ಬಂಗಾಳದಲ್ಲಿ ಭಾಜಪದ ನಾಯಕನ ಶಿರಚ್ಛೇದಿಸುವುದಾಗಿ ಅನಾಮಧೇಯರಿಂದ ಭಿತ್ತಿಪತ್ರದ ಮೂಲಕ ಬೆದರಿಕೆ!!

ಭಯೋತ್ಪಾದನೆಗೆ ಹೆದರುವುದಿಲ್ಲ! – ಭಾಜಪದ ಪ್ರತ್ಯುತ್ತರ

ಕೋಲಕಾತಾ (ಬಂಗಾಳ) – ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಿಂಗಲಗಂಜ ಪ್ರದೇಶದಲ್ಲಿ ಭಾಜಪ ನಾಯಕ ತರುಣ ಮಂಡಲ ಅವರ ಶಿರಚ್ಛೇದಿಸುವುದಾಗಿ ಬೆದರಿಕೆ ಹಾಕುವ ಪೋಸ್ಟರ್ಗಳನ್ನು ಹಚ್ಚಲಾಗಿದೆ. ಅಷ್ಟೇ ಅಲ್ಲದೆ, “ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರು ಇಲ್ಲಿ ಸಭೆ ನಡೆಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದೂ ಆ ಭಿತ್ತಿಪತ್ರಗಳಲ್ಲಿ ಬರೆಯಲಾಗಿದೆ.

ಭಾಜಪವು ಈ ಭಿತ್ತಿಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಹಿಂಗಲಗಂಜನಲ್ಲಿ ಪ್ರಜಾಪ್ರಭುತ್ವದ ಮೇಲೆಯೇ ದಾಳಿ ನಡೆಯುತ್ತಿದೆ” ಎಂದು ಆರೋಪಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಪ್ರಜಾಪ್ರಭುತ್ವದ ಸ್ವಾತಂತ್ರ್ಯ, ಭಿನ್ನಾಭಿಪ್ರಾಯದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜಾಗವಿಲ್ಲದಂತಾಗಿದೆ ಎಂದು ಭಾಜಪ ಹೇಳಿದೆ. ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಮರಣದ ಬೆದರಿಕೆಯೇ ಶಿಕ್ಷೆಯಾಗಿ ಬಿಟ್ಟಿದೆ. ಇಂತಹ ಬೆದರಿಕೆಗಳ ಮೂಲಕ ವಿರೋಧ ಪಕ್ಷದವರ ಬಾಯಿಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಜನಮತ ಕುಸಿಯುತ್ತಿರುವುದರಿಂದ ತೃಣಮೂಲ ಕಾಂಗ್ರೆಸ್  ಕಾರ್ಯಕರ್ತರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಗುಂಡಾಗಿರಿಗೆ ಹೆದರದೆ 2026ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಹಾಕುವುದಾಗಿ ಭಾಜಪಯು ನಿರ್ಧಾರ ವ್ಯಕ್ತಪಡಿಸಿದೆ.

ಸಂಪಾದಕೀಯ ನಿಲುವು

ಬಂಗಾಳ ಎಂದರೆ ಎರಡನೇ ಬಾಂಗ್ಲಾದೇಶವಾಗಿದೆ. “ಬಂಗಾಳದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸರಕಾರವು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿಯೂ ಏನನ್ನೂ ಮಾಡುತ್ತಿಲ್ಲ!”