೧೯ ವರ್ಷಗಳ ನಂತರ ಮತ್ತೆ ಒಂದಾಗಲಿರುವ ಜಗದ್ಗುರುಗಳು Delhi Gomata Rashtramata Abhiyan

  • ಗೋರಕ್ಷಣೆಗಾಗಿ ದೆಹಲಿಯಲ್ಲಿ ನಾಲ್ಕೂ ಪೀಠಗಳ ಶಂಕರಾಚಾರ್ಯರು ಒಂದೇ ವೇದಿಕೆಗೆ

  • ಸನಾತನ ಪರಂಪರೆಯ ಪಾಲಿಗೆ ಐತಿಹಾಸಿಕ ಕ್ಷಣ

ನವದೆಹಲಿ – ಗೋಮಾತೆಯ ರಕ್ಷಣೆಗಾಗಿ ದೆಹಲಿಯಲ್ಲಿ ಮಾರ್ಚ್ ೧೦, ೨೦೨೬ ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ‘ಗೋಮಾತಾ ರಾಷ್ಟ್ರಮಾತಾ ಅಭಿಯಾನ’ದ ವೇದಿಕೆಯ ಮೂಲಕ ದೇಶದ ನಾಲ್ಕೂ ಪೀಠಗಳ ಶಂಕರಾಚಾರ್ಯರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಗೋರಕ್ಷಣೆಗಾಗಿ ಪುರಿ ಪೀಠದ ಶಂಕರಾಚಾರ್ಯರಾದ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಮೊದಲಿನಿಂದಲೂ ಆಂದೋಲನ ನಡೆಸುತ್ತಿದ್ದಾರೆ. ಗೋವುಗಳ ರಕ್ಷಣೆಯ ವ್ರತವನ್ನು ಕೈಗೊಳ್ಳಲು ಅವರು ತಮ್ಮ ಸಿಂಹಾಸನ ಮತ್ತು ಛತ್ರಿಯನ್ನು ತ್ಯಜಿಸಿದ್ದಾರೆ.

ಇದಕ್ಕೂ ಮೊದಲು ಮೇ ೧೯, ೨೦೦೭ ರಂದು ಕರ್ನಾಟಕದ ಬೆಂಗಳೂರಿನಲ್ಲಿ ರಾಮಸೇತು ವಿಷಯವಾಗಿ ಒಂದು ಪರಿಷತ್ತನ್ನು ಆಯೋಜಿಸಲಾಗಿತ್ತು. ಈ ಪರಿಷತ್ತಿನಲ್ಲಿ ನಾಲ್ಕೂ ಪೀಠಗಳ ಶಂಕರಾಚಾರ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶೃಂಗೇರಿಯಲ್ಲಿ ಮೊದಲ ‘ಚತುಷ್ಪೀಠ ಪರಿಷತ್ತು’ ಕ್ರಿ.ಶ. ೧೭೭೯ ರಲ್ಲಿ ನಡೆದಿತ್ತು. ಆಗ ನಾಲ್ಕೂ ಶಂಕರಾಚಾರ್ಯರು ಭಾಗವಹಿಸಿದ್ದರು. ಧಾರ್ಮಿಕ ಇತಿಹಾಸದಲ್ಲಿ ಮೂರನೇ ಬಾರಿಗೆ ನಾಲ್ಕೂ ಪೀಠಗಳ ಶಂಕರಾಚಾರ್ಯರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಸನಾತನ ಪರಂಪರೆಯ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಲಿದೆ.