ಕುಟುಂಬದವರಿಗೆ ಅಗತ್ಯವಿದ್ದಷ್ಟು ಸಹಾಯ ಮಾಡಿ ಇತರ ಸಮಯದಲ್ಲಿ ಸೇವೆಗಾಗಿಯೇ ಹೆಚ್ಚು ಮಹತ್ವ ನೀಡಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗದಲ್ಲಿ ಸಾಧಕಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸೌ. ಅಶ್ವಿನಿ ಕಾರ್ತಿಕ ಸಾಳುಂಕೆ : ‘ನನ್ನ ಮಗ ಚಿ. ಪದ್ಮನಾಭ (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೫ ವರ್ಷ) ಇವನು ಬೆಳಗ್ಗೆ ಶಾಲೆಗೆ ಹೋಗುತ್ತಾನೆ. ಅವನು ಶಾಲೆಯಿಂದ ಮನೆಗೆ ಬಂದ ನಂತರ ನಾನು ಸೇವೆಗಾಗಿ ಆಶ್ರಮಕ್ಕೆ ಹೋಗುತ್ತೇನೆ. ನಾನು ಮಧ್ಯಾಹ್ನ ಮನೆಯಲ್ಲಿರುವುದಿಲ್ಲ ಮತ್ತು ನಾನು ಆಶ್ರಮದಿಂದ ಸಾಯಂಕಾಲ ಮನೆಗೆ ಹೋದ ನಂತರ ದಣಿದಿರುತ್ತೇನೆ. ಆದ್ದರಿಂದ ನನಗೆ ಪದ್ಮನಾಭನ ಕಡೆಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ‘ನಾನು ಪದ್ಮನಾಭನ ಕಡೆಗೆ ದುರ್ಲಕ್ಷಿಸುತ್ತಿಲ್ಲವಲ್ಲ ? ನಾನು ಅವನಿಗಾಗಿ ಸಮಯ ಕೊಡಲು ಕಡಿಮೆ ಬೀಳುತ್ತಿದ್ದೇನೆಯೇ ?’, ಎಂಬ ವಿಚಾರಗಳು ಬರುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇಲ್ಲ. ‘ಸಾಧನೆ ಮತ್ತು ಕುಟುಂಬ ಇದರಲ್ಲಿ ಯಾವುದು ಹೆಚ್ಚು ಶ್ರೇಷ್ಠ ?’, ಎಂಬುದನ್ನು ಸಾಧನೆ ಮಾಡುವವರಿಗೆ ಮಾತ್ರ ತಿಳಿಯುತ್ತದೆ. ‘ಜನ್ಮಜನ್ಮಾಂತರಗಳಲ್ಲಿ ನನ್ನ ಎಷ್ಟೋ ಕುಟುಂಬಗಳು ಆಗಿರಬಹುದು ?’, ಎಂಬ ವಿಚಾರ ಮಾಡಿ ಸಾಧನೆಗಾಗಿಯೇ ಹೆಚ್ಚು ಮಹತ್ವವನ್ನು ನೀಡಬೇಕು. ‘ನೀನು ಸಾಧನೆ ಮತ್ತು ಸೇವೆಯ ಕಡೆಗೆ ಹೆಚ್ಚು ಗಮನ ಕೊಡುತ್ತಿರುವೆ’, ಹಾಗಾಗಿ ಪದ್ಮನಾಭನ ಕಡೆಗೆ ದುರ್ಲಕ್ಷ್ಯವಾಗುತ್ತದೆ’, ಎಂದಾಗುವುದಿಲ್ಲ. ನೀನು ಅವನಿಗೆ ಅಗತ್ಯವಿದ್ದಷ್ಟು ಎಲ್ಲವನ್ನು ಮಾಡುತ್ತಿರುವೆ.’