ಗುರುಬೋಧ

ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ

೧. ಅಕ್ಷರಗಳ ಎಲ್ಲಾ ಆಯಾಮಗಳು (ಅಂದರೆ ವಿಸ್ತಾರ ಅಥವಾ ವಿವಿಧ ಅರ್ಥಗಳು) ಯಾವಾಗ ನಮಗೆ ತಿಳಿಯುತ್ತವೆಯೋ, ಆಗ ನಿಜವಾದ ಅರ್ಥದಲ್ಲಿ ‘ಅಕ್ಷರ’ವು ನಮಗೆ ಅರ್ಥವಾಯಿತು ಎಂದರ್ಥ. ಆ ಸ್ಥಿತಿಯೇ ‘ಅಕ್ಷರಾತೀತ’ ಸ್ಥಿತಿಯಾಗಿರುತ್ತದೆ.

೨. ಗುರುತತ್ತ್ವವು ವರ್ಣಿಸಲು ಅಸಾಧ್ಯವಾದದ್ದು. ಅದು ಬುದ್ಧಿಗೆ ನಿಲುಕುವಂತಹದ್ದಲ್ಲ. ಅದನ್ನು ಅಂತರಂಗದಲ್ಲಿ ಅನುಭವಿಸಬೇಕು. ಅದು ಸರ್ವವ್ಯಾಪಿಯಾಗಿದೆ. ಈ ಜಗತ್ತಿನಲ್ಲಿ ಮತ್ತು ಪರಲೋಕದಲ್ಲಿಯೂ ಅದು ಇಲ್ಲದ ಜಾಗವೇ ಇಲ್ಲ.

– ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