ಹೀಗಾದರೆ ಮುಂಬಯಿ ‘ಮಹಮ್ಮದ್ ಲ್ಯಾಂಡ್’ ಆಗಲಿದೆ ! – ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ ರಾಣೆ ಎಚ್ಚರಿಕೆ : Nithesh Rane

ಉದ್ಧವ್ ಠಾಕ್ರೆ ಮತ್ತು ನಿತೇಶ್ ರಾಣೆ

ಮುಂಬಯಿ – ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ ಹೆಸರನ್ನು ಮತ್ತೆ ‘ಬಾಂಬೆ’ ಎಂದು ಬದಲಾಯಿಸಲು ಸಾಧ್ಯವೇ ಇಲ್ಲ. ಆದರೆ ಒಂದು ವೇಳೆ ಉದ್ಧವ ಠಾಕ್ರೆ ಅಧಿಕಾರಕ್ಕೆ ಬಂದರೆ ಅವರು ಮುಂಬಯಿಯನ್ನು ಖಂಡಿತವಾಗಿಯೂ ‘ಮಹಮ್ಮದ್ ಲ್ಯಾಂಡ್’ ಮಾಡಲಿದ್ದಾರೆ ಎಂದು ರಾಜ್ಯದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ ರಾಣೆ ಹೇಳಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ಅವರು ಮಾತನಾಡುತ್ತಾ, ಹಿಂದೆ ‘ಶಿವಸೇನೆ ಇದೆ; ಹಾಗಾಗಿ ಮುಂಬಯಿ ಸುರಕ್ಷಿತವಾಗಿದೆ’ ಎಂದು ಹೇಳಲಾಗುತ್ತಿತ್ತು. ಆದರೆ ಈಗ ‘ಉದ್ಧವ ಠಾಕ್ರೆ ಇದ್ದಾರೆ; ಹಾಗಾಗಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಇದ್ದಾರೆ’ ಎನ್ನುವ ಹೊಸ ಸಮೀಕರಣ ಸೃಷ್ಟಿಯಾಗಿದೆ. ಉದ್ಧವ ಠಾಕ್ರೆ ಅವರ ಆಡಳಿತವಿರುವ ಮುಂಬಯಿಯಲ್ಲಿ ‘ಟಿಸ್ಸ್’(ಟಿ.ಐಎಸ್.ಎಸ್.) ವರದಿಯ ಪ್ರಕಾರ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.