Sri Lanka Blast Case : ಶ್ರೀಲಂಕಾ: ಈಸ್ಟರ್ ಸಂಡೇ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಜಿ ಗುಪ್ತಚರ ಮುಖ್ಯಸ್ಥನ ಬಂಧನ

ಬಾಂಬ್ ಸ್ಫೋಟಕ್ಕೆ ಸಹಾಯ ಮಾಡಿದ ಆರೋಪ

ಕೊಲೊಂಬೊ (ಶ್ರೀಲಂಕಾ) – ಶ್ರೀಲಂಕಾದಲ್ಲಿ 2019 ರ ‘ಈಸ್ಟರ್ ಸಂಡೇ’ ದಿನದಂದು ಚರ್ಚ್‌ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಮಾಜಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಸುರೇಶ್ ಸ್ಯಾಲಿ ಅವರನ್ನು ಬಂಧಿಸಲಾಗಿದೆ. ಈ ಸ್ಫೋಟಕ್ಕಾಗಿ ಭಯೋತ್ಪಾದಕರ ಯೋಜನೆ ಮತ್ತು ಅವರಿಗೆ ಸಹಾಯ ಮಾಡುವಲ್ಲಿ ಸ್ಯಾಲಿ ಪ್ರಮುಖ ಪಾತ್ರ ವಹಿಸಿದ್ದಾರೆಂಬ ಆರೋಪವಿದೆ. ರಾಜಪಕ್ಸೆ ಕುಟುಂಬಕ್ಕೆ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಲು ದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸ್ಯಾಲಿ ಈ ಬಾಂಬ್ ಸ್ಫೋಟಗಳನ್ನು ಮಾಡಿಸಿದ್ದಾರೆಂದು ಬ್ರಿಟನ್‌ನ ‘ಚಾನೆಲ್ 4’ ಸುದ್ದಿ ಸಂಸ್ಥೆಯ ಸಾಕ್ಷ್ಯಚಿತ್ರವೊಂದು ಹೇಳಿದೆ.

ಭಾರತವು ಈ ಬಾಂಬ್ ಸ್ಫೋಟಗಳಿಗಿಂತ ಕೆಲವು ವಾರಗಳ ಮೊದಲೇ ಶ್ರೀಲಂಕಾದ ಗುಪ್ತಚರ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿತ್ತು; ಆದರೂ ಬಾಂಬ್ ಸ್ಫೋಟಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಸ್ಫೋಟಗಳಲ್ಲಿ 250ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗಳನ್ನು ಸ್ಥಳೀಯ ಜಿಹಾದಿ ಸಂಘಟನೆಗಳಾದ ನ್ಯಾಷನಲ್ ತೌಹೀದ್ ಜಮಾತ್ (NTJ) ಮತ್ತು ಜಮಿಯಾತುಲ್ ಮಿಲಾತು ಇಬ್ರಾಹಿಂ ಜಂಟಿಯಾಗಿ ನಡೆಸಿದ್ದವು. ಸ್ಫೋಟದ ಸಮಯದಲ್ಲಿ ಶ್ರೀಲಂಕಾದಲ್ಲಿ ರಾನಿಲ್ ವಿಕ್ರಮಸಿಂಘೆ ಅವರ ಸರಕಾರವಿತ್ತು. ಈ ಘಟನೆಯ ಬಳಿಕ ಗುಪ್ತಚರ ಇಲಾಖೆಯ ವೈಫಲ್ಯದ ಬಗ್ಗೆ ವಿಕ್ರಮಸಿಂಘೆ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.