ಔತಣ ಕೂಟದ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಹಿಂದೂತ್ವನಿಷ್ಠರು ಮತ್ತು ಕ್ರೈಸ್ತರ ನಡುವೆ ಘರ್ಷಣೆ Jabalpur Hawabagh Conversion Racket

ಜಬಲ್ಪುರ (ಮಧ್ಯಪ್ರದೇಶ) ಘಟನೆ

ಜಬಲ್ಪುರ (ಮಧ್ಯಪ್ರದೇಶ) – ಇಲ್ಲಿನ ಹವಾಬಾಗ ಚರ್ಚ್‌ ನಲ್ಲಿ ಡಿಸೆಂಬರ್ ೨೦ ರಂದು ಔತಣಕೂಟದ ಹೆಸರಿನಲ್ಲಿ ಹಿಂದೂ ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ದೊಡ್ಡ ವಿವಾದ ಉಂಟಾಯಿತು. ಈ ಘಟನೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಕ್ರೈಸ್ತ ಸಮುದಾಯದ ನಡುವೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

೧. ಸಿಕ್ಕಿರುವ ಮಾಹಿತಿಯ ಪ್ರಕಾರ, ಕ್ರೈಸ್ತ ಸಮುದಾಯದ ವತಿಯಿಂದ ವಿಕಲಚೇತನ ಮಕ್ಕಳಿಗಾಗಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಿವುಡ, ಮೂಗ ಮತ್ತು ದೃಷ್ಟಿಹೀನರಾದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳು ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

೨. ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಭಾಜಪ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ಔತಣಕೂಟದ ಮಾಧ್ಯಮದಿಂದ ಅಸಹಾಯಕ ಮಕ್ಕಳನ್ನು ಮತಾಂತರಕ್ಕೆ ಆಕರ್ಷಿಸಲಾಗುತ್ತಿದೆ, ಎಂದು ಅವರು ಆರೋಪಿಸಿದರು. ಕ್ರೈಸ್ತ ಸಮುದಾಯವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದೊಂದು ಕೇವಲ ಸಾಮಾಜಿಕ ಚಟುವಟಿಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

೩. ವಿವಾದ ಉಲ್ಬಣಗೊಂಡ ನಂತರ ಎರಡೂ ಕಡೆಯವರು ಪರಸ್ಪರರ ಮೇಲೆ ದಾಳಿ ಮಾಡಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ.