
ಕಾನ್ಪುರ (ಉತ್ತರ ಪ್ರದೇಶ) – ಮ್ಯಾನ್ಮಾರ್ನ ರೋಹಿಂಗ್ಯಾ ನುಸುಳುಕೋರ ಮುಸ್ಲಿಮರನ್ನು ಭಾರತದಲ್ಲಿ ಕಾನೂನುಬಾಹಿರವಾಗಿ ನೆಲೆಸುವಂತೆ ಮಾಡುತ್ತಿದ್ದ ಗ್ಯಾಂಗ್ನ ಮೊಹಮ್ಮದ್ ಇಬ್ರಾಹಿಂ ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಭಾರತದ 12 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ಈತ ನೆಲೆಸುವಂತೆ ಮಾಡಿದ್ದಾನೆ ಎಂಬ ಶಂಕೆಯಿದೆ. ರೋಹಿಂಗ್ಯಾ ನುಸುಳುಕೋರರ ಜಾಲವು ಮ್ಯಾನ್ಮಾರ್, ನಂತರ ಬಾಂಗ್ಲಾದೇಶ ಮತ್ತು ಅಲ್ಲಿಂದ ಭಾರತದ ಅಸ್ಸಾಂನಿಂದ ಕಾಶ್ಮೀರದವರೆಗೆ ಹರಡಿದೆ. ಗುರುತು ಸಿಗದಂತೆ ಇವರು ಬೇರೆ ಬೇರೆ ರಾಜ್ಯಗಳಲ್ಲಿ ಅಡಗಿ ಕುಳಿತಿರುವುದು ಕಂಡುಬಂದಿದೆ.
1. ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ ಬಂಧಿತರಾದ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಹಸಿಮ್ ಅಲಿಯಾಸ್ ನಾಸಿರ್ ಮತ್ತು ಶೋಕತಾರಾ ನೀಡಿದ ಮಾಹಿತಿಯ ಪ್ರಕಾರ, ಇವರು ಮೂಲತಃ ಮ್ಯಾನ್ಮಾರ್ನ ನಾಸಾಫುರು ಜಿಲ್ಲೆಯ ಮೊಗಂಡೋ ರಾಖಿನ ಪ್ರದೇಶದವರು. ಇವರು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ವಾಸವಾಗಿದ್ದರು.
2. ಮೊಹಮ್ಮದ್ ಇಬ್ರಾಹಿಂ 2017ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದನು. ಸ್ವಲ್ಪ ಸಮಯ ದೆಹಲಿಯಲ್ಲಿ ವಾಸವಿದ್ದ ಈತ 2024ರಲ್ಲಿ ಜಮ್ಮುವಿಗೆ ತೆರಳಿದ್ದನು. ಆನಂತರ ಬಾಂಗ್ಲಾದೇಶದಿಂದ ರೋಹಿಂಗ್ಯಾಗಳನ್ನು ಭಾರತಕ್ಕೆ ಕರೆತಂದು ನೆಲೆಸುವಂತೆ ಮಾಡುವ ಕೆಲಸದಲ್ಲಿ ಸಕ್ರಿಯನಾದನು. ತನಿಖಾ ಸಂಸ್ಥೆಗಳು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಸಂಪಾದಕೀಯ ನಿಲುವುಇಂತಹವರಿಗೂ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರುವುದು ಈಗ ಅತ್ಯಗತ್ಯವಾಗಿದೆ! |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!