ಬಾಗಪತ್ (ಉತ್ತರ ಪ್ರದೇಶ) ನಲ್ಲಿ ಗಣರಾಜ್ಯೋತ್ಸವದಂದು ಮದರಸಾದಿಂದ ನಡೆದ ಮೆರವಣಿಗೆಯಲ್ಲಿ ಮಕ್ಕಳಿಂದ ‘ಅಲ್ಲಾಹು ಅಕ್ಬರ್’ ಘೋಷಣೆ !

(ಅಲ್ಲಾಹು ಅಕ್ಬರ್ ಎಂದರೆ ಅಲ್ಲಾಹನು ಶ್ರೇಷ್ಠನು)

ಬಾಗಪತ್ (ಉತ್ತರ ಪ್ರದೇಶ) – ಇಲ್ಲಿನ ಗೌನಾ ಗ್ರಾಮದಲ್ಲಿ ಗಣರಾಜ್ಯೋತ್ಸವದಂದು ಹಮ್ಮಿಕೊಂಡಿದ್ದ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಮಕ್ಕಳು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದರಸಾ ಸಂಚಾಲಕರು ಈ ಮೆರವಣಿಗೆಯನ್ನು ನಡೆಸಿದ್ದರು. ಹಿಂದೂ ಸಂಘಟನೆಗಳು ಬಾಗಪತ್ ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬದಂದು ಇಂತಹ ಘೋಷಣೆಗಳನ್ನು ಕೂಗುವುದು ತಪ್ಪು ಮತ್ತು ಈ ಬಗ್ಗೆ ತನಿಖೆಯಾಗಬೇಕು ಎಂಬುದು ಅವರ ವಾದವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಮದರಸಾಗಳಲ್ಲಿ ಏನು ಕಲಿಸಲಾಗುತ್ತದೆಯೋ ಅದನ್ನೇ ಮಕ್ಕಳು ಹೇಳುವುದರಿಂದ, ದೇಶದಿಂದ ಮದರಸಾಗಳನ್ನು ಶಾಶ್ವತವಾಗಿ ಮುಚ್ಚುವುದೇ ಇದಕ್ಕೆ ಏಕೈಕ ಪರಿಹಾರವಾಗಿದೆ!
  • ಇಂತಹ ಘೋಷಣೆಗಳ ಮೂಲಕ ಈ ಮಕ್ಕಳಿಗೆ ‘ದೇಶಕ್ಕಿಂತ ತಮ್ಮ ಧರ್ಮವೇ ಮುಖ್ಯ’ ಎಂದು ಹೇಳಬೇಕಿದೆ ಎಂಬುದನ್ನು ಗಮನಿಸಿ! ನಾಳೆ ‘ಗಜ್ವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಗುರಿಯಿಂದ ಪ್ರೇರಿತರಾಗಿ ಇದೇ ಮಕ್ಕಳು ಈ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಮುಂದೆ ಬಂದರೂ ಆಶ್ಚರ್ಯಪಡಬೇಕಿಲ್ಲ!