‘ಕಾಶ್ಮೀರದಲ್ಲಿ ಮಸೀದಿ ಮತ್ತು ಮದರಸಾಗಳ ಮಾಹಿತಿ ಸಂಗ್ರಹಿಸಿ ಮುಸ್ಲಿಮರನ್ನು ಭಯಭೀತಗೊಳಿಸಲು ಭಾರತದ ಪ್ರಯತ್ನ!’(ಅಂತೆ)

ಭಾರತವನ್ನು ಟೀಕಿಸಿದ ಪಾಕಿಸ್ತಾನ

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವು ಜಮ್ಮು-ಕಾಶ್ಮೀರದಲ್ಲಿ ಮಸೀದಿ ಮತ್ತು ಮದರಸಾಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಇದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಪ್ರಕಟಣೆಯನ್ನು ಹೊರಡಿಸಿ, ಈ ಕ್ರಮವು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ‘ಧಾರ್ಮಿಕ ವಿಷಯಗಳಲ್ಲಿನ ಬಹಿರಂಗ ಹಸ್ತಕ್ಷೇಪವು ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಜಮ್ಮು-ಕಾಶ್ಮೀರದ ಮುಸ್ಲಿಮರನ್ನು ಭಯಭೀತಗೊಳಿಸಿ ಮೂಲೆಗುಂಪು ಮಾಡುವ ಮತ್ತೊಂದು ಬಲವಂತದ ಪ್ರಯತ್ನವಾಗಿದೆ’ ಎಂದು ಪಾಕಿಸ್ತಾನ ಆರೋಪಿಸಿದೆ.

ಪಾಕಿಸ್ತಾನಿ ವಿದೇಶಾಂಗ ಸಚಿವಾಲಯವು, ಧಾರ್ಮಿಕ ಅಧಿಕಾರಿಗಳ ವೈಯಕ್ತಿಕ ಮಾಹಿತಿ, ಛಾಯಾಚಿತ್ರಗಳು ಮತ್ತು ಪಂಥೀಯ ಸಂಬಂಧಗಳನ್ನು ಸಂಗ್ರಹಿಸುವುದು ಯೋಜಿತ ಕಿರುಕುಳಕ್ಕೆ ಸಮಾನವಾಗಿದೆ ಎಂದು ಹೇಳಿದೆ. ‘ಧರ್ಮ ಪಾಲಿಸುವವರಲ್ಲಿ ಭಯವನ್ನು ಸೃಷ್ಟಿಸುವುದು ಮತ್ತು ಅವರ ಧರ್ಮವನ್ನು ಮುಕ್ತವಾಗಿ ಪಾಲಿಸುವುದಕ್ಕೆ ಅಡ್ಡಿಪಡಿಸುವುದು’ ಇದರ ಹಿಂದಿನ ಉದ್ದೇಶವಾಗಿದೆ ಎಂದು ಅದು ತಿಳಿಸಿದೆ. ಪಾಕಿಸ್ತಾನವು ಯಾವಾಗಲೂ ಕಾಶ್ಮೀರಿ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಅವರನ್ನು ಗುರಿಯಾಗಿಸುವ ಎಲ್ಲಾ ರೀತಿಯ ಧಾರ್ಮಿಕ ಕಿರುಕುಳದ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತದೆ ಎಂದು ಹೇಳಿಕೊಂಡಿದೆ.

ಸಂಪಾದಕೀಯ ನಿಲುವು

  • ‘ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಇಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು? ಎಂದು ಹೇಳಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ’, ಎಂದು ಭಾರತವು ತೀಕ್ಷ್ಣವಾಗಿ ಹೇಳಬೇಕಿದೆ!
  • ಭಾರತವು ಪಾಕಿಸ್ತಾನದಂತೆಯೇ ಅಲ್ಲಿನ ಹಿಂದೂಗಳ ರಕ್ಷಣೆಯ ವಿಷಯವನ್ನು ಏಕೆ ಪ್ರಸ್ತಾಪಿಸುತ್ತಿಲ್ಲ?