“ಮುಂದಿನ ಚುನಾವಣೆಯಲ್ಲಿ ಮುಂಬ್ರಾ ಅನ್ನು ಹಸಿರು ಬಣ್ಣ ಬಳಿದು ವಿರೋಧಕರನ್ನು ಓಡಿಸುತ್ತೇವೆ!”(ಅಂತೆ)

ಮುಂಬಯಿ: ನೂತನ ನಗರಸೇವಕಿ ಸೆಹರ್ ಶೇಖ್ ಅವರ ಬೆದರಿಕೆ!

ಮುಂಬ್ರಾ (ಠಾಣೆ ಜಿಲ್ಲೆ) – “ನಮಗೆ 5 ವರ್ಷಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ ಇದಕ್ಕಿಂತಲೂ ದೊಡ್ಡ ಯಶಸ್ಸನ್ನು (2026ರ ಮಹಾನಗರ ಪಾಲಿಕೆ ಚುನಾವಣೆಯ ಯಶಸ್ಸಿಗಿಂತ ಹೆಚ್ಚಿನದು) ಸಾಧಿಸಬೇಕಿದೆ. ಅವರಿಗೆ (ಹಿಂದೂಗಳಿಗೆ) ತಕ್ಕ ಪ್ರತ್ಯುತ್ತರ ನೀಡಬೇಕಿದೆ. 5 ವರ್ಷಗಳ ನಂತರ ಮುಂಬ್ರಾದಲ್ಲಿ ಪ್ರತಿಯೊಬ್ಬ ವಿಜಯಿ ಅಭ್ಯರ್ಥಿಯೂ ಎಂ.ಐ.ಎಂ. (ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದವರೇ ಆಗಿರಲಿದ್ದಾರೆ. ಮುಂಬ್ರಾವನ್ನು ಹಸಿರು ಬಣ್ಣದಿಂದ ಆವರಿಸಿ, ಈ ಜನರನ್ನು (ಹಿಂದೂಗಳನ್ನು) ಇಲ್ಲಿಂದ ಓಡಿಸಬೇಕಿದೆ,” ಎಂದು ಮುಂಬ್ರಾದ ವಾರ್ಡ್ ಸಂಖ್ಯೆ 30 ರಿಂದ ಆಯ್ಕೆಯಾದ ನೂತನ ನಗರಸೇವಕಿ ಸೆಹರ್ ಶೇಖ್ ಬೆದರಿಕೆ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಅವರು ಈ ಮಾತುಗಳನ್ನಾಡಿದರು.

ಈ ವಾರ್ಡ್‌ನಿಂದ ಎಂ.ಐ.ಎಂ. ಪಕ್ಷದ ನಫೀಸ್ ಅನ್ಸಾರಿ, ಶೇಖ್ ಸುಲ್ತಾನಾ ಅಬ್ದುಲ್ ಮನ್ನನ್ ಮತ್ತು ಡೋಂಗ್ರೆ ಶೋಯೆಬ್ ಫರೀದ್ ಕೂಡ ಅಭ್ಯರ್ಥಿಗಳಾಗಿ ವಿಜಯ ಸಾಧಿಸಿದ್ದಾರೆ.

  • ಹೊರಹಾಕುವ ಮಾತನ್ನಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸಿದ ಮತ್ತು ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಸೆಹರ್ ಶೇಖ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ?
  • ಈಗಿನಿಂದಲೇ ಇಂತಹ ದ್ವೇಷಪೂರಿತ ಹೇಳಿಕೆಗಳನ್ನು ನೀಡುವ ನಗರಸೇವಕಿ, ಮುಂದೆ ಇತರ ಧರ್ಮದವರ ಬಗ್ಗೆ ಹೇಗೆ ಆಡಳಿತ ನಡೆಸಬಹುದು ಎಂಬುದನ್ನು ಊಹಿಸದಿದ್ದರೇ ಲೇಸು!
  • ಹಿಂದೂಗಳೇ, ‘ಮುಂಬ್ರಾ ಪ್ರದೇಶವನ್ನು ಹಸಿರು ಬಣ್ಣದಿಂದ ಆವರಿಸುವುದೆಂದರೆ ಅದು ಮುಸ್ಲಿಮರ ಜನಸಂಖ್ಯಾ ಜಿಹಾದ್’ ಎಂಬುದನ್ನು ನೆನಪಿನಲ್ಲಿಡಿ!
  • ಇಂದು ಕೇವಲ ಮುಂಬ್ರಾ ಪ್ರದೇಶದ ಬಗ್ಗೆ ಈ ಹೇಳಿಕೆ ನೀಡಲಾಗಿದೆ, ನಾಳೆ ಎಂಐಎಂನ ಪ್ರತಿಯೊಬ್ಬ ನಗರಸೇವಕರೂ ಇಂತಹ ದ್ವೇಷಪೂರಿತ ಪ್ರಚಾರ ಮಾಡಿದರೆ, ಮಹಾರಾಷ್ಟ್ರದ ಹಿಂದೂಗಳಿಗೆ ಅಪಾಯದ ಮುನ್ಸೂಚನೆಯಾಗಲಿದೆ!