ಬಾಂಗ್ಲಾದೇಶದಲ್ಲಿನ ಭಾರತೀಯ ಹೈಕಮಿಷನ್ ಅಧಿಕಾರಿಗಳ ಕುಟುಂಬದವರನ್ನು ವಾಪಸ್ ಕರೆಸಿಕೊಂಡ ಸರಕಾರ !

ಬಾಂಗ್ಲಾದೇಶ: ಚುನಾವಣೆಯ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಭಾರತ ಸರಕಾರದ ಮಹತ್ವದ ನಿರ್ಧಾರ

ನವ ದೆಹಲಿ – ಬಾಂಗ್ಲಾದೇಶದಲ್ಲಿ ಕಳೆದ ಒಂದು ವರ್ಷದಿಂದ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಹತ್ಯೆಗಳೂ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ ೧೨ ರಂದು ಬಾಂಗ್ಲಾದೇಶದಲ್ಲಿ ಸಂಸತ್ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರಕಾರವು ಸುರಕ್ಷತೆಯ ಕಾರಣಗಳಿಂದಾಗಿ ಬಾಂಗ್ಲಾದೇಶದಲ್ಲಿರುವ ಭಾರತೀಯ ಅಧಿಕಾರಿಗಳ ಕುಟುಂಬದವರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ.

ಸುರಕ್ಷತೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಹೈಕಮಿಷನ್ ಮತ್ತು ಇತರ ಹುದ್ದೆಗಳಲ್ಲಿರುವ ನಮ್ಮ ಅಧಿಕಾರಿಗಳ ಕುಟುಂಬದವರಿಗೆ ಭಾರತಕ್ಕೆ ಮರಳುವಂತೆ ಸಲಹೆ ನೀಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಾಂಗ್ಲಾದೇಶದ ಢಾಕಾದಲ್ಲಿ ಭಾರತದ ಹೈಕಮಿಷನ್ ಕಚೇರಿಯಿದೆ ಮತ್ತು ಚಟಗಾಂವ, ಖುಲನಾ, ರಾಜಶಾಹಿ ಹಾಗೂ ಸಿಲಹಟ್ ನಲ್ಲಿ ಇತರ ರಾಜತಾಂತ್ರಿಕ ಕಚೇರಿಗಳಿವೆ.