ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮದ್ಯದ ಕೂಟಕ್ಕೆ ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಬೆಂಬಲ

ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪತ್ರಕರ್ತರಿಗಾಗಿ ಆಯೋಜಿಸಿದ್ದ ಬಜೆಟ್ ಪೂರ್ವ ಮದ್ಯದ ಔತಣಕೂಟವು ಸದ್ಯ ರಾಜ್ಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಈ ವಿವಾದದ ಕುರಿತು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮತ್ತು ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಅವರು ಪ್ರತಿಕ್ರಿಯಿಸುತ್ತಾ ಇಂತಹ ಕೂಟಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಮದ್ಯಪಾನದ ಅಭ್ಯಾಸವಿರುವ ಯಾವುದೇ ಕಾರ್ಯನಿರತ ಪತ್ರಕರ್ತ ರಾಜಕಾರಣಿಗಳೊಂದಿಗೆ ಮದ್ಯ ಸೇವಿಸಿಲ್ಲವೆಂದಾದರೆ ಅವನು ಪತ್ರಕರ್ತನೇ ಅಲ್ಲ’ ಎಂದು ಮಟ್ಟು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
Journalism or PR? 🤔
“There isn’t a journalist who doesn’t drink with politicians!” 🥃🚫
– Senior journalist Dinesh Amin Mattu defending CM Siddaramaiah’s liquor party.Drinking may be a personal choice, supporting it in this manner is wrong.
When alcohol and “envelopes”… pic.twitter.com/JXDkJFs1jo
— Sanatan Prabhat (@SanatanPrabhat) March 11, 2026
‘ಒಳ’ ಸುದ್ದಿಗಳಿಗಾಗಿ ಇಂತಹ ಕೂಟಗಳಿಗೆ ಹೋಗುವುದು ಅವಶ್ಯಕ!
‘ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ಇಂತಹ ಔತಣಕೂಟಗಳ ಸಂಬಂಧ ಇಂದಿನದಲ್ಲ, ಬದಲಾಗಿ ಈ ಎರಡೂ ವ್ಯವಹಾರಗಳು ಆರಂಭವಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಪತ್ರಿಕಾಗೋಷ್ಠಿಗಳಲ್ಲಿ ಕೇವಲ ಅಧಿಕೃತ ಸುದ್ದಿಗಳು ಮಾತ್ರ ಸಿಗುತ್ತವೆ; ಆದರೆ ಸುದ್ದಿಯ ಹಿಂದಿನ ಸತ್ಯ ಮತ್ತು ಗುಟ್ಟುಗಳು ಇಂತಹ ಊಟ ಹಾಗೂ ಮದ್ಯದ ಔತಣಕೂಟಗಳಿಂದಲೇ ಹೊರಬರುತ್ತವೆ. ಮದ್ಯಪಾನ ಮಾಡಿದಾಗ ಮನುಷ್ಯ ಸ್ವಲ್ಪ ಭಾವುಕ ಮತ್ತು ಪ್ರಾಮಾಣಿಕನಾಗುತ್ತಾನೆ. ಆ ಸಮಯದಲ್ಲಿ ಅವನಿಂದ ಹೊರಬರುವ ಹಳೆಯ ನೆನಪುಗಳು ಮತ್ತು ಸತ್ಯ ಘಟನೆಗಳು ಒಬ್ಬ ವೃತ್ತಿಪರ ವರದಿಗಾರನಿಗೆ ಅತ್ಯಂತ ಅಮೂಲ್ಯ ಮಾಹಿತಿಯಾಗಿರುತ್ತವೆ. ಕೇವಲ ಚಹಾ ಅಥವಾ ನಿಂಬೆ ಹಣ್ಣಿನ ರಸ ಸೇವಿಸಿ ಇಂತಹ ಆಳವಾದ ಸುದ್ದಿಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ’ ಎಂದು ಮಟ್ಟು ಹೇಳಿದ್ದಾರೆ.
‘ಈ ಸಂಸ್ಕೃತಿ ಸಿದ್ದರಾಮಯ್ಯ ಅವರಿಂದ ಆರಂಭವಾದುದಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಕೂಡ ಹಿರಿಯ ಪತ್ರಕರ್ತರನ್ನು ಕರೆಸಿ ದುಬಾರಿ ಮದ್ಯದೊಂದಿಗೆ ಊಟ ನೀಡಿ ವಿಚಾರ ವಿನಿಮಯ ಮಾಡುತ್ತಿದ್ದರು. ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರು ದೆಹಲಿಯಲ್ಲಿ ಪತ್ರಕರ್ತರಿಗಾಗಿ ಮದ್ಯದ ಔತಣಕೂಟ ಆಯೋಜಿಸುತ್ತಿದ್ದರು; ಆದರೆ ಅವರು ಮಾತ್ರ ನಿಂಬೆ ಹಣ್ಣಿನ ರಸ ಕುಡಿಯುತ್ತಾ ಕುಳಿತುಕೊಳ್ಳುತ್ತಿದ್ದರು’ ಎಂಬ ಸ್ವಾರಸ್ಯಕರ ಕಥೆಯನ್ನೂ ಮಟ್ಟು ವಿವರಿಸಿದರು.
