ಡಿಜೆ ನಿಷೇಧಿಸುವುದಾದರೆ, ಅಜಾನ್ ಮೇಲೂ ನಿಷೇಧ ಹೇರಲೇಬೇಕು! – ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಆಗ್ರಹ

(ಡಿಜೆ ಅಂದರೆ ದೊಡ್ಡ ಸಂಗೀತ ವ್ಯವಸ್ಥೆ)
(ಅಜಾನ್ ಅಂದರೆ ಮಸೀದಿಯಲ್ಲಿ ನಮಾಜ್‌ಗಾಗಿ ಕರೆಯುವುದು)

ಹುಬ್ಬಳ್ಳಿ – ಡಿಜೆಯನ್ನು ನಿಷೇಧಿಸುವುದಾದರೆ, ಅಜಾನ್ ಮೇಲೂ ನಿಷೇಧ ಹೇರಬೇಕು. ಅದಕ್ಕೆ ಧ್ವನಿವರ್ಧಕಗಳ (ಲೌಡ್‌ಸ್ಪೀಕರ್‌) ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ಈ ನಿಷೇಧ ಇರಬೇಕು, ಇದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ. ಡಿಜೆಯಿಂದಾಗಿ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಮತ್ತು ನಾಗರಿಕರಿಗೆ ಎಷ್ಟು ತೊಂದರೆಯಾಗುತ್ತದೆಯೋ, ಅಷ್ಟೇ ತೊಂದರೆಯು ದಿನಕ್ಕೆ ೫ ಬಾರಿ ಕೂಗುವ ಅಜಾನ್‌ನಿಂದಲೂ ಆಗುತ್ತಿದೆ. ಇದನ್ನು ನಿಷೇಧಿಸುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರೀ ಶಬ್ದ ಮಾಡುವ ಡಿಜೆಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ಶ್ರೀ ಮುತಾಲಿಕ್ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.