ಬಾಂಗ್ಲಾದೇಶದಲ್ಲಿ ವೃದ್ಧ ಹಿಂದೂ ದಂಪತಿಯ ಕತ್ತು ಸೀಳಿ ಹತ್ಯೆ! – Bangladesh Hindu Couple Murdered

ರಂಗಪುರ (ಬಾಂಗ್ಲಾದೇಶ) – ಇಲ್ಲಿ ೧೯೭೧ರ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದ ಸೈನಿಕರಾದ ಯೋಗೇಶ ಚಂದ್ರ ರಾಯ್ (ವಯಸ್ಸು ೭೫) ಮತ್ತು ಅವರ ಪತ್ನಿ ಸುವರ್ಣಾ ರಾಯ್ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಡಿಸೆಂಬರ್ ೭ರಂದು ಬೆಳಿಗ್ಗೆ ಇಬ್ಬರ ಮೃತದೇಹಗಳು ಅವರ ಮನೆಯಲ್ಲಿ ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇದುವರೆಗೂ ಯಾವುದೇ ಪ್ರಕರಣ ದಾಖಲಿಸಿಲ್ಲ ಹಾಗೂ ಯಾರನ್ನೂ ಬಂಧಿಸಿಲ್ಲ. ಈ ದಂಪತಿ ಗ್ರಾಮದ ಮನೆಯಲ್ಲಿ ಏಕಾಂಗಿಯಾಗಿದ್ದರು. ಅವರ ಇಬ್ಬರು ಪುತ್ರರಾದ ಶೋವೇನ ಚಂದ್ರ ರಾಯ್ ಮತ್ತು ರಾಜೇಶ ಖನ್ನಾ ಚಂದ್ರ ರಾಯ್ ಬಾಂಗ್ಲಾದೇಶ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು! ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುತ್ತಿರುವಾಗ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ, ಇದು ಹಿಂದೂಗಳಿಗೆ ಲಜ್ಜ್ಯಾಸ್ಪದ!