ಸತ್ತರೂ ಪರವಾಗಿಲ್ಲ; ‘ವಂದೇ ಮಾತರಂ’ ಹೇಳುವುದಿಲ್ಲ! : Maulana Arshad Madani

ಜಮೀಯತ್ ಉಲೇಮಾ-ಎ-ಹಿಂದ್ ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರ ಹೇಳಿಕೆ

ಮೌಲಾನಾ ಅರ್ಷದ್ ಮದನಿ

ದೇವಬಂದ (ಉತ್ತರಪ್ರದೇಶ): ಪ್ರಾಣ ಬಿಡುತ್ತೇನೆ; ಆದರೆ ‘ವಂದೇ ಮಾತರಂ’ ಹೇಳುವುದಿಲ್ಲ. ನಾವು ಇತರರಿಗೆ ಈ ರಾಷ್ಟ್ರಗೀತೆಯನ್ನು ಓದುವುದಕ್ಕೆ ಅಥವಾ ಹಾಡುವುದಕ್ಕೆ ಆಕ್ಷೇಪಿಸುವುದಿಲ್ಲ; ಆದರೆ ಮುಸಲ್ಮಾನರು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಇಲ್ಲಿನ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರು ಹೇಳಿಕೆ ನೀಡಿದರು.

ಮದನಿ ಅವರು ಮಂಡಿಸಿದ ಅಂಶಗಳು

. ‘ವಂದೇ ಮಾತರಂ’ ಗೀತೆಯ ಕೆಲವು ಭಾಗ ಇಸ್ಲಾಂಗೆ ವಿರುದ್ಧವಿರುವ ನಂಬಿಕೆಗಳನ್ನು ಆಧರಿಸಿದೆ. ಗೀತೆಯ ೪ ಪದ್ಯಗಳಲ್ಲಿ ದೇಶವನ್ನು ದೇವರೆಂದು ಭಾವಿಸಿ, ಅದನ್ನು ದೇವತೆಗೆ ಹೋಲಿಸುವುದು ಮತ್ತು ಪೂಜಿಸುವುದು ಮುಂತಾದ ಪದಗಳನ್ನು ಬಳಸಲಾಗಿದೆ. ಇದು ಮುಸಲ್ಮಾನರ ಮೂಲಭೂತ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿಲ್ಲ.

. ದೇಶವನ್ನು ಪ್ರೀತಿಸುವುದು ಒಂದು ವಿಷಯ, ಮತ್ತು ಅದನ್ನು ಪೂಜಿಸುವುದು ಬೇರೆ ವಿಷಯ. ಮುಸಲ್ಮಾನರು ಅಲ್ಲಾನನ್ನು ಮಾತ್ರ ಪ್ರಾರ್ಥಿಸಬಹುದು. ಆದ್ದರಿಂದ ನಮಗೆ ಮರಣ ಸ್ವೀಕಾರವಿದೆ; ಆದರೆ ಅಲ್ಲಾಹನ ಜೊತೆಗೆ ಬೇರೆ ಯಾರಿಗೂ ಸಮಾನ ಸ್ಥಾನ ನೀಡುವುದನ್ನು ಒಪ್ಪಲಾರೆವು.

. ‘ವಂದೇ ಮಾತರಂ’ ಎಂದರೆ ‘ಅಮ್ಮಾ, ನಾನು ನಿನ್ನನ್ನು ಪೂಜಿಸುತ್ತೇನೆ’ ಎಂದರ್ಥ. ಇದು ಮುಸಲ್ಮಾನರ ಶ್ರದ್ಧೆಗೆ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿಯೇ ಯಾರಿಗೂ ಅವರ ಧರ್ಮಕ್ಕೆ ವಿರುದ್ಧವಾದ ಯಾವುದೇ ಘೋಷಣೆ ಅಥವಾ ಗೀತೆಯನ್ನು ಹೇಳಲು ಒತ್ತಾಯಿಸಲು ಸಾಧ್ಯವಿಲ್ಲ.

. ಸಂವಿಧಾನದ ಕಲಂ ೨೫ (ಧಾರ್ಮಿಕ ಸ್ವಾತಂತ್ರ್ಯ) ಮತ್ತು ಕಲಂ ೧೯ (ಅಭಿವ್ಯಕ್ತಿ ಸ್ವಾತಂತ್ರ್ಯ) ರ ಅಡಿಯಲ್ಲಿ, ನಾಗರಿಕರ ಮೇಲೆ ಇಂತಹ ಒತ್ತಡ ಹೇರುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ.

. ಮುಸಲ್ಮಾನರು ತಮ್ಮ ದೇಶಭಕ್ತಿಯ ಯಾವುದೇ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಮತ್ತು ದೇಶದ ವಿಭಜನೆಯ ವಿರುದ್ಧ ಜಮೀಯತ್ ಉಲೇಮಾ-ಎ-ಹಿಂದ್ ಈಗಾಗಲೇ ತನ್ನ ನಿಲುವನ್ನು ದಾಖಲಿಸಿದೆ.

. ವರ್ಷ ೧೯೩೭ ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ನೆಹರೂ ಅವರಿಗೆ: ‘ವಂದೇ ಮಾತರಂ’ನ ಮೊದಲ ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರಗೀತೆಯಾಗಿ ಸ್ವೀಕರಿಸಬೇಕು; ಏಕೆಂದರೆ ಉಳಿದ ಭಾಗದ ಬಗ್ಗೆ ಇತರ ಧರ್ಮದವರಿಗೆ ಆಕ್ಷೇಪ ಇರಬಹುದು ಎಂದು ಸಲಹೆ ನೀಡಿದ್ದರು. ಇದೇ ಶಿಫಾರಸ್ಸಿನ ಪ್ರಕಾರ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಮೊದಲ ೨ ಪದ್ಯಗಳಿಗೆ ಸಮ್ಮತಿ ನೀಡಿತ್ತು. ಇಂದು ಟ್ಯಾಗೋರ್ ಅವರ ಹೆಸರಿನಲ್ಲಿ ಸಂಪೂರ್ಣ ಗೀತೆಯನ್ನು ಓದುವ ಬೇಡಿಕೆಯು ಐತಿಹಾಸಿಕ ಸಂಗತಿಗಳ ವಿರುದ್ಧವಾಗಿದೆ.

ಸಂಪಾದಕೀಯ ನಿಲುವು

  • ಜಮೀಯತ್ ಅಧ್ಯಕ್ಷರಿಂದ ಇದಕ್ಕಿಂತ ಬೇರೆ ನಿರೀಕ್ಷೆ ಏನು ಮಾಡಲು ಸಾಧ್ಯ ?
  • ಧರ್ಮದ ಆಧಾರದಲ್ಲಿ ಭಾರತದ ವಿಭಜನೆಯಾಗಿ ಮುಸಲ್ಮಾನರಿಗೆ ‘ಪಾಕಿಸ್ತಾನ’ ಎಂಬ ದೇಶವನ್ನು ನೀಡಲಾಯಿತು; ಆದರೆ ಪಾಕಿಸ್ತಾನಕ್ಕಾಗಿ ಬೇಡಿಕೆ ಮಾಡುತ್ತಿದ್ದವರೇ ಅಲ್ಲಿಗೆ ಹೋಗಲಿಲ್ಲ. ಅವರಲ್ಲಿಯೇ ಬಹುತೇಕ ಜನರು ಇಂದು ‘ವಂದೇ ಮಾತರಂ’ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈಗ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ‘ವಂದೇ ಮಾತರಂ’ ಹೇಳುವುದನ್ನು ಕಡ್ಡಾಯಗೊಳಿಸುವ ಸಮಯ ಬಂದಿದೆ !