ಸರ್ಕಾರಿ ಖಜಾನೆಯಿಂದ ಹಣ ವ್ಯಯವಾಗುವುದಿಲ್ಲ
ಮಟ್ಟು ಅವರ ಪ್ರಕಾರ, ಸಿದ್ದರಾಮಯ್ಯ ಅವರಿಗೆ ಮದ್ಯದ ಬಗ್ಗೆ ಅಂತಹ ಆಸಕ್ತಿಯಿಲ್ಲ. ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮದ್ಯಪಾನ ಮಾಡುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮದ್ಯದ ಬಗ್ಗೆ ಅವರ ಸಂಕೋಚ ಕಡಿಮೆಯಾಗಿದ್ದು, ಔತಣಕೂಟಗಳಲ್ಲಿ ಅವರು ಒಂದು ಸಣ್ಣ ಪೆಗ್ (ಅಲ್ಪ ಪ್ರಮಾಣ) ತೆಗೆದುಕೊಳ್ಳುತ್ತಾರೆ. ನಂತರ ಎಲ್ಲರೊಂದಿಗೆ ಮಾತನಾಡಿ ಅಲ್ಲಿಂದ ಹೊರಡುತ್ತಾರೆ. ಅಲ್ಲದೆ ಇಂತಹ ಕೂಟಗಳಿಗಾಗಿ ಸರ್ಕಾರದ ಖಜಾನೆಯಿಂದ ಹಣ ಹೋಗುವುದಿಲ್ಲ, ಬದಲಾಗಿ ಯಾವುದಾದರೂ ಸಚಿವರು ಅದರ ವೆಚ್ಚ ಭರಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು. (ಸಚಿವರು ಈ ವೆಚ್ಚ ಭರಿಸಲು ಹಣ ಎಲ್ಲಿಂದ ತರುತ್ತಾರೆ ಎಂದು ಜನತೆಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ! – ಸಂಪಾದಕರು)
‘ಮದ್ಯದ ಕೂಟದ ಛಾಯಾಚಿತ್ರ ತೆಗೆದು ಪ್ರಸಾರ ಮಾಡುವ ಪತ್ರಕರ್ತ ಬೇಜವಾಬ್ದಾರಿ’ (ಅಂತೆ)
‘ನನ್ನ ಅಧಿಕಾರ ಅವಧಿಯಲ್ಲಿ ಇಂತಹ ಔತಣಕೂಟಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಗ್ಲಾಸ್ಗಳು ಕ್ಯಾಮೆರಾ ಕಣ್ಣಿಗೆ ಬೀಳದಂತೆ ನಾನು ಜಾಗ್ರತೆ ವಹಿಸುತ್ತಿದ್ದೆ. ಮುಖ್ಯಮಂತ್ರಿಗಳು ಔತಣಕೂಟ ಆಯೋಜಿಸುವುದು ಯಾವುದೇ ಅಪರಾಧವಲ್ಲ; ಆದರೆ ಅಲ್ಲಿ ಉಪಸ್ಥಿತರಿದ್ದ ಪತ್ರಕರ್ತರೊಬ್ಬರು ಆ ಖಾಸಗಿ ಕ್ಷಣಗಳ ಛಾಯಾಚಿತ್ರ ತೆಗೆದು ಬೇಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಅಪರಾಧವಲ್ಲದಿದ್ದರೂ, ಅದು ಖಂಡಿತವಾಗಿಯೂ ಸಭ್ಯ ನಡವಳಿಕೆಯಲ್ಲ’ ಎಂದು ದಿನೇಶ್ ಅಮೀನ್ ಮಟ್ಟು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಮದ್ಯ ಸೇವಿಸುವುದು ಬಿಡುವುದು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯವಾಗಿದ್ದರೂ, ಅದನ್ನು ಈ ರೀತಿ ಸಮರ್ಥಿಸಿಕೊಳ್ಳುವುದು ತಪ್ಪಾಗಿದೆ. ರಾಜಕಾರಣಿಗಳು ಮದ್ಯದ ಆತಿಥ್ಯ ನೀಡಿ ಮತ್ತು ಹಣದ ಪಾಕೆಟ್ಗಳನ್ನು ಕೊಟ್ಟು ಪತ್ರಕರ್ತರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ. ಇಂತಹ ಪತ್ರಕರ್ತರು ಎಂತಹ ಪತ್ರಿಕೋದ್ಯಮ ಮಾಡುತ್ತಾರೆ ಎಂಬುದು ಜನತೆಗೆ ತಿಳಿದೇ ಇದೆ! |
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !