|
(ಮುಅಜ್ಜಿನ ಎಂದರೆ ಮಸೀದಿಯಲ್ಲಿ ನಮಾಜಿಗಾಗಿ ಜನರನ್ನು ಧ್ವನಿವರ್ಧಕದ (ಅಜಾನ್) ಮೂಲಕ ಕೂಗಿ ಕರೆಯುವವರು)

ಕೋಲಕಾತಾ (ಬಂಗಾಳ) – ಮುಂದಿನ ತಿಂಗಳು ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಘೋಷಣೆಯಾಗಿದೆ. ಈ ಘೋಷಣೆಯ ಒಂದೂಕಾಲು ಗಂಟೆಯ ಮೊದಲಷ್ಟೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಚಕರು ಮತ್ತು ಮುಅಜ್ಜಿನರ ಗೌರವಧನದಲ್ಲಿ ೫೦೦ ರೂಪಾಯಿಗಳ ಹೆಚ್ಚಳ ಮಾಡಿ, ಅದನ್ನು ಈಗ ಪ್ರತಿ ತಿಂಗಳು ೨,೦೦೦ ರೂಪಾಯಿಗಳಿಗೆ ಏರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
I am pleased to announce an increase of ₹500 in the monthly honorariums extended to our purohits and muezzins, whose service sustains the spiritual and social life of our communities. With this revision, they will now receive ₹2,000 per month.
At the same time, all fresh…
— Mamata Banerjee (@MamataOfficial) March 15, 2026
ಬ್ಯಾನರ್ಜಿ ಅವರು ‘ಎಕ್ಸ್’ ನಲ್ಲಿ,
“ಅರ್ಚಕರು ಮತ್ತು ಮುಅಜ್ಜಿನ ಸಮುದಾಯವು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜೀವನವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಕಾರವು ಗೌರವಧನ ಯೋಜನೆಯಡಿ ಅವರ ಎಲ್ಲಾ ಹೊಸ ಅರ್ಜಿಗಳಿಗೂ ಅಂಗೀಕಾರ ನೀಡಿದೆ. ರಾಜ್ಯದಲ್ಲಿ ಪ್ರತಿಯೊಂದು ಸಮುದಾಯ ಮತ್ತು ಸಂಪ್ರದಾಯಗಳಿಗೆ ಮಹತ್ವ ನೀಡಲಾಗುತ್ತದೆ ಮತ್ತು ಅವುಗಳನ್ನು ಬಲಪಡಿಸಲಾಗುತ್ತದೆ ಎಂಬ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. (ಕಳೆದ ೧೫ ವರ್ಷಗಳಲ್ಲಿ ಹಿಂದೂ ಸಮುದಾಯವು ಬಲಗೊಳ್ಳುವ ಬದಲು ದುರ್ಬಲಗೊಂಡಿದೆ. ಅದರ ಬಗ್ಗೆ ಬ್ಯಾನರ್ಜಿ ಏನು ಮಾಡಲಿದ್ದಾರೆ? – ಸಂಪಾದಕರು)
The "Votebank" Game is on in Bengal 🎭
Mamata Banerjee’s Govt increases honorarium for Purohits & Muezzins to ₹2,000. 💸
📢 But let’s look at the history:
🔹 2012: Honorariums were ONLY for Imams & Muezzins.
🔹 2026: Purohits are finally added & hiked.Is this genuine… pic.twitter.com/rOHyZw7Y4l
— Sanatan Prabhat (@SanatanPrabhat) March 16, 2026
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ ಮತಗಳಿಗಾಗಿ ಮಾಡಿದ ದೈನ್ಯತೆ (ಹೀನಾಯ ಓಲೈಕೆ)! ಇದೇ ಮಮತಾ ಬ್ಯಾನರ್ಜಿ ಅವರು ೨೦೧೨ ರಲ್ಲಿ ಕೇವಲ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ಮತ್ತು ಮುಅಜ್ಜಿನರಿಗಷ್ಟೇ ಗೌರವಧನ ಘೋಷಿಸಿದ್ದರು. ಈಗ ಹಿಂದೂಗಳು ಜಾಗೃತರಾಗುತ್ತಿರುವುದರಿಂದಲೇ ಅರ್ಚಕರಿಗೆ ಗೌರವಧನ ನೀಡಿ ಅದರಲ್ಲಿ ಹೆಚ್ಚಳ ಮಾಡಲಾಗಿದೆ, ಇದನ್ನು ಗಮನದಲ್ಲಿಡಿ! |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !