿದೆ? ನನಗೆ ದೇವರ ಅಸ್ತಿತ್ವದಲ್ಲಿ ನಂಬಿಕೆಯಿದೆ; ಆದರೆ ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ, ಸರ್ವವ್ಯಾಪಿಯಾಗಿದ್ದಾನೆ ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಹೇಳಿದರು.

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ‘ಸಿದ್ದರಾಮಯ್ಯ ಅವರು ಕರ್ಮಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ; ಆದರೆ ಅವರು ರಾಹುಕಾಲವನ್ನು ನಿರ್ಲಕ್ಷಿಸಿ ಬಜೆಟ್ ಮಂಡಿಸಿದ್ದಾರೆ’ ಎಂದು ಟೀಕಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಕುಟುಂಬದವರು ಮತ್ತು ಅಧಿಕಾರಿಗಳು ‘ಬಜೆಟ್ ಅನ್ನು ರಾಹುಕಾಲದಲ್ಲಿ ಮಂಡಿಸಬೇಡಿ’ ಎಂದು ನನಗೆ ತಿಳಿಸಿದ್ದರು; ಆದರೆ ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದ ಅದನ್ನು ರಾಹುಕಾಲದಲ್ಲೇ ಮಂಡಿಸಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಯಾರು ಏನು ತಿನ್ನಬೇಕು ಮತ್ತು ತಿನ್ನಬಾರದು ಎಂಬುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು; ಆದರೆ ಹಿಂದೂಗಳ ಹೊಸ ವರ್ಷದಂದು ಮಾಂಸಾಹಾರ ಸೇವಿಸುವುದಾಗಿ ಹೇಳುವುದು ಹಿಂದೂಗಳನ್ನು ಹೀಯಾಳಿಸುವ ಪ್ರಯತ್ನವೇ ಆಗಿದೆ. ಅನ್ಯ ಧರ್ಮೀಯರ ಬಗ್ಗೆ ಸಿದ್ದರಾಮಯ್ಯ ಇಂತಹ ಹೇಳಿಕೆಯನ್ನು ಎಂದಿಗೂ ನೀಡಲಾರರು; ಏಕೆಂದರೆ ಅದರ ಪರಿಣಾಮಗಳು ಅವರಿಗೆ ತಿಳಿದಿವೆ!
  • ಇಂತಹವರನ್ನು ಚುನಾಯಿಸುವ ಹಿಂದೂಗಳು ಈ ಬಗ್ಗೆ ಏನು ಹೇಳುತ್ತಾರೆ ?