ನಾಂದಲಾಪುರ (ಕರಾಡ): ದೇವಸ್ಥಾನದ ದಾನ ಪೆಟ್ಟಿಗೆ (ಹಣದ ಹುಂಡಿ)ಯನ್ನು ಒಡೆದ ಅಪ್ರಾಪ್ತ ಹುಡುಗರು !

ಕರಾಡ – ನಾಂದಲಾಪುರದ ಹನುಮಾನ್ ದೇವಸ್ಥಾನದಲ್ಲಿ ಇಬ್ಬರು ಅಪ್ರಾಪ್ತ ಹುಡುಗರು ದಾನ ಪೆಟ್ಟಿಗೆಯನ್ನು ಒಡೆದ ಘಟನೆ ವರದಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದೇವಸ್ಥಾನದ ಪೂಜಾರಿ ಬಾಲಕೃಷ್ಣ ಯಶವಂತ ಲವಂಡ್ ಅವರ ಮಗನು ಅವರಿಗೆ ಮಾರ್ಚ್ ೧೪ ರಂದು ದೂರವಾಣಿ ಮೂಲಕ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದಾಗಿ ಮಾಹಿತಿ ನೀಡಿದನು. ದಾನ ಪೆಟ್ಟಿಗೆಯಲ್ಲಿ ಅಂದಾಜು ೧೮ ರಿಂದ ೨೦,೦೦೦ ರೂಪಾಯಿ ಹಣವಿತ್ತು. ಈ ಕುರಿತು ಪೂಜಾರಿ ಲವಂಡ್ ಅವರು ಕರಾಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಸಂಪಾದಕೀಯ ನಿಲುವು

ಮಕ್ಕಳಲ್ಲಿ ಸರಿಯಾದ ಸಂಸ್ಕಾರ ಮತ್ತು ಧರ್ಮಶಿಕ್ಷಣದ ಕೊರತೆಯಿಂದ ಇಂತಹ ಕೃತ್ಯಗಳನ್ನು ಮಾಡುತ್ತಾರೆ !