ಸಂಸತ್ತಿನಿಂದ ಸ್ವಾತಂತ್ರ್ಯವೀರ ಸಾವರ್ಕರ್ ಅವರ ತೈಲ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿದ್ದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ವಜಾ !

ನವದೆಹಲಿ – ಸಂಸತ್ತಿನ ಸೆಂಟ್ರಲ್ ಹಾಲ್ (ಮಧ್ಯವರ್ತಿ ಸಭಾಗೃಹ) ಮತ್ತು ಸಾರ್ವಜನಿಕ ಸ್ಥಳಗಳಿಂದ ಸ್ವಾತಂತ್ರ್ಯವೀರ ಸಾವರ್ಕರ್ ಅವರ ತೈಲ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಅರ್ಜಿಯನ್ನು ನಿವೃತ್ತ ನಾಗರಿಕ ಸೇವಾ ಅಧಿಕಾರಿ ಬಿ. ಬಾಲಮುರುಗನ್ ಸಲ್ಲಿಸಿದ್ದರು. ‘ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ವಿಧಿಸಬಹುದು’ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಬಾಲಮುರುಗನ್ ಅವರಿಗೆ ಎಚ್ಚರಿಕೆ ನೀಡಿತು. ಈ ಅರ್ಜಿಯಲ್ಲಿ, ‘ಗಂಭೀರ ಅಪರಾಧಗಳು ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗಳ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಸರಕಾರ ಅವರನ್ನು ಗೌರವಿಸಬಾರದು’ ಎಂಬ ಬೇಡಿಕೆಯನ್ನು ಸಹ ಇಡಲಾಗಿತ್ತು.

೧. ‘ಆರ್ಥಿಕ ಸಂಕಷ್ಟದಿಂದಾಗಿ ವಾದ ಮಂಡಿಸಲು ದೆಹಲಿಗೆ ಬರಲು ಸಾಧ್ಯವಿಲ್ಲ’ ಎಂದು ಬಾಲಮುರುಗನ್ ಹೇಳಿದ್ದರು. ಇದಕ್ಕೆ ನ್ಯಾಯಾಲಯ ಅವರನ್ನು ತರಾಟೆಗೆ ತೆಗೆದುಕೊಂಡು, ನೀವು ಒಬ್ಬ ನಾಗರಿಕ ಸೇವಾ ಅಧಿಕಾರಿಯಾಗಿದ್ದವರು, ದೆಹಲಿಗೆ ಬಂದು ನಿಮ್ಮ ಪರ ವಾದ ಮಂಡಿಸಬಹುದು. ನಾವು ನಿಮಗೆ ಭಾರೀ ದಂಡ ವಿಧಿಸಬಹುದು. ನೀವು ನಿಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಿ? ಎಂದು ಪ್ರಶ್ನಿಸಿತು.

೨. ನ್ಯಾಯಾಲಯವು ಬಾಲಮುರುಗನ್ ಅವರಿಗೆ, ದಯವಿಟ್ಟು ಇಂತಹ ವಿವಾದಗಳಲ್ಲಿ ಸಿಲುಕಬೇಡಿ. ನಿವೃತ್ತ ಜೀವನವನ್ನು ಆನಂದಿಸಿ. ಸಮಾಜದಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಿ ಎಂದು ತಿಳಿಸಿತು. ಇದರ ನಂತರ ಬಾಲಮುರುಗನ್ ಅವರು ಅರ್ಜಿಯನ್ನು ಹಿಂಪಡೆದರು.

ಸಂಪಾದಕೀಯ ನಿಲುವು

ಇಂತಹ ಅರ್ಜಿಗಳನ್ನು ಸಲ್ಲಿಸುವವರಿಗೆ ಕಪ್ಪು ನೀರಿನ ಶಿಕ್ಷೆಯನ್ನೇ ವಿಧಿಸಬೇಕು !