ಜಬಲ್ಪುರ (ಮಧ್ಯಪ್ರದೇಶ): ಇಲ್ಲಿ ಮದ್ಯಪಾನ ಮಾಡಿ ಶಿವಲಿಂಗದ ಬಳಿ ಮೂತ್ರ ವಿಸರ್ಜನೆ ಮಾಡಿದ ರಿಜ್ವಾನ್!

ಜಬಲ್ಪುರ (ಮಧ್ಯಪ್ರದೇಶ) – ಇಲ್ಲಿನ ಗಢಾ ಪ್ರದೇಶದಲ್ಲಿ ರಿಜ್ವಾನ್ ಎಂಬ ಯುವಕ ಮದ್ಯಪಾನ ಮಾಡಿ ಶಿವ ದೇವಾಲಯಕ್ಕೆ ಪ್ರವೇಶಿಸಿ, ಶಿವಲಿಂಗದ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆತ ಕಟ್ಟೆಯ ಮೇಲೆಯೂ ಮೂತ್ರ ವಿಸರ್ಜನೆ ಮಾಡಿ ನಂತರ ಅಲ್ಲಿಯೇ ಮಲಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜನರು ರಿಜ್ವಾನ್‌ನನ್ನು ಥಳಿಸಿದ್ದಾರೆ. ಬಜರಂಗದಳ ಮತ್ತು ಇತರ ಹಿಂದೂ ಸಂಘಟನೆಗಳು ಮಧ್ಯಪ್ರವೇಶಿಸಿ ರಿಜ್ವಾನ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ರಿಜ್ವಾನ್ ಕಾಲಿ ಮೊಹಲ್ಲಾದ ನಿವಾಸಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಕುರಾನ್, ಅಲ್ಲಾ ಮುಂತಾದ ಧಾರ್ಮಿಕ ವಿಷಯಗಳಿಗೆ ಅವಮಾನ ಮಾಡಿದವರಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ; ಆದರೆ ಆರೋಪಿಗಳು ಜನರ ಕೈಗೆ ಸಿಕ್ಕರೆ, ಮುಸ್ಲಿಮರು ಅವರನ್ನು ಕೊಂದು ಹಾಕುತ್ತಾರೆ. ಭಾರತದಲ್ಲಿ ಇಂತಹ ಕಠಿಣ ಕಾನೂನುಗಳನ್ನು ಏಕೆ ಜಾರಿಗೆ ತರುತ್ತಿಲ್ಲ?