‘ಆದಿವಾಸಿ ಸಮುದಾಯವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು!’

ಲೋಕಸಭೆ: ಹಿಂದೂ-ದ್ವೇಷಿ ಬೇಡಿಕೆಯಿಟ್ಟ ಕಾಂಗ್ರೆಸ್ ಸಂಸದ ಗೋವಾಲ ಕಾಗಡಾ ಪಡ್ವಿ!

ನವದೆಹಲಿ – ಮಹಾರಾಷ್ಟ್ರದ ನಂದುರ್ಬಾರ್‌ನ ಕಾಂಗ್ರೆಸ್ ಸಂಸದ ಗೋವಾಲ ಕಾಗಡಾ ಪಡ್ವಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ, ಆದಿವಾಸಿ ಸಮುದಾಯವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ಅವರಿಗೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. 1931ರಲ್ಲಿ ಬ್ರಿಟಿಷರು ನಡೆಸಿದ ಜನಗಣತಿಯಲ್ಲಿ ಆದಿವಾಸಿಗಳನ್ನು ಸ್ವತಂತ್ರ ಗುಂಪಿನಲ್ಲಿ ಎಣಿಸಲಾಗಿತ್ತು ಮತ್ತು ಅವರ ಸಂಸ್ಕೃತಿಯು ಯಾವುದೇ ಸ್ಥಿರ ಧರ್ಮದಲ್ಲಿ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದರು. (ಭಾರತದಲ್ಲಿ ಅಧಿಕಾರ ಅನುಭವಿಸಲು ಬ್ರಿಟಿಷರ ‘ಒಡೆದು ಆಳುವ’ ನೀತಿಯನ್ನು ಅನುಸರಿಸುವ ಮೂಲಕ ಹಿಂದೂಗಳಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಿದರು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಕೂಡ ಇದೇ ನೀತಿಯನ್ನು ಅನುಸರಿಸುವ ಮೂಲಕ ಹಿಂದೂಗಳನ್ನು ಸಂಘಟಿತರಾಗಲು ಬಿಡಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)

೧. ಪಡ್ವಿ ಅವರ ಅಭಿಪ್ರಾಯದಂತೆ, ‘ಸ್ವತಂತ್ರ ಧರ್ಮ’ ಎಂದು ಆದಿವಾಸಿಗಳಿಗೆ ಗುರುತು ಸಿಕ್ಕರೆ, ಸಮುದಾಯದ ಸಾಂಸ್ಕೃತಿಕ ಗುರುತು ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ಅವರ ಸಂಪ್ರದಾಯಗಳು ಸಂರಕ್ಷಿಸಲ್ಪಡುತ್ತವೆ.

೨. ಈ ಹೇಳಿಕೆ ಮುನ್ನೆಲೆಗೆ ಬಂದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಆದಿವಾಸಿ ಸಂಪ್ರದಾಯಗಳು ಶತಮಾನಗಳಿಂದ ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ ಮತ್ತು ಪ್ರಕೃತಿ ಪೂಜೆಯು ಹಿಂದೂ ಸಂಪ್ರದಾಯದ ಮೂಲಾಧಾರವಾಗಿದೆಯೆಂದು ಹಲವರು ಉದಾಹರಣೆಗಳೊಂದಿಗೆ ತಿಳಿಸಿದರು.

೩. ಈ ವಿವಾದದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಈ ಹೇಳಿಕೆಯು ಸಮಾಜದಲ್ಲಿ ಬಿರುಕು ಮೂಡಿಸುವಂತಿದೆ ಮತ್ತು ರಾಷ್ಟ್ರದ ಐಕ್ಯತೆಯ ವಿರುದ್ಧವಾಗಿದೆ ಎಂದು ಬಿಜೆಪಿ ನಾಯಕರು ಟೀಕಿಸಿದರು.